ಇಂಜಿನಿಯರ್ ರಶೀದ್‌ online desk
ದೇಶ

ನಿಷೇಧಿತ ಸಂಘಟನೆ ಜಮಾತ್ ನ ಮಾಜಿ ಸದಸ್ಯರೊಂದಿಗೆ ಇಂಜಿನಿಯರ್ ರಶೀದ್ ಮೈತ್ರಿ!

2019 ರಲ್ಲಿ ಜಮಾತ್-ಎ-ಇಸ್ಲಾಮಿ ಜಮ್ಮು-ಕಾಶ್ಮೀರವನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿತ್ತು. ಈ ವರ್ಷ ಫೆಬ್ರವರಿಯಲ್ಲಿ ನಿಷೇಧವನ್ನು ಮತ್ತೆ 5 ವರ್ಷಗಳವರೆಗೆ ವಿಸ್ತರಿಸಲಾಗಿತ್ತು.

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಲೋಕಸಭಾ ಸದಸ್ಯ ಶೇಖ್ ಅಬ್ದುಲ್ ರಶೀದ್ ಅಲಿಯಾಸ್ ಇಂಜಿನಿಯರ್ ರಶೀದ್, ಜಮಾತ್-ಎ-ಇಸ್ಲಾಮಿ (ಜೆಇಐ) ನ ಮಾಜಿ ಸದಸ್ಯರು ಮೈತ್ರಿಗೆ ಮುಂದಾಗಿದ್ದಾರೆ.

ಮೈತ್ರಿಗೆ ಸಂಬಂಧಿಸಿದಂತೆ ಇಂದು ಜಂಟಿ ಸಭೆ ನಡೆದಿದ್ದು, ಇದರಲ್ಲಿ ಎಐಪಿ ಮುಖ್ಯಸ್ಥ ಹಾಗೂ ಮುಖ್ಯ ವಕ್ತಾರ ಇನಾಮ್ ಉನ್ ನಬಿ ಎಐಪಿ ನಿಯೋಗವನ್ನು ಪ್ರತಿನಿಧಿಸಿ ಹಾಜರಾಗಿದ್ದರೆ, ಜೆಇಐ ನಿಯೋಗವನ್ನು ಗುಲಾಮ್ ಕಾದಿರ್ ವನಿ ಪ್ರತಿನಿಧಿಸಿದ್ದರು. ಸಭೆಯಲ್ಲಿ ಜೆಇಐ ನ ಇತರ ಸದಸ್ಯರೂ ಭಾಗಿಯಾಗಿದ್ದರು ಎಂದು ಎಐಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2019 ರಲ್ಲಿ ಜಮಾತ್-ಎ-ಇಸ್ಲಾಮಿ ಜಮ್ಮು-ಕಾಶ್ಮೀರವನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿತ್ತು. ಈ ವರ್ಷ ಫೆಬ್ರವರಿಯಲ್ಲಿ ನಿಷೇಧವನ್ನು ಮತ್ತೆ 5 ವರ್ಷಗಳವರೆಗೆ ವಿಸ್ತರಿಸಲಾಗಿತ್ತು. ಜಮಾತ್‌ನ ಹಲವಾರು ಪ್ರಭಾವಿ ನಾಯಕರು ಸ್ವತಂತ್ರ ಅಭ್ಯರ್ಥಿಗಳಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಪ್ರದೇಶದ ಜನಸಂಖ್ಯೆಯ ಹೆಚ್ಚಿನ ಹಿತಾಸಕ್ತಿಗಾಗಿ ಎರಡೂ ಕಡೆಯವರು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಎಐಪಿ ವಕ್ತಾರರು ಸಭೆಯ ಬಳಿಕ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಭಾವನೆಗಳು ಮತ್ತು ಆಕಾಂಕ್ಷೆಗಳನ್ನು ವ್ಯಕ್ತಪಡಿಸಬಲ್ಲ ಪ್ರಬಲ ಪ್ರತಿನಿಧಿಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ AIP ಮತ್ತು JEI ಅಭ್ಯರ್ಥಿಗಳಿಗೆ ಅದ್ಭುತವಾದ ಗೆಲುವು ಸಾಧಿಸುವುದು ಗುರಿಯಾಗಿದೆ ಎಂದು ಅವರು ಹೇಳಿದರು.

"ಸಮಗ್ರ ಚರ್ಚೆಗಳ ನಂತರ, ಕುಲ್ಗಾಮ್ ಮತ್ತು ಪುಲ್ವಾಮಾದಲ್ಲಿ ಜೆಇಐ ಬೆಂಬಲಿತ ಅಭ್ಯರ್ಥಿಗಳನ್ನು ಎಐಪಿ ಬೆಂಬಲಿಸುವುದನ್ನು ನಿರ್ಧರಿಸಲಾಯಿತು. ಹಾಗೆಯೇ ಜೆಇಐ ಕಾಶ್ಮೀರದಾದ್ಯಂತ ಎಐಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತದೆ" ಎಂದು ಅವರು ಹೇಳಿದರು.

ಎಐಪಿ ಮತ್ತು ಜೆಇಐ ಎರಡೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕ್ಷೇತ್ರಗಳಲ್ಲಿ-ವಿಶೇಷವಾಗಿ ಲಾಂಗೇಟ್, ದೇವ್ಸರ್ ಮತ್ತು ಝೈನಾಪೋರಾಗಳಲ್ಲಿ ಮೈತ್ರಿಕೂಟವು 'ಸೌಹಾರ್ದ ಸ್ಪರ್ಧೆ'ಗೆ ಒಪ್ಪಿಗೆ ನೀಡಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT