(ಸಾಂಕೇತಿಕ ಚಿತ್ರ) 
ದೇಶ

ನನ್ನ ದೇಹದಲ್ಲಿ ಹ್ಯಾಕರ್ ಗಳು ಚಿಪ್ ಇಟ್ಟಿದ್ದಾರೆ: ವ್ಯಕ್ತಿಯ ಆರೋಪ ಆಧರಿಸಿ ತನಿಖೆಗೆ ಕೋರ್ಟ್ ಆದೇಶ!

ಹ್ಯಾಕರ್ ಗಳು ಚಿಪ್ ಇಟ್ಟಿದ್ದಾರೆ ಈ ಮೂಲಕ ತನ್ನ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ ಮಾಡಿದಾರೆ ಎಂದು ಮುಂಬೈ ನ ವ್ಯಕ್ತಿಯೋರ್ವ ಆರೋಪ ಮಾಡಿದ್ದಾರೆ.

ಮುಂಬೈ: ಹ್ಯಾಕರ್ ಗಳು ಚಿಪ್ ಇಟ್ಟಿದ್ದಾರೆ ಈ ಮೂಲಕ ತನ್ನ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ ಮಾಡಿದಾರೆ ಎಂದು ಮುಂಬೈ ನ ವ್ಯಕ್ತಿಯೋರ್ವ ಆರೋಪ ಮಾಡಿದ್ದಾರೆ.

ಬೊರಿವಾಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಬಿಎನ್ ಚಿಕ್ನೆ ಈ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದಾರೆ. 

ಆದಷ್ಟು ಬೇಗ ಅಂತಿಮ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ, ದೂರಿಗೆ ಸಂಬಂಧಿಸಿದ ದಾಖಲೆಗಳನ್ನು ಅಗತ್ಯ ಕ್ರಮಕ್ಕಾಗಿ ಚಾರ್ಕೋಪ್ ಪೊಲೀಸ್ ಠಾಣೆಯ ಸೈಬರ್ ಕ್ರೈಮ್‌ಗೆ ರವಾನಿಸಬೇಕು ಎಂದು ಹೇಳಿದೆ.

ಸೋನಾವಾನೆ ಎಂಬುವವರ ಪ್ರಕಾರ ತಮ್ಮ ದೇಹಕ್ಕೆ ಕೆಲವು ಅನಾಮಿಕರು ಮೈಕ್ರೋಚಿಪ್ ಹಾಕುವ ಮೂಲಕ ಹ್ಯಾಕರ್ ತನ್ನ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ ಎಂಬ ಅನುಮಾನವಿದೆ ಎಂದು ಅವರು ಹೇಳಿದ್ದಾರೆ.

ಪಾಸ್‌ವರ್ಡ್‌ಗಳನ್ನು ಬದಲಾಯಿಸುವಂತಹ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಹ್ಯಾಕರ್ ತನ್ನ ಹೊಸ ಜಿಮೇಲ್ ಖಾತೆ ಸೇರಿದಂತೆ ತನ್ನ ಖಾತೆಗಳಿಗೆ ಲಾಗ್ ಇನ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. 

ಇದರಿಂದ ತನಗೆ ಸಾಕಷ್ಟು ಹಾನಿಯಾಗಿದೆ ಎಂದು ವಕೀಲ ಪ್ರಕಾಶ್ ಸಾಲ್ಸಿಂಗಿಕರ್ ಮೂಲಕ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕೆಲವು ಅಪರಿಚಿತ ವ್ಯಕ್ತಿಗಳು ತಮ್ಮ ಹೃದಯ ಬಡಿತವನ್ನು ಅನೇಕ ಸಂದರ್ಭಗಳಲ್ಲಿ ಹೆಚ್ಚಿಸಲು ಮೈಕ್ರೋಚಿಪ್ ಅನ್ನು ಬಳಸುತ್ತಿದ್ದಾರೆ ಮತ್ತು ಹೀಗಾಗಿ, ಅವರ ಜೀವಕ್ಕೆ ಅಪಾಯವಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಸೋನಾವಾನೆ ಅವರ ಅರ್ಜಿ ಮತ್ತು ಅಫಿಡವಿಟ್ ಅನ್ನು ಪರಿಶೀಲಿಸಿದ ನಂತರ, ನ್ಯಾಯಾಲಯವು, ಪ್ರಾಥಮಿಕವಾಗಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಅಪರಾಧಗಳನ್ನು ಬಹಿರಂಗಪಡಿಸಲಾಗಿದೆ ಎಂದು ತೋರುತ್ತಿದೆ.  ಅಂತಹ ಸಂದರ್ಭಗಳಲ್ಲಿ, ಸೈಬರ್ ಅಪರಾಧಗಳಿಗಾಗಿ ವಿಶೇಷವಾಗಿ ನೇಮಕಗೊಂಡ ಪೊಲೀಸರ ಮೂಲಕ ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಸುವುದು ಅವಶ್ಯಕ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT