ಸಿಬಿಐ  online desk
ದೇಶ

ಭೂ ಕಬಳಿಕೆ ಪ್ರಕರಣ: ಶಹಜಹಾನ್ ನ ನಾಪತ್ತೆಯಾಗಿರುವ ಸಹೋದರನಿಗೆ ಸಿಬಿಐ ಸಮನ್ಸ್ ಜಾರಿ!

ಕೇಂದ್ರೀಯ ತನಿಖಾ ದಳ (ಸಿಬಿಐ) ಸಂದೇಶ್ ಖಲಿಯಲ್ಲಿ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಶಹಜಹಾನ್ ನ ನಾಪತ್ತೆಯಾಗಿರುವ ಸಹೋದರನಿಗೆ ಸಮನ್ಸ್ ಜಾರಿ ಮಾಡಿದೆ.

ಕೋಲ್ಕತ್ತ: ಕೇಂದ್ರೀಯ ತನಿಖಾ ದಳ (ಸಿಬಿಐ) ಸಂದೇಶ್ ಖಲಿಯಲ್ಲಿ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಶಹಜಹಾನ್ ನ ನಾಪತ್ತೆಯಾಗಿರುವ ಸಹೋದರನಿಗೆ ಸಮನ್ಸ್ ಜಾರಿ ಮಾಡಿದೆ.

ಟಿಎಂಸಿ ನಾಯಕ ಶಹಜಹಾನ್ ಶೇಖ್ ಬಂಧನಕ್ಕೊಳಗಾಗಿದ್ದು, ಪಕ್ಷದಿಂದ ಅಮಾನತುಗೊಂಡಿದ್ದಾರೆ. ಶಹಜಹಾನ್ ಸಹೋದರ ಶೇಖ್ ಸಿರಾಜುದ್ದೀನ್ ಈ ಭೂಕಬಳಿಕೆ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಈಗ ನಾಪತ್ತೆಯಾಗಿದ್ದಾನೆ.

"ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 6 ರಂದು ಕೋಲ್ಕತ್ತಾ ಕಚೇರಿಯಲ್ಲಿ ನಮ್ಮ ಅಧಿಕಾರಿಗಳ ಮುಂದೆ ಹಾಜರಾಗುವಂತೆ ನಾವು ಶಾಜಹಾನ್ ಅವರ ಸಹೋದರನಿಗೆ ಸಮನ್ಸ್ ನೀಡಿದ್ದೇವೆ. ನಮ್ಮ ಅಧಿಕಾರಿಗಳು ಅವರನ್ನು ಹುಡುಕಲು ಅವರ ನಿವಾಸಕ್ಕೆ ಹೋದರು ಆದರೆ ಅವರು ಅಲ್ಲಿ ಇರಲಿಲ್ಲ" ಎಂದು ಅಧಿಕಾರಿ ಪಿಟಿಐಗೆ ತಿಳಿದ್ದಾರೆ.

ಸಿರಾಜುದ್ದೀನ್ ನಿವಾಸದಿಂದ ತೆರಳುವ ಮುನ್ನ ಸಿಬಿಐ ಅಧಿಕಾರಿಗಳು ಅವರ ನಿವಾಸದ ಮುಂಭಾಗ ‘ಸಮನ್ಸ್’ ನೋಟಿಸ್ ಅಂಟಿಸಿದ್ದರು.

ಸಿಬಿಐ ಅಧಿಕಾರಿಗಳ ಮತ್ತೊಂದು ತಂಡ ಬುಧವಾರ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ ಖಾಲಿಯಲ್ಲಿರುವ 'ಶಾಜಹಾನ್ ಮಾರುಕಟ್ಟೆ'ಗೆ ತೆರಳಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅಂಗಡಿಯವರೊಂದಿಗೆ ಮಾತನಾಡಿರುವುದಾಗಿ ಹೇಳಿದೆ.

"ಈ ಉದ್ಯಮಿಗಳು ಶಾಜಹಾನ್‌ಗೆ ನಿಕಟರಾಗಿದ್ದರು ಮತ್ತು ಹಗರಣದಲ್ಲಿ ಪಾತ್ರ ವಹಿಸಿರಬಹುದು. ನಮ್ಮ ಅಧಿಕಾರಿಗಳು ಅವರೊಂದಿಗೆ ಮಾತನಾಡಿದ್ದಾರೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT