ಪ್ರಾತಿನಿಧಿಕ ಚಿತ್ರ 
ದೇಶ

WhatsApp: ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ 1,90,000 ರೂ ಕಳೆದುಕೊಂಡ ಸರ್ಕಾರಿ ಉದ್ಯೋಗಿ!

ಕಳೆದ ವರ್ಷ ಮದುವೆಯ ಆಮಂತ್ರಣ ಪತ್ರಿಕೆಯ ನೆಪದಲ್ಲಿ ಅನೇಕ ಜನರು ಹಣ ಕಳೆದುಕೊಂಡಾಗ ಈ ರೀತಿಯ ವಂಚನೆ ಬೆಳಕಿಗೆ ಬಂದಿತ್ತು.

ಮುಂಬೈ: ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸರ್ಕಾರಿ ಉದ್ಯೋಗಿಯೊಬ್ಬರು ವಾಟ್ಸಾಪ್‌ನಲ್ಲಿ ಬಂದ ಡಿಜಿಟಲ್ ವಿವಾಹ ಆಮಂತ್ರಣ ಪತ್ರಿಕೆಯಿಂದ ಸುಮಾರು ಎರಡು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಸೈಬರ್ ವಂಚನೆಗೆ ಒಳಗಾದ ವ್ಯಕ್ತಿಗೆ ಆಗಸ್ಟ್ 30 ರಂದು ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಮದುವೆಗೆ ಆಹ್ವಾನಿಸುವ ಸಂದೇಶ ಬಂದಿತ್ತು. 'ಸ್ವಾಗತ. ಶಾದಿ ಮೇ ಜರುರ್ ಆಯೆ (ಮದುವೆಗೆ ತಪ್ಪದೇ ಬನ್ನಿ). 30/08/2025. ಪ್ರೀತಿಯೇ ಸಂತೋಷದ ಬಾಗಿಲನ್ನು ತೆರೆಯುವ ಮಾಸ್ಟರ್ ಕೀ' ಎಂದು ಸಂದೇಶದಲ್ಲಿ ಹೇಳಲಾಗಿದೆ. ನಂತರ ಪಿಡಿಎಫ್ ಫೈಲ್‌ನಂತೆ ಕಾಣುವ ಆಮಂತ್ರಣ ಪತ್ರಿಕೆಯನ್ನು ಕಳುಹಿಸಲಾಗಿದೆ.

ಅದು ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ (APK) ಫೈಲ್ ಆಗಿದ್ದು, ಬಳಕೆದಾರರ ಫೋನ್‌ಗಳನ್ನು ಹ್ಯಾಕ್ ಮಾಡಲು ಮತ್ತು ಸೂಕ್ಷ್ಮ ಡೇಟಾವನ್ನು ಕದಿಯಲು ಮದುವೆ ಕಾರ್ಡ್‌ನಂತೆ ಕಾಣಿಸುವಂತೆ ವಿನ್ಯಾಸಗೊಳಿಸಲಾಗಿತ್ತು.

ವಂಚನೆಯನ್ನು ಅರಿಯದ ವ್ಯಕ್ತಿಯು ಆ ಫೈಲ್ ಅನ್ನು ಕ್ಲಿಕ್ ಮಾಡಿದ ತಕ್ಷಣವೇ, ಸೈಬರ್ ಅಪರಾಧಿಗಳು ಮೊಬೈಲ್ ಡೇಟಾವನ್ನು ಪ್ರವೇಶಿಸಿ 1,90,000 ರೂ.ಗಳನ್ನು ಕದ್ದಿದ್ದಾರೆ.

ಈ ಸಂಬಂಧ ಹಿಂಗೋಲಿ ಪೊಲೀಸ್ ಠಾಣೆಯಲ್ಲಿ ಮತ್ತು ಸೈಬರ್ ಸೆಲ್ ಇಲಾಖೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ವಾಟ್ಸಾಪ್‌ನಲ್ಲಿ ಕಳುಹಿಸಿದ್ದ ಮದುವೆ ಆಮಂತ್ರಣ

ಕಳೆದ ವರ್ಷ ಮದುವೆಯ ಆಮಂತ್ರಣ ಪತ್ರಿಕೆಯ ನೆಪದಲ್ಲಿ ಅನೇಕ ಜನರು ಹಣ ಕಳೆದುಕೊಂಡಾಗ ಈ ರೀತಿಯ ವಂಚನೆ ಬೆಳಕಿಗೆ ಬಂದಿತ್ತು.

ವಾಟ್ಸಾಪ್‌ನಲ್ಲಿ ಮದುವೆಯ ಆಹ್ವಾನ ಪತ್ರದಂತೆ ಸಂದೇಶವೊಂದು ಬರುತ್ತದೆ. ಅದನ್ನು ಒಮ್ಮೆ ಕ್ಲಿಕ್ ಮಾಡಿದ ಕೂಡಲೇ, APK ಫೈಲ್‌ಗಳು ಫೋನ್‌ನಲ್ಲಿ ಡೌನ್‌ಲೋಡ್ ಆಗುತ್ತವೆ. ನಂತರ ಸೈಬರ್ ಅಪರಾಧಿಗಳು ಸಂತ್ರಸ್ತನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಆ ಫೋನ್‌ನಲ್ಲಿ ಕಂಡುಬರುವ ಡೇಟಾವನ್ನು ಬಳಸಿಕೊಂಡು ಫೋನ್‌ನ ಮಾಲೀಕರಂತೆ ನಟಿಸಿ ಯಾರನ್ನಾದರೂ ವಂಚಿಸಬಹುದು ಮತ್ತು ಹಣ ಪಡೆಯಬಹುದು.

ಹಿಮಾಚಲ ಪ್ರದೇಶ ಸೈಬರ್ ಪೊಲೀಸರು ಕಳೆದ ವರ್ಷ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಜನರು ಜಾಗರೂಕರಾಗಿರಲು ಮತ್ತು ಪರಿಚಯವಿಲ್ಲದ ಮೂಲಗಳಿಂದ ಬಂದ ಫೈಲ್‌ಗಳನ್ನು ಡೌನ್‌ಲೋಡ್ ಮಾಡದಂತೆ ಸಲಹೆ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT