ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ 
ದೇಶ

ರಾಹುಲ್ ಗಾಂಧಿ ಕುಟುಂಬ ಅಧಿಕಾರದಲ್ಲಿದ್ದಾಗ ಮಾತ್ರ ಸಿಖ್ಖರಿಗೆ ಅಸ್ತಿತ್ವದ ಬೆದರಿಕೆ ಇತ್ತು: ಹರ್ದೀಪ್ ಸಿಂಗ್ ಪುರಿ

ರಾಹುಲ್ ಗಾಂಧಿ ಸತ್ಯವನ್ನು ತಿಳಿಯದೆ ಮಾತನಾಡುತ್ತಾರೆ. ಅವರ ಹೇಳಿಕೆಯಲ್ಲಿ ಅಪಾಯಕಾರಿ ನಿರೂಪಣೆ ಇದೆ. ನಮ್ಮ ಏಕತೆ ಮತ್ತು ವೈವಿಧ್ಯತೆಗೆ ಸಂಬಂಧಿಸಿದ ಕೆಲವು ಸೂಕ್ಷ್ಮಗಳನ್ನು ಅವರು ಅರ್ಥ ಮಾಡಿಕೊಳ್ಳಬೇಕು.

ನವದೆಹಲಿ: ಅಮೆರಿಕದಲ್ಲಿ ಸಿಖ್ ಸಮುದಾಯದ ಉದಾಹರಣೆ ನೀಡಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ವಿದೇಶದಲ್ಲಿ 'ಸೂಕ್ಷ್ಮ ವಿಷಯಗಳ' ಕುರಿತು ಮಾತನಾಡುವ ಮೂಲಕ ಕಾಂಗ್ರೆಸ್ ನಾಯಕ 'ಅಪಾಯಕಾರಿ ನಿರೂಪಣೆ'ಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ.

ವಿದೇಶದಲ್ಲಿ ವಾಸಿಸುವ ಸಿಖ್ ಸಮುದಾಯದ ಸದಸ್ಯರಿಂದ "ಸಹಾನುಭೂತಿ" ಪಡೆಯಲು ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ರಾಹುಲ್ ಗಾಂಧಿ ಸತ್ಯವನ್ನು ತಿಳಿಯದೆ ಮಾತನಾಡುತ್ತಾರೆ. ಅವರ ಹೇಳಿಕೆಯಲ್ಲಿ ಅಪಾಯಕಾರಿ ನಿರೂಪಣೆ ಇದೆ. ನಮ್ಮ ಏಕತೆ ಮತ್ತು ವೈವಿಧ್ಯತೆಗೆ ಸಂಬಂಧಿಸಿದ ಕೆಲವು ಸೂಕ್ಷ್ಮಗಳನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದ್ದಾರೆ.

ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯ ಉದ್ದೇಶಿಸಿ ಮಾತನಾಡಿದ ಸಿಖ್ ಸಮುದಾಯದ ಬಿಜೆಪಿ ನಾಯಕ, ಭಾರತದಲ್ಲಿ "ಸಿಖ್ಖರು ಪೇಟ ಮತ್ತು ಕಾಡಾವನ್ನು ಧರಿಸುವಂತಿಲ್ಲ ಎಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ" ಎಂದು ಹೇಳಿದ್ದಾರೆ.

1984 ರ ಕಾಂಗ್ರೆಸ್ ಆಡಳಿತದಲ್ಲಿ ನಡೆದ ಸಿಖ್ ವಿರೋಧಿ ದಂಗೆಯನ್ನು ಉಲ್ಲೇಖಿಸಿದ ಪುರಿ, "ನಮ್ಮ ಇತಿಹಾಸದಲ್ಲಿ ಒಂದು ಸಮುದಾಯವಾಗಿ ನಾವು ಆತಂಕ, ಅಭದ್ರತೆಯ ಭಾವನೆ ಮತ್ತು ಅಸ್ತಿತ್ವದ ಬೆದರಿಕೆ ಎದುರಿಸಿದ ಸಮಯವಿದ್ದರೆ, ಅದು ರಾಹುಲ್ ಗಾಂಧಿ ಅವರ ಕುಟುಂಬ ಅಧಿಕಾರದ ಗದ್ದುಗೆಯಲ್ಲಿದ್ದಾಗ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ 1984 ರ ಗಲಭೆಯ ಸಮಯದಲ್ಲಿ ಸಿಖ್ ಸಮುದಾಯವು ಪೇಟ ಧರಿಸಲು ಹೆದರುತ್ತಿದ್ದರು ಎಂದು ತಿರುಗೇಟು ನೀಡಿದರು.

“1984 ರಲ್ಲಿ, 3000 ಅಮಾಯಕರನ್ನು ಅವರ ಮನೆಗಳಿಂದ ಹೊರಗೆ ಎಳೆದು ತಂದು ಕೊಲ್ಲಲಾಯಿತು. ಇವೆಲ್ಲವೂ ದಾಖಲಿತ ಸತ್ಯಗಳು. ರಾಜೀವ್ ಗಾಂಧಿಯವರ ಕಾಲದಲ್ಲಿ(1984) ಆತಂಕ ಮತ್ತು ಅಭದ್ರತೆಯ ಭಾವನೆಯನ್ನು ಅನುಭವಿಸಿದ ಏಕೈಕ ಸಮುದಾಯ ಸಿಖ್ಖರು ”ಎಂದು ಕೇಂದ್ರ ಸಚಿವರು ಹೇಳಿದರು.

ಅಮೆರಿಕದ ವರ್ಜೀನಿಯಾದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, “ಮೊದಲನೆಯದಾಗಿ, ಹೋರಾಟ ಯಾಕೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಹೋರಾಟವು ರಾಜಕೀಯದ ಬಗ್ಗೆ ಅಲ್ಲ. ಇದು ಮೇಲ್ನೋಟಕ್ಕೆ ಸಂಬಂಧಿಸಿದೆ. ನಿಮ್ಮ ಹೆಸರೇನು? ಹೋರಾಟ ಯಾವುದರ ಬಗ್ಗೆ ಎಂದರೆ ಅವರು ಸಿಖ್ಖರು ಅವರಿಗೆ ಭಾರತದಲ್ಲಿ ತನ್ನ ಪೇಟವನ್ನು ಧರಿಸಲು ಅವಕಾಶ ನೀಡುತ್ತಾರೆಯೇ ಎಂಬುದರ ಬಗ್ಗೆ ಆಗಿದೆ. ಅವರು ಸಿಖ್ಖರಾಗಿ ಭಾರತದಲ್ಲಿ ಕಾಡಾವನ್ನು ಧರಿಸಲು ಅನುಮತಿಸಲಾಗುವುದೇ? ಅಥವಾ ಅವನೊಬ್ಬ ಸಿಖ್, ಅವರಿಗೆ ಗುರುದ್ವಾರಕ್ಕೆ ಹೋಗಲು ಸಾಧ್ಯವಾಗುವುದೇ? ಇದು ಹೋರಾಟ, ಇದು ಅವರಿಗೆ ಮಾತ್ರವಲ್ಲ ಎಲ್ಲ ಧರ್ಮದವರದ್ದೂ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT