ಕೊಲೆಯಾದ ಯುವಕ 
ದೇಶ

ಮದುವೆಗೆ ಕೆಲವೇ ಗಂಟೆಗಳ ಮೊದಲು ಮಗನನ್ನೆ ಹತ್ಯೆ ಮಾಡಿದ ತಂದೆ!

ಮಗನ ಮದುವೆಗೆ ಕೆಲವೇ ಗಂಟೆ ಬಾಕಿ ಇರುವ ಹೊತ್ತಲ್ಲೇ ಜಿಮ್‌ ಮಾಲೀಕನೊಬ್ಬ ತನ್ನ ಮಗನನ್ನೇ ಹತ್ಯೆ ಮಾಡಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ನವದೆಹಲಿ: ಮಗನ ಮದುವೆಗೆ ಕೆಲವೇ ಗಂಟೆ ಬಾಕಿ ಇರುವ ಹೊತ್ತಲ್ಲೇ ಜಿಮ್‌ ಮಾಲೀಕನೊಬ್ಬ ತನ್ನ ಮಗನನ್ನೇ ಹತ್ಯೆ ಮಾಡಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಗೌರವ್ ಸಿಂಘಾಲ್ (29) ಎಂಬಾತನನ್ನು ಆತನ ತಂದೆ ರಂಗಲಾಲ್ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ರಂಗಲಾಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಗೌರವ್‌ ತನ್ನ ಮದುವೆಯ ಮೆರವಣಿಗೆಗೆ ಹೊರಟಿದ್ದ. ಈ ವೇಳೆ ಆತನ ತಂದೆಯೇ ಚೂಪಾದ ಆಯುಧ ಬಳಸಿ ಕೊಂದಿದ್ದಾನೆ.

ಗೌತಮ್‌ ಜಿಮ್ ನಡೆಸುತ್ತಿದ್ದ. ದೇವ್ಲಿ ಎಕ್ಸ್‌ಟೆನ್ಶನ್‌ನಲ್ಲಿರುವ ಮನೆಯಲ್ಲೇ ಆತನ ಎದೆಗೆ 15 ಬಾರಿ ಇರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜಿಮ್‌ ಮಾಲೀಕನಾಗಿರುವ ಗೌರವ್‌ ಸಿಂಘಾಲ್ ಅವರಿಗೆ ಮದುವೆ ಇಷ್ಟವಿರಲಿಲ್ಲ. ಆದರೆ, ರಂಗಲಾಲ್‌ ಅವರು ಪದೇಪದೆ ಒತ್ತಾಯಿಸಿದ ಕಾರಣ ಅವರು ಮದುವೆಗೆ ಒಪ್ಪಿದ್ದರು.

ಇನ್ನು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಂಗಲಾಲ್‌ ಅವರನ್ನು ಗೌರವ್‌ ಸಿಂಘಾಲ್‌ ಅವರು ಅವಮಾನಿಸುತ್ತಿದ್ದರು. ಎಲ್ಲರ ಎದುರು ಮಗನಿಂದಲೇ ಅವಮಾನಕ್ಕೀಡಾದ ರಂಗಲಾಲ್‌ ಅವರು ಕುದ್ದುಹೋಗಿದ್ದರು. ಬುಧವಾರ ರಾತ್ರಿಯೂ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಕುಪಿತಗೊಂಡ ರಂಗಲಾಲ್‌ ಅವರು ಮಗನನ್ನೇ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಮದುವೆ ಮೆರವಣಿಗೆ ಮಾಡಲು ಮದುಮಗನಿಗಾಗಿ ಜನರು ಕಾಯುತ್ತಿದ್ದರು. ಆದರೆ ಗೌರವ್‌ ಬರಲಿಲ್ಲ. ಅನುಮಾನಗೊಂಡು ಅತಿಥಿಗಳು ಹುಡುಕಾಟ ನಡೆಸಿದ್ದಾರೆ. ಆದರೆ ಪಾರ್ಕ್‌ವೊಂದರಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಸಂಭ್ರಮದ ಮನೆಯಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT