ಕಪಿಲ್ ಸಿಬಲ್ 
ದೇಶ

ಪಹಲ್ಗಾಮ್ ಉಗ್ರರ ದಾಳಿ: ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಪ್ರಧಾನಿ ಮೋದಿಗೆ ಕಪಿಲ್ ಸಿಬಿಲ್ ಒತ್ತಾಯ

ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹಾಕಲು ವಿವಿಧ ಪ್ರಮುಖ ದೇಶಗಳಿಗೆ ಆಡಳಿತ ಮತ್ತು ವಿರೋಧ ಪಕ್ಷದ ಸಂಸದರ ನಿಯೋಗವನ್ನು ಕಳುಹಿಸುವಂತೆ ಸಿಬಲ್ ಸರ್ಕಾರಕ್ಕೆ ಸೂಚಿಸಿದರು.

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನ ಕರೆದು ಪಹಲ್ಗಾಮ್ ಉಗ್ರರ ದಾಳಿಯನ್ನು ಖಂಡಿಸಿ ನಿರ್ಣಯ ಕೈಗೊಳ್ಳಬೇಕು. ಆ ಮೂಲಕ ಇಡೀ ದೇಶ ಒಗ್ಗಟ್ಟಾಗಿದೆ ಎಂದು ವಿಶ್ವಕ್ಕೆ ಸಂದೇಶ ರವಾನಿಸಬೇಕು ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹಾಕಲು ವಿವಿಧ ಪ್ರಮುಖ ದೇಶಗಳಿಗೆ ಆಡಳಿತ ಮತ್ತು ವಿರೋಧ ಪಕ್ಷದ ಸಂಸದರ ನಿಯೋಗವನ್ನು ಕಳುಹಿಸುವಂತೆ ಸಿಬಲ್ ಸರ್ಕಾರಕ್ಕೆ ಸೂಚಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವರು, ಯುಎಸ್ ನಿರ್ಬಂಧ ಮಾಡಿರುವಂತೆ ಪಾಕಿಸ್ತಾನದೊಂದಿಗೆ ವ್ಯವಹಾರ ಇಟ್ಟುಕೊಂಡರೆ ನಮ್ಮ ಮಾರುಕಟ್ಟೆಗೆ ಬರಲು ಸಾಧ್ಯವಿಲ್ಲ ಎಂದು ಪಾಕ್ ಜೊತೆಗೆ ವ್ಯವಹಾರ ಮಾಡುವ ಎಲ್ಲಾ ಪ್ರಮುಖ ರಾಷ್ಟ್ರಗಳಿಗೆ ಭಾರತ ಹೇಳಬೇಕು ಎಂದು ಸಲಹೆ ನೀಡಿದರು.

2001 ರಲ್ಲಿ ಸಂಸತ್ತಿನ ಮೇಲೆ ಉಗ್ರರ ದಾಳಿ ನಡೆಯಿತು. 2002 ರಲ್ಲಿ ಕಲುಚಕ್ ಹತ್ಯಾಕಾಂಡ, 2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಮೇಲೆ ದಾಳಿ, ಜುಲೈ 2006 ರಲ್ಲಿ ಮುಂಬೈ ರೈಲಿನಲ್ಲಿ ಬಾಂಬ್, 2008ರಲ್ಲಿ ಮುಂಬೈ ದಾಳಿ, 2016ರಲ್ಲಿ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ, 2016ರಲ್ಲಿ ಉರಿಯಲ್ಲಿ, 2019ರಲ್ಲಿ ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ ಸೇರಿದಂತೆ ಉಗ್ರರ ದಾಳಿಗಳು ಮುಂದುವರೆದಿದೆ.

ಈ ಸಂದರ್ಭದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಈ ಬಗ್ಗೆ ಚರ್ಚೆ ನಡೆಸುವಂತೆ ಪ್ರಧಾನಿಗೆ ಸೂಚಿಸಲು ಬಯಸುತ್ತೇನೆ. ಏಕೆಂದರೆ ದೇಶ ನಿಮ್ಮೊಂದಿಗೆ ನಿಂತಿದೆ. ಪ್ರತಿಪಕ್ಷಗಳು ನಿಮ್ಮೊಂದಿಗಿದ್ದು, ಇದು ಭಾರತದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ" ಎಂದು ಅವರು ಹೇಳಿದರು.

ಎಲ್ಲರೂ ಸರ್ಕಾರದ ಜೊತೆಗೆ ನಿಂತಿದ್ದೇವೆ. ದೇಶವು ಒಗ್ಗಟ್ಟಾಗಿದ್ದು, ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂಬ ರಾಷ್ಟ್ರದ ಭಾವನೆಯನ್ನು ವಿಶ್ವದ ಮುಂದೆ ವ್ಯಕ್ತಪಡಿಸಲು ಸಂಸತ್ತಿನಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಸಿಬಲ್ ಹೇಳಿದರು.

''ಭಯೋತ್ಪಾದಕನು ಭಯೋತ್ಪಾದಕ, ಅವನಿಗೆ ಯಾವುದೇ ಧರ್ಮವಿಲ್ಲ. ಪಾಕಿಸ್ತಾನವು ತನ್ನ ಸಮಸ್ಯೆಗಳನ್ನು ಭಯೋತ್ಪಾದನೆಯ ಮೂಲಕ ಪ್ರಪಂಚದ ಮುಂದೆ ಇಡಲು ಬಯಸುತ್ತಿದ್ದು, ಮಿಲಿಟರಿ ವ್ಯವಸ್ಥೆ ಇರಲು ಭಾವಿಸುತ್ತದೆ.

ಆಡಳಿತ ಮತ್ತು ವಿರೋಧ ಪಕ್ಷದ ಸಂಸದರ ನಿಯೋಗವನ್ನು ಆಫ್ರಿಕಾ, ಯುಎಸ್, ಯುರೋಪ್, ಚೀನಾ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ರಷ್ಯಾ ಮತ್ತು ದಕ್ಷಿಣ ಅಮೆರಿಕಾದಂತಹ ದೇಶಗಳಿಗೆ ಕಳುಹಿಸಬೇಕು. ಇದರಿಂದ ರಾಜತಾಂತ್ರಿಕ ಒತ್ತಡ ಸೃಷ್ಟಿಯಾಗುತ್ತದೆ ಎಂದು ಸಿಬಲ್ ಹೇಳಿದರು.

ಪ್ರತಿ ರಾಜತಾಂತ್ರಿಕ ಉಪಕ್ರಮದಲ್ಲಿ ಈ ಅಂಶವನ್ನು ಪ್ರಸ್ತುತಪಡಿಸಬೇಕು. ವಿಶ್ವಸಂಸ್ಥೆಯು ಒತ್ತಡವನ್ನು ಸೃಷ್ಟಿಸಬೇಕು. ಭದ್ರತಾ ಮಂಡಳಿಯಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು ಮತ್ತು ಚೀನಾ ಅದನ್ನು ಬೆಂಬಲಿಸುತ್ತದೆಯೇ ಅಥವಾ ಅದರ ವಿರುದ್ಧ ಹೋಗುತ್ತದೆಯೇ ಎಂಬುದನ್ನು ನಾವು ನೋಡಬೇಕು. ಸಂಸತ್ ಕೈಗೊಂಡ ನಿರ್ಣಯದಲ್ಲಿ ಭಯೋತ್ಪಾದನೆ ವಿಚಾರದಲ್ಲಿ ರಾಜಕೀಯ ಮಾಡುವವರ ವಿರುದ್ಧ ಸಂದೇಶ ನೀಡಬೇಕು ಎಂದರು.

ಮೋದಿ ಗೈರು ಬಗ್ಗೆ ಅಸಮಾಧಾನ

ಗುರುವಾರ ನಡೆದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗಿದ್ದನ್ನು ಸಿಬಲ್ ಟೀಕಿಸಿದ್ದಾರೆ.

"ಪ್ರಧಾನಿಯವರು ಸರ್ವಪಕ್ಷ ಸಭೆಗೆ ಬರಬಹುದಿತ್ತು, ಆದರೆ ಬಿಹಾರ ಸಭೆ ಮುಖ್ಯ ಎಂದು ಅವರು ಭಾವಿಸಿರಬಹುದು. ಒಬ್ಬ ಸಂಸದನಾಗಿ ನನಗೆ ಅದು ಇಷ್ಟವಾಗಲಿಲ್ಲ (ಪ್ರಧಾನಿಯವರು ಹಾಜರಾಗದಿರುವುದು)" ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT