ಗುಜರಾತ್ ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮ  
ದೇಶ

ಕುಟುಂಬಕ್ಕೆ ಅದೃಷ್ಟ ತಂದ ಕಾರನ್ನು ಮಣ್ಣು ಮಾಡಿದ ಗುಜರಾತಿ ಕುಟುಂಬ!: ವಿಡಿಯೊ ನೋಡಿ...

ಸಜೀವ ಪ್ರಾಣಿ, ಪಕ್ಷಿಗಳಿಗೆ ಸಮಾಧಿ ಕಾರ್ಯ ಮಾಡುವಂತೆ ಇವರು ನಿರ್ಜೀವ ವಸ್ತುವಾದ ಕಾರಿಗೂ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಅಮ್ರೇಲಿ: ಮನುಷ್ಯರು, ಪ್ರಾಣಿ ಪಕ್ಷಿಗಳು ಸೇರಿದಂತೆ ಜೀವಿಗಳು ಮೃತಪಟ್ಟಾಗ ಸಮಾಧಿ ಮಾಡುವುದು ಕೇಳಿದ್ದೇವೆ, ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ರೈತ ಕುಟುಂಬವೊಂದು ತಮ್ಮ "ಅದೃಷ್ಟ"ದ ವಾಗನರ್ ಕಾರಿಗೆ ಅದ್ಧೂರಿ ಸಮಾಧಿ ಕಾರ್ಯಕ್ರಮವನ್ನು ನಡೆಸಿ ಸುದ್ದಿಯಾಗಿದೆ.

ಸಜೀವ ಪ್ರಾಣಿ, ಪಕ್ಷಿಗಳಿಗೆ ಸಮಾಧಿ ಕಾರ್ಯ ಮಾಡುವಂತೆ ಇವರು ನಿರ್ಜೀವ ವಸ್ತುವಾದ ಕಾರಿಗೆ ಮಾಡಿದ್ದಾರೆ. ಪಾದರ್ಶಿಂಗ ಗ್ರಾಮದಲ್ಲಿ ಸಂಜಯ ಪೋಲಾರ ಮತ್ತು ಅವರ ಕುಟುಂಬದವರು ಆಯೋಜಿಸಿದ್ದ ಸಮಾರಂಭದಲ್ಲಿ ಧರ್ಮಗುರುಗಳು ಮತ್ತು ಆಧ್ಯಾತ್ಮಿಕ ಮುಖಂಡರು ಸೇರಿದಂತೆ ಸುಮಾರು 1,500 ಜನರು ಭಾಗವಹಿಸಿದ್ದರು.

ಸಮಾಧಿ ಕಾರ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೋಲಾರಾ ಮತ್ತು ಅವರ ಕುಟುಂಬವು ತಮ್ಮ ಜಮೀನಿನಲ್ಲಿ 15 ಅಡಿ ಆಳದ ಹೊಂಡದಲ್ಲಿ ಇಳಿಜಾರು ಪ್ರದೇಶದಲ್ಲಿ ಸಮಾಧಿ ಕಾರ್ಯ ನಡೆಸುತ್ತಿರುವುದನ್ನು ನೋಡಬಹುದು.

ಹೂ, ಮಾಲೆಗಳಿಂದ ಅಲಂಕೃತಗೊಂಡಿದ್ದ ಕಾರನ್ನು ಮನೆಯಿಂದ ಪೋಲಾರ ಅವರ ಜಮೀನಿಗೆ ಬಹಳ ಖುಷಿಯಿಂದ ಓಡಿಸಿಕೊಂಡು ಬಂದು ಇಳಿಜಾರಿನಲ್ಲಿ ಇಳಿಸಿದ್ದಾರೆ. ವಾಹನವನ್ನು ಹಸಿರು ಬಟ್ಟೆಯಿಂದ ಮುಚ್ಚಲಾಗಿತ್ತು, ಪುರೋಹಿತರು ಮಂತ್ರ ಪಠಿಸುತ್ತಿದ್ದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ ಗುಲಾಬಿ ದಳಗಳನ್ನು ಸುರಿಸುವುದರ ಮೂಲಕ ಕಾರಿಗೆ ಬೀಳ್ಕೊಟ್ಟರು. ಕೊನೆಗೆ ಅಗೆಯುವ ಯಂತ್ರದಿಂದ ಕಾರಿಗೆ ಮಣ್ಣು ಸುರಿದು ಬೀಳ್ಕೊಟ್ಟರು.

ಸೂರತ್‌ನಲ್ಲಿ ನಿರ್ಮಾಣ ಉದ್ಯಮ ಹೊಂದಿರುವ ಪೋಲಾರಾ, ಮನೆಯಲ್ಲಿ ತಮ್ಮ ಮುಂದಿನ ಜನಾಂಗ ಅದೃಷ್ಟವನ್ನು ನೀಡಿದ ಕಾರನ್ನು ನೆನಪಿಟ್ಟುಕೊಳ್ಳಲು ವಿಭಿನ್ನವಾದದ್ದನ್ನು ಮಾಡಲು ಈ ರೀತಿ ಸಮಾಧಿ ಮಾಡಿದೆ ಎನ್ನುತ್ತಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೋಲಾರಾ, "ನಾನು ಸುಮಾರು 12 ವರ್ಷಗಳ ಹಿಂದೆ ಈ ಕಾರನ್ನು ಖರೀದಿಸಿದೆ, ಇದು ನಮ್ಮ ಕುಟುಂಬಕ್ಕೆ ಸಮೃದ್ಧಿಯನ್ನು ತಂದಿತು. ವ್ಯಾಪಾರದಲ್ಲಿ ಯಶಸ್ಸನ್ನು ನೋಡುವುದರ ಜೊತೆಗೆ ನಮ್ಮ ಕುಟುಂಬಕ್ಕೆ ಗೌರವ ತಂದುಕೊಟ್ಟಿತು. ನನ್ನ ಕುಟುಂಬಕ್ಕೆ ಇದು ತುಂಬಾ ಅದೃಷ್ಟದ ಕಾರು, ಹಾಗಾಗಿ ಕಾರನ್ನು ಮಾರಾಟ ಮಾಡುವ ಬದಲು ಸಮಾಧಿ ಮಾಡಿದೆ ಎನ್ನುತ್ತಾರೆ.

ಸಮಾರಂಭಕ್ಕೆ 4 ಲಕ್ಷ ಖರ್ಚು: ಪೊಲಾರಾ ಅವರು ಸಮಾಧಿ ಕಾರ್ಯಕ್ರಮಕ್ಕೆ 4 ಲಕ್ಷ ಖರ್ಚು ಮಾಡಿದ್ದಾರೆ. ಕಾರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಮುಂದಿನ ಜನಾಂಗ ನೆನಪು ಇಟ್ಟುಕೊಳ್ಳಲು ಗಿಡ ನೆಡಲು ಯೋಜಿಸುತ್ತಿದ್ದಾರೆ. ನಂತರ ಅದು ಬೆಳೆದು ಮರವಾದ ಮೇಲೆ ಅದರಡಿಯಲ್ಲಿ ಕಾರು ಇರುತ್ತದೆ ಎಂಬ ಯೋಚನೆಯಾಗಿದೆ.

ಹಿಂದೂ ಸಂಪ್ರದಾಯ ಪ್ರಕಾರ ಸಮಾಧಿ ಕಾರ್ಯ ನಡೆಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಪ್ತ ಗುಂಪಿನಿಂದ ಸ್ಪೋಟಕ ಸಂದೇಶ, ಡಾ. ಜಿ. ಪರಮೇಶ್ವರ್ ಹೇಳಿದ್ದೇನು?

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

SCROLL FOR NEXT