ಸಿಜೆಐ ಚಂದ್ರಚೂಡ್  online desk
ದೇಶ

ನ್ಯಾಯಾಧೀಶರು ಸಂವಿಧಾನದ ಮಾಸ್ಟರ್ ಗಳಲ್ಲ, ಸೇವಕರು: CJI

ಜನತೆ ಕೋರ್ಟ್ ಗಳನ್ನು ನ್ಯಾಯದ ದೇಗುಲವೆಂದು ಕರೆಯುತ್ತಾರೆ. ಅಂದರೆ ನ್ಯಾಯಾಧೀಶರು ದೇವರೆಂಬ ಅರ್ಥ ಬರುತ್ತದೆ. ಆದರೆ ನಾವು ಸಹಾನುಭೂತಿಯಿಂದ ನ್ಯಾಯ ಒದಗಿಸುವ ಜನತೆಯ ಸೇವಕರು ಎಂದು ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ: ನ್ಯಾಯಶಾಸ್ತ್ರದಲ್ಲಿ ಸಾಂವಿಧಾನಿಕ ನೈತಿಕತೆಯನ್ನು ಮೂಡಿಸುವ ಮಹತ್ವದ ಬಗ್ಗೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಡಿವೈ ಚಂದ್ರಚೂಡ್, ವೈವಿಧ್ಯತೆ, ಒಳಗೊಳ್ಳುವಿಕೆ ಮತ್ತು ಸಹಿಷ್ಣುತೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯಗಳ ಬದ್ಧತೆಯನ್ನು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಪೂರ್ವ ವಲಯ II ಪ್ರಾದೇಶಿಕ ಸಮ್ಮೇಳನದ 2 ನೇ ದಿನ ಮಾತನಾಡಿರುವ ಸಿಜೆಐ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ತಾಂತ್ರಿಕ ಪ್ರಗತಿಗಳ ಪ್ರಾಮುಖ್ಯತೆಯ ಮೇಲೆ ತಮ್ಮ ಮಾತುಗಳನ್ನು ಕೇಂದ್ರೀಕರಿಸಿದರು.

ಜನತೆ ಕೋರ್ಟ್ ಗಳನ್ನು ನ್ಯಾಯದ ದೇಗುಲವೆಂದು ಕರೆಯುತ್ತಾರೆ. ಅಂದರೆ ನ್ಯಾಯಾಧೀಶರು ದೇವರೆಂಬ ಅರ್ಥ ಬರುತ್ತದೆ. ಆದರೆ ನಾವು ಸಹಾನುಭೂತಿಯಿಂದ ನ್ಯಾಯ ಒದಗಿಸುವ ಜನತೆಯ ಸೇವಕರು ಎಂದು ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಧೀಶರುಗಳು ಸಂವಿಧಾನದ ಒಡೆಯರಲ್ಲ (masters) ನಾವು ಸಂವಿಧಾನದ ಸೇವಕರಷ್ಟೇ ಎಂದು ಹೇಳಿರುವ ಸಿಜೆಐ, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ವಿರುದ್ಧವಾದ ತೀರ್ಪುಗಳಲ್ಲಿ ಮಧ್ಯಪ್ರವೇಶಿಸುವ ನ್ಯಾಯಾಧೀಶರ ವೈಯಕ್ತಿಕ ಮೌಲ್ಯಗಳು ಮತ್ತು ನಂಬಿಕೆಯ ವ್ಯವಸ್ಥೆಗಳ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

"ನಾವು ಸಾಂವಿಧಾನಿಕ ವ್ಯಾಖ್ಯಾನದ ಪಂಡಿತರಾಗಿರಬಹುದು ಆಗಿರಬಹುದು, ಆದರೆ ಸಾಂವಿಧಾನಿಕ ನೈತಿಕತೆಯ ನ್ಯಾಯಾಲಯದ ದೃಷ್ಟಿಯೊಂದಿಗೆ ನ್ಯಾಯಯುತ ಸಮಾಜವನ್ನು ಸ್ಥಾಪಿಸಲಾಗಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT