ರಾಮ ಮಂದಿರಕ್ಕೆ ಚಿನ್ನದ ಬಾಗಿಲು ನಿರ್ಮಾಣ ಕಾರ್ಯ 
ದೇಶ

ಅಯೋಧ್ಯೆ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಪೂರ್ವ ಆಚರಣೆ ಆರಂಭ: ಜ.21ರವರೆಗೆ ಕಾರ್ಯಕ್ರಮಗಳು ಹೀಗಿವೆ...

ಜನವರಿ 22ರ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದ ಪೂರ್ವಭಾವಿ ಆಚರಣೆಗಳು ಮಂಗಳವಾರ ಅಯೋಧ್ಯೆಯ ದೇವಾಲಯದ ಸಂಕೀರ್ಣದಲ್ಲಿ ಆರಂಭವಾಗಿವೆ. 

ಅಯೋಧ್ಯೆ: ಜನವರಿ 22ರ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದ ಪೂರ್ವಭಾವಿ ಆಚರಣೆಗಳು ಮಂಗಳವಾರ ಅಯೋಧ್ಯೆಯ ದೇವಾಲಯದ ಸಂಕೀರ್ಣದಲ್ಲಿ ಆರಂಭವಾಗಿವೆ. 

ಈ ಕಾರ್ಯಕ್ರಮಗಳು ಜನವರಿ 21 ರವರೆಗೆ ಮುಂದುವರಿಯುತ್ತದೆ. ಜನವರಿ 22 ರಂದು, ರಾಮಲಲ್ಲಾ ವಿಗ್ರಹದ "ಪ್ರಾಣ ಪ್ರತಿಷ್ಠಾ" (ಪ್ರತಿಷ್ಠಾಪನೆ) ಗೆ ಅಗತ್ಯವಾದ ಕನಿಷ್ಠ ಅಗತ್ಯ ಆಚರಣೆಗಳನ್ನು ನಡೆಸಲಾಗುವುದು ಎಂದು ದೇವಸ್ಥಾನದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ರಾಮ ಲಲ್ಲಾ ಪ್ರತಿಷ್ಠಾಪನೆ ಅನುಷ್ಠಾನ ಆಚರಣೆಗಳು ಪ್ರಾರಂಭವಾಗಿದೆ. ಜನವರಿ 22 ರಂದು ಪವಿತ್ರೀಕರಣದ ದಿನದವರೆಗೆ ಮುಂದುವರಿಯುತ್ತದೆ. ಹನ್ನೊಂದು ಅರ್ಚಕರು ಎಲ್ಲಾ ದೇವತೆಗಳ ಆವಾಹನೆ ಮಾಡುವ ಆಚರಣೆಗಳನ್ನು ನಡೆಸುತ್ತಿದ್ದಾರೆ ಎಂದು ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ಪ್ರಾಣ ಪ್ರತಿಷ್ಠಾಪನೆಯಲ್ಲಿ ಏಳು ಅಧಿವಾಸಗಳಿವೆ ಮತ್ತು ಕನಿಷ್ಠ ಮೂರು ಅಧಿವಾಸಗಳು ಆಚರಣೆಯಲ್ಲಿವೆ ಎಂದು ಟ್ರಸ್ಟ್ ಹೇಳಿದೆ. 121 "ಆಚಾರ್ಯರು" ಆಚರಣೆಗಳನ್ನು ನಡೆಸುತ್ತಿದ್ದಾರೆ. ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು "ಅನುಷ್ಠಾನ" ದ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆ, ಸಮನ್ವಯ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.

ಪ್ರಧಾನ "ಆಚಾರ್ಯ" ಕಾಶಿಯ ಲಕ್ಷ್ಮೀಕಾಂತ್ ದೀಕ್ಷಿತ್. ರಾಮಮಂದಿರ "ಪ್ರಾಣ ಪ್ರತಿಷ್ಠಾ" ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ಪ್ರಾರಂಭವಾಗಲಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ "ಪ್ರಾಣ ಪ್ರತಿಷ್ಠಾಪನೆ"ಗೆ ಮುಂಚಿನ ಆಚರಣೆಗಳು "ಪ್ರಾಯಶ್ಚಿತ್ತ" ಮತ್ತು "ಕರ್ಮಕುಟಿ ಪೂಜೆ" ಯೊಂದಿಗೆ ಪ್ರಾರಂಭವಾಯಿತು.

ಜನವರಿ 17 ರಂದು, ವಿಗ್ರಹದ "ಪರಿಸರ ಪ್ರವೇಶ" ಪೂರ್ಣಗೊಳ್ಳಲಿದೆ, ನಂತರ ಜನವರಿ 18 ರಂದು ತೀರ್ಥ ಪೂಜೆ, ಜಲ ಯಾತ್ರೆ ಮತ್ತು ಗಂಧಧಿವಾಸ್ ಮತ್ತು ಜನವರಿ 19ರಂದು ಔಷಧ ಧಿವಾಸ್, ಕೇಸರ ಧಿವಾಸ್, ಘೃತಾ ಧಿವಾಸ್ ಮತ್ತು  ಧಾನ್ಯ ಧಿವಾಸ್ ನಡೆಯಲಿದೆ. ಜನವರಿ 20 ರಂದು ಶರ್ಕರಾ ಧಿವಾಸ್, ಫಲಾ ಧಿವಾಸ್ ಮತ್ತು ಪುಷ್ಪ ಧಿವಾಸ್ ಗೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಜನವರಿ 21 ರಂದು, ವೇಳಾಪಟ್ಟಿಯ ಪ್ರಕಾರ, ಮಧ್ಯಾಧಿವಾ ಮತ್ತು ಶೈಯಾಧಿವಾ ಆಚರಣೆಗಳು ಪೂರ್ಣಗೊಳ್ಳುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT