ಬಿಲ್ ಕೇಳಿದ ಸಿಬ್ಬಂದಿಯ 1.ಕಿಮೀ ವರೆಗೆ ಎಳೆದೊಯ್ದ ಕಾರು 
ದೇಶ

Video: ಢಾಬಾದಲ್ಲಿ ಹಣ ನೀಡದೇ ಪರಾರಿ ಯತ್ನ; ಬಿಲ್ ಕೇಳಿದ ಸಿಬ್ಬಂದಿಯ 1 ಕಿಮೀ ಎಳೆದೊಯ್ದ ಕಾರು!

ದುಷ್ಕರ್ಮಿಗಳು ಸುಮಾರು 1 ಕಿ.ಮೀ ದೂರ ಆತನನ್ನು ಹಾಗೆಯೇ ಎಳೆದುಕೊಂಡು ಹೋಗಿದ್ದು, ಅಲ್ಲಿಂದ ಆತನ ಕಣ್ಣಿಗೆ ಬಟ್ಟೆ ಕಟ್ಟಿ ಧಾರೂರು ತಾಲೂಕಿನ ಅಜ್ಞಾತ ಸ್ಥಳಕ್ಕೆ ಆತನನ್ನು ಕರೆದೊಯ್ದು ರಾತ್ರಿಯೆಲ್ಲಾ ಕಟ್ಟಿಹಾಕಿದ್ದಾರೆ.

ಬೀಡ್: ಮಹಾರಾಷ್ಟ್ರದಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ವರದಿಯಾಗಿದ್ದು, ಪುಂಡರ ಗುಂಪೊಂದು ಢಾಬಾದಲ್ಲಿ ಊಟ ಮಾಡಿ ಹಣ ನೀಡದೇ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಬಿಲ್ ಕೇಳಿದ ಸಿಬ್ಬಂದಿಯನ್ನು ಬರೊಬ್ಬರಿ 1.ಕಿಮೀ ವರೆಗೂ ಕಾರಿನಲ್ಲಿ ಎಳೆದೊಯ್ದಿರುವ ವಿಡಿಯೋ ವೈರಲ್ ಆಗಿದೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ಇಲ್ಲಿನ ಮೆಹ್ಕರ್- ಪಂಢರಪುರ ಪಾಲ್ಖಿ ಹೆದ್ದಾರಿ ರಸ್ತೆಯ ಸಮೀಪದಲ್ಲಿರುವ ಢಾಬಾಕ್ಕೆ ಕಾರಿನಲ್ಲಿ ಬಂದ ಪುಂಡರ ಗುಂಪು ಹೊಟ್ಟೆ ತುಂಬಾ ಊಟ ಮಾಡಿದ್ದಾರೆ.

ಬಳಿಕ ಮೂವರು ಕಾರಿನೊಳಗೆ ಹತ್ತಿ ಕುಳಿತಿದ್ದು, ಈ ವೇಳೆ ಕಾರಿನ ಬಳಿ ಬಂದ ಸಿಬ್ಬಂದಿಗೆ ಯುಪಿಐ ಕೋಡ್ ತರುವಂತೆ ಹೇಳಿದ್ದಾರೆ. ಆತ ಕೋಡ್ ತರಲು ಹೋಗುತ್ತಲೇ ಕಾರನ್ನು ಚಾಲನೆ ಮಾಡಿಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಎಚ್ಚೆತ್ತ ಸಿಬ್ಬಂದಿ ಕಾರಿನ ಹಿಂದೆ ಓಡಿ ಚಲಿಸುತ್ತಿದ್ದ ಕಾರಿನ ಬಾಗಿಲು ತೆರೆದು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಆಗಲೂ ಕಾರನ್ನು ನಿಲ್ಲಿಸದ ದುಷ್ಕರ್ಮಿಗಳು ಸುಮಾರು 1 ಕಿ.ಮೀ ದೂರ ಆತನನ್ನು ಹಾಗೆಯೇ ಎಳೆದುಕೊಂಡು ಹೋಗಿದ್ದು, ಅಲ್ಲಿಂದ ಆತನ ಕಣ್ಣಿಗೆ ಬಟ್ಟೆ ಕಟ್ಟಿ ಧಾರೂರು ತಾಲೂಕಿನ ಅಜ್ಞಾತ ಸ್ಥಳಕ್ಕೆ ಆತನನ್ನು ಕರೆದೊಯ್ದು ರಾತ್ರಿಯೆಲ್ಲಾ ಕಟ್ಟಿಹಾಕಿದ್ದಾರೆ. ಅಲ್ಲದೆ ಆತನ ಜೇಬಿನಲ್ಲಿದ್ದ ಸುಮಾರು 11, 500 ರೂಗಳನ್ನು ಕಸಿದಿದ್ದು, ಬಳಿಕ ಬೆಳಗಿನ ಜಾವ ಆತನನ್ನು ಬಿಡುಗಡೆ ಮಾಡಿ ಕಳುಹಿಸಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಇನ್ನು ಹೊಟೆಲ್ ಬಳಿ ನಡೆದ ಹೈಡ್ರಾಮದ ಇಡೀ ದೃಶ್ಯಾವಳಿಗಳು ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದೂರು ದಾಖಲು

ಇನ್ನು ಹೊಟೆಲ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ದಿಂಡ್ರೂಡ್ ಪೊಲೀಸರು ಸಖಾರಾಮ್ ಜನಾರ್ದನ್ ಮುಂಡೆ ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?