ಡಬ್ಲ್ಯುಎಂಒ ಪ್ರಧಾನ ಕಾರ್ಯದರ್ಶಿ ಸೆಲೆಸ್ಟ್ ಸೌಲೊ 
ದೇಶ

ಭಾರತಕ್ಕೆ ಹವಾಮಾನ ಅಪಾಯ: 2024ರಲ್ಲಿ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ಮೀರುವ ಆತಂಕ!

ಹವಾಮಾನ ವಿಚಾರದಲ್ಲಿ ಭಾರತವು ಅತ್ಯಂತ ಸಕ್ರಿಯವಾಗಿದೆ ಮತ್ತು ಹವಾಮಾನ ಸೇವೆಗಳನ್ನು ಹೆಚ್ಚಿಸಲು ಉತ್ತಮ ಹೂಡಿಕೆಗಳನ್ನು ಮಾಡುತ್ತಿದೆ. ಆದರೆ, ಭಾರತವು ಇಷ್ಟು ದೊಡ್ಡ ದೇಶವಾಗಿರುವುದರಿಂದ, ಇನ್ನೂ ಸಾಕಷ್ಟು ಸುಧಾರಣೆ ಆಗಬೇಕಿದೆ.

ಬಾಕು: ಭಾರತವು ತನ್ನ ಹವಾಮಾನ ಮೂಲಸೌಕರ್ಯವನ್ನು ಹೆಚ್ಚಿಸಬೇಕು ಮತ್ತು ಜೀವಹಾನಿಯನ್ನು ತಪ್ಪಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡಲು ಹೆಚ್ಚು ದೃಢವಾದ ಎಚ್ಚರಿಕೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಪ್ರಧಾನ ಕಾರ್ಯದರ್ಶಿ ಸೆಲೆಸ್ಟ್ ಸೌಲೊ ಹೇಳಿದ್ದಾರೆ.

ಸೋಮವಾರ ಅಜರ್‌ಬೈಜಾನ್‌ನ ಬಾಕುದಲ್ಲಿ ಆರಂಭವಾದ ಯುನೈಟೆಡ್ ನ್ಯಾಶನಲ್ ಕ್ಲೈಮೇಟ್ ಕಾನ್ಫರೆನ್ಸ್ (COP29) ಕಾರ್ಯಕ್ರಮದಲ್ಲಿ WMO ಹವಾಮಾನ ಸ್ಥಿತಿ 2024 ವರದಿಯನ್ನು ಬಿಡುಗಡೆ ಮಾಡಲಾಗಿದೆ. 2024ರ ವರ್ಷವು ದಾಖಲೆಯ ಅತ್ಯಂತ ಶಾಖದ ವರ್ಷವಾಗಿದೆ ಎಂದು ವರದಿಯು ರೆಡ್ ಅಲರ್ಟ್ ನೀಡಿದೆ.

ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ವರೆಗೆ, ಜಾಗತಿಕ ಸರಾಸರಿ ತಾಪಮಾನವು ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 1.54 ಡಿಗ್ರಿಗಳಷ್ಟು ಹೆಚ್ಚಾಗಿದೆ. ಆದಾಗ್ಯೂ, ದಶಕಗಳಲ್ಲಿ ದೀರ್ಘಾವಧಿಯ ತಾಪಮಾನ ಏರಿಕೆಯ ಕ್ರಮಗಳು 1.5 ಡಿಗ್ರಿಗಿಂತ ಕಡಿಮೆ ಇದೆ ಎಂದು ವರದಿ ಹೇಳಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಪ್ರಧಾನ ಕಾರ್ಯದರ್ಶಿ ಸೆಲೆಸ್ಟ್ ಸೌಲೊ, 'ಭಾರತಕ್ಕೆ ಹೆಚ್ಚಿನ ಹವಾಮಾನ ಅಪಾಯವಿದ್ದು, 2024ರಲ್ಲಿ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ಮೀರುವ ಆತಂಕವಿದೆ. ಈ ಸಂಬಂಧ WMO ಭಾರತೀಯ ಹವಾಮಾನ ಇಲಾಖೆ (IMD) ಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಹವಾಮಾನ ವಿಚಾರದಲ್ಲಿ ಭಾರತವು ಅತ್ಯಂತ ಸಕ್ರಿಯವಾಗಿದೆ ಮತ್ತು ಹವಾಮಾನ ಸೇವೆಗಳನ್ನು ಹೆಚ್ಚಿಸಲು ಉತ್ತಮ ಹೂಡಿಕೆಗಳನ್ನು ಮಾಡುತ್ತಿದೆ. ಆದರೆ, ಭಾರತವು ಇಷ್ಟು ದೊಡ್ಡ ದೇಶವಾಗಿರುವುದರಿಂದ, ಇನ್ನೂ ಸಾಕಷ್ಟು ಸುಧಾರಣೆ ಆಗಬೇಕಿದೆ.

ನಿಗದಿತ ಗುರಿ ತಲುಪುವಲ್ಲಿ ಕೃಷಿ, ಆರೋಗ್ಯ ಮತ್ತು ವಿಪತ್ತು ನಿರ್ವಹಣೆಯಂತಹ ಇತರ ಸಚಿವಾಲಯಗಳು ಸಕ್ರಿಯ ತೊಡಗಿಸಿಕೊಳ್ಳುವಿಕೆ ಅತ್ಯಗತ್ಯ. WMO ಮಾರ್ಚ್‌ನಲ್ಲಿ ಹೆಚ್ಚು ವಿವರವಾದ ವರದಿಯನ್ನು ಬಿಡುಗಡೆ ಮಾಡಲಿದ್ದು, ಹವಾಮಾನ ಬದಲಾವಣೆ ಮತ್ತು ತಾಪಮಾನ ಏರಿಕೆಯಿಂದ ಸಮುದ್ರ ಮಟ್ಟ ಏರಿಕೆಯಾಗುತ್ತಿದೆ. ಇದು ಪ್ರದೇಶವಾರು ಪರಿಣಾಮವನ್ನು ನೋಡುತ್ತದೆ ಎಂದು ಸೌಲೋ ಹೇಳಿದ್ದಾರೆ.

ಕೇರಳ ಭೂ ಕುಸಿತ

ಇದೇ ವೇಳೆ 400 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ವಯನಾಡ್ ಭೂಕುಸಿತ ದುರಂತದ ಕುರಿತು ಮಾತನಾಡಿದ ಸೌಲೋ, 'ಬಹು-ಅಪಾಯಕ್ಕೆ ಮುಂಚೆ ಎಚ್ಚರಿಕೆಯ ಸೂಚನೆ ಸಿಗುತ್ತದೆ. ಒಂದೇ ಸಮಯದಲ್ಲಿ ಅನೇಕ ವಿಷಯಗಳು ನಡೆಯುತ್ತಿವೆ. ನಾವು ಸಮಗ್ರ ರೀತಿಯಲ್ಲಿ ವಿಶ್ಲೇಷಿಸಬೇಕು ಮತ್ತು ಪ್ರತಿಕ್ರಿಯಿಸಬೇಕು. ನಿಕಟವಾಗಿ ಕೆಲಸ ಮಾಡುವ ಮತ್ತು ಅಪಾಯಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಭಾರತವೂ ಸಮುದ್ರ ಮಟ್ಟ ಏರಿಕೆಯ ಭೀತಿ ಎದುರಿಸುತ್ತಿದೆ. ಅದರ ಉದ್ದನೆಯ ಕರಾವಳಿ ಮತ್ತು ಕರಾವಳಿಯ ಬಳಿ ದಟ್ಟವಾದ ಜನಸಂಖ್ಯೆಯೊಂದಿಗೆ, ಅಪಾಯವು ನಮ್ಮ ಮುಂದೆಯೇ ಇದೆ. ಕಣಿವೆಗಳಲ್ಲಿನ ಅಸಮರ್ಪಕ ನಿರ್ಮಾಣಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೌಲೋ ಹೇಳಿದರು.

ಸಮುದ್ರ ಮಟ್ಟ ಹೆಚ್ಚಳ

ಅಂತೆಯೇ 2014-2023ರ ನಡುವಿನ WMO ವರದಿಯು ಜಾಗತಿಕ ಸರಾಸರಿ ಸಮುದ್ರ ಮಟ್ಟವು ಪ್ರತಿ ವರ್ಷಕ್ಕೆ 4.77 ಮಿಮೀ ದರದಲ್ಲಿ ಏರಿದೆ. ಇದು 1993 ಮತ್ತು 2002 ರ ನಡುವಿನ ದರಕ್ಕಿಂತ ಎರಡು ಪಟ್ಟು ಹೆಚ್ಚು. ಎಲ್ ನಿನೋ ಪರಿಣಾಮವು 2023 ರಲ್ಲಿ ಇನ್ನಷ್ಟು ವೇಗವಾಗಿ ಬೆಳೆಯಿತು. ಪ್ರಾಥಮಿಕ 2024 ರ ಡೇಟಾವು ಎಲ್ ನಿನೊದ ಕುಸಿತದೊಂದಿಗೆ, 2014 ರಿಂದ 2022 ರವರೆಗೆ ಏರುತ್ತಿರುವ ಪ್ರವೃತ್ತಿಗೆ ಅನುಗುಣವಾಗಿ ಹೆಚ್ಚಿನ ಮಟ್ಟಕ್ಕೆ ಮರಳಿದೆ. ವಾತಾವರಣದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಸಿರುಮನೆ ಅನಿಲ ಮಟ್ಟದಿಂದ ಒಂದೇ ಪೀಳಿಗೆಯಲ್ಲಿ ಹವಾಮಾನ ಬದಲಾವಣೆಯ ಸಂಪೂರ್ಣ ವೇಗವು ತೀವ್ರವಾಗಿದೆ. 2015-2024 ದಾಖಲೆಯ ಅತ್ಯಂತ ಶಾಖದ ಹತ್ತು ವರ್ಷಗಳಾಗಿವೆ ಎಂದು ಹೇಳಿದರು.

ಈ ವರ್ಷ ವಿಶ್ವದ ವಿವಿಧ ಭಾಗಗಳಲ್ಲಿ ನಾವು ನೋಡಿದ ದಾಖಲೆ ಮುರಿಯುವಂತಹ ಮಳೆ ಮತ್ತು ಪ್ರವಾಹ, ವೇಗವಾಗಿ ತೀವ್ರಗೊಳ್ಳುತ್ತಿರುವ ಉಷ್ಣವಲಯದ ಚಂಡಮಾರುತಗಳು, ಮಾರಣಾಂತಿಕ ಶಾಖ, ನಿರಂತರ ಬರ ಮತ್ತು ಕೆರಳಿದ ಕಾಳ್ಗಿಚ್ಚುಗಳು ದುರದೃಷ್ಟವಶಾತ್ ನಮ್ಮ ಹೊಸ ವಾಸ್ತವ ಮತ್ತು ನಮ್ಮ ಭವಿಷ್ಯದ ಮುನ್ಸೂಚನೆಯಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT