ಸಾಂದರ್ಭಿಕ ಚಿತ್ರ 
ದೇಶ

'ವೋಟರ್ ಅಧಿಕಾರ ಯಾತ್ರೆ' ವೇಳೆ ಬಿಹಾರ ಪೊಲೀಸ್ ಪೇದೆಗೆ ಡಿಕ್ಕಿ; ರಾಹುಲ್ ಗಾಂಧಿ ವಾಹನ ಚಾಲಕನ ವಿರುದ್ಧ FIR

ಕಾನ್‌ಸ್ಟೇಬಲ್ ಆಕಸ್ಮಿಕವಾಗಿ ಬೆಂಗಾವಲು ಪಡೆಯ ವಾಹನದ ಮುಂದೆ ಬಿದ್ದಿದ್ದರಿಂದ ಅವರ ಪಾದಗಳಿಗೆ ವಾಹನವು ಸ್ವಲ್ಪ ತಾಗಿತು. ಇದರಿಂದಾಗಿ ಅವರು ಗಾಯಗೊಂಡರು ಎಂದು ಎಸ್ಪಿ ಈ ಹಿಂದೆ ಹೇಳಿದ್ದರು.

ನವಾಡ (ಬಿಹಾರ): ಎರಡು ದಿನಗಳ ಹಿಂದೆ ಬಿಹಾರದ ನವಾಡ ಜಿಲ್ಲೆಯಲ್ಲಿ ನಡೆದ ವೋಟರ್ ಅಧಿಕಾರ ಯಾತ್ರೆಯ ವೇಳೆ ಪೊಲೀಸ್ ಕಾನ್‌ಸ್ಟೆಬಲ್‌ಗೆ ಡಿಕ್ಕಿ ಹೊಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಾಹನದ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಂಗಳವಾರ ಭಗತ್ ಸಿಂಗ್ ಚೌಕ್ ಮೂಲಕ ಯಾತ್ರೆಯು ಹಾದು ಹೋಗುತ್ತಿದ್ದಾಗ ರಾಹುಲ್ ಗಾಂಧಿ ಅವರ ವಾಹನದ ಮುಂದೆ ಪೊಲೀಸ್ ಕಾನ್‌ಸ್ಟೆಬಲ್ ಬಿದ್ದಿದ್ದರು.

ಈ ಸಂಬಂಧ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ವಿವರಗಳನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು ಎಂದು ನವಾಡಾ ಎಸ್ಪಿ ಅಭಿನವ್ ಧಿಮಾನ್ ಸುದ್ದಿಸಂಸ್ಥೆ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಕಾನ್‌ಸ್ಟೇಬಲ್ ಆಕಸ್ಮಿಕವಾಗಿ ಬೆಂಗಾವಲು ಪಡೆಯ ವಾಹನದ ಮುಂದೆ ಬಿದ್ದಿದ್ದರಿಂದ ಅವರ ಪಾದಗಳಿಗೆ ವಾಹನವು ಸ್ವಲ್ಪ ತಾಗಿತು. ಇದರಿಂದಾಗಿ ಅವರು ಗಾಯಗೊಂಡರು ಎಂದು ಎಸ್ಪಿ ಈ ಹಿಂದೆ ಹೇಳಿದ್ದರು.

ಪೊಲೀಸ್ ಅಧಿಕಾರಿ ಮೇಲೆ ವಾಹನ ಹರಿದಿದೆ ಎಂದು ಹೇಳಿಕೊಳ್ಳುವ ವಿಡಿಯೋ ಕ್ಲಿಪ್ ಅನ್ನು ಬಿಜೆಪಿ ಹಂಚಿಕೊಂಡಿದೆ.

ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಗಾಯಗೊಂಡ ಪೊಲೀಸ್ ಪೇದೆಯನ್ನು ತಮ್ಮ ತೆರೆದ ಜೀಪಿಗೆ ಕರೆತರುವಂತೆ ರಾಹುಲ್ ಗಾಂಧಿ ತಮ್ಮ ಬೆಂಬಲಿಗರನ್ನು ಕೇಳಿಕೊಳ್ಳುತ್ತಿರುವುದನ್ನು ಕಾಣಬಹುದು. ನೋವಿನಿಂದ ಬಳಲುತ್ತಿದ್ದ ಕಾನ್‌ಸ್ಟೆಬಲ್‌ಗೆ ನೀರು ಕುಡಿಸಿದ ನಂತರ, ಲೋಕಸಭೆಯ ವಿರೋಧ ಪಕ್ಷದ ನಾಯಕರು ಕುಟುಂತ್ತಾ ಸಾಗುತ್ತಿದ್ದ ಅವರನ್ನು ತಮ್ಮ ವಾಹನದಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT