ಎನ್‌ಸಿಡಬ್ಲ್ಯೂ ಅಧ್ಯಕ್ಷೆ ವಿಜಯ ಕಿಶೋರ್ ರಹತ್ಕರ್ ಅವರಿಂದ NARI 2025 ರ ಮಹಿಳಾ ಸುರಕ್ಷತೆಯ ರಾಷ್ಟ್ರೀಯ ವಾರ್ಷಿಕ ವರದಿ ಮತ್ತು ಸೂಚ್ಯಂಕ ಬಿಡುಗಡೆ 
ದೇಶ

ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ ಮಹಿಳೆಯರಿಗೆ ಸುರಕ್ಷಿತ ನಗರ; ಪಾಟ್ನಾ, ಜೈಪುರ ಅಸುರಕ್ಷಿತ!

ಪಾಟ್ನಾ, ಜೈಪುರ, ಫರಿದಾಬಾದ್, ದೆಹಲಿ, ಕೋಲ್ಕತ್ತಾ, ಶ್ರೀನಗರ ಮತ್ತು ರಾಂಚಿ ಹೆಚ್ಚು ಸುರಕ್ಷಿತವಲ್ಲ ಎಂದು ಮಹಿಳಾ ಸುರಕ್ಷತೆಯ ರಾಷ್ಟ್ರೀಯ ವಾರ್ಷಿಕ ವರದಿ ಮತ್ತು ಸೂಚ್ಯಂಕ(NARI) 2025 ತಿಳಿಸಿದೆ.

ನವದೆಹಲಿ: ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ, ಐಜ್ವಾಲ್, ಗ್ಯಾಂಗ್ಟಾಕ್, ಇಟಾನಗರ ಮತ್ತು ಮುಂಬೈ ಮಹಿಳೆಯರಿಗೆ ದೇಶದ ಅತ್ಯಂತ ಹೆಚ್ಚು ಸುರಕ್ಷಿತ ನಗರಗಳಾಗಿ ಹೊರಹೊಮ್ಮಿವೆ. ಆದರೆ ಪಾಟ್ನಾ, ಜೈಪುರ, ಫರಿದಾಬಾದ್, ದೆಹಲಿ, ಕೋಲ್ಕತ್ತಾ, ಶ್ರೀನಗರ ಮತ್ತು ರಾಂಚಿ ಹೆಚ್ಚು ಸುರಕ್ಷಿತವಲ್ಲ ಎಂದು ಮಹಿಳಾ ಸುರಕ್ಷತೆಯ ರಾಷ್ಟ್ರೀಯ ವಾರ್ಷಿಕ ವರದಿ ಮತ್ತು ಸೂಚ್ಯಂಕ(NARI) 2025 ತಿಳಿಸಿದೆ.

31 ನಗರಗಳ 12,770 ಮಹಿಳೆಯರ ಸಮೀಕ್ಷೆಯ ಆಧಾರದ ಮೇಲೆ ಗುರುವಾರ ಬಿಡುಗಡೆಯಾದ ರಾಷ್ಟ್ರವ್ಯಾಪಿ ಸೂಚ್ಯಂಕವು ರಾಷ್ಟ್ರೀಯ ಸುರಕ್ಷತಾ ಅಂಕವನ್ನು ಶೇಕಡಾ 65 ರಷ್ಟು ಇದೆ ಎಂದು ಹೇಳಿದೆ.

ಕೊಹಿಮಾ ಮತ್ತು ಇತರ ನಗರಗಳು ಬಲವಾದ ಲಿಂಗ ಸಮಾನತೆ, ನಾಗರಿಕ ಭಾಗವಹಿಸುವಿಕೆ, ಪೊಲೀಸ್ ವ್ಯವಸ್ಥೆ ಮತ್ತು ಮಹಿಳಾ ಸ್ನೇಹಿ ಮೂಲಸೌಕರ್ಯದೊಂದಿಗೆ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿವೆ.

ಪಾಟ್ನಾ ಮತ್ತು ಜೈಪುರದಂತಹ ನಗರಗಳು ದುರ್ಬಲ ಸಾಂಸ್ಥಿಕ ಸ್ಪಂದಿಸುವಿಕೆ, ಪಿತೃಪ್ರಧಾನ ಮಾನದಂಡಗಳು ಮತ್ತು ನಗರ ಮೂಲಸೌಕರ್ಯದಲ್ಲಿನ ಕೊರತೆಯಿಂದಾಗಿ ಪಟ್ಟಿಯಲ್ಲಿ ತೀವ್ರ ಕಳಪೆ ಸ್ಥಾನ ಪಡೆದಿವೆ.

"ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ, ಐಜ್ವಾಲ್, ಗ್ಯಾಂಗ್ಟಾಕ್, ಇಟಾನಗರ, ಮುಂಬೈ ರಾಷ್ಟ್ರೀಯ ಸುರಕ್ಷತಾ ಶ್ರೇಯಾಂಕದಲ್ಲಿ ಮುಂಚೂಣಿಯಲ್ಲಿವೆ. ಇವು ಹೆಚ್ಚಾಗಿ ಹೆಚ್ಚಿನ ಲಿಂಗ ಸಮಾನತೆ, ಮೂಲಸೌಕರ್ಯ, ಪೊಲೀಸ್ ವ್ಯವಸ್ಥೆ ಅಥವಾ ನಾಗರಿಕ ಭಾಗವಹಿಸುವಿಕೆಯೊಂದಿಗೆ ಪರಸ್ಪರ ಉತ್ತಮ ಸಂಬಂಧ ಹೊಂದಿವೆ. ಆದರೆ ರಾಂಚಿ, ಶ್ರೀನಗರ, ಕೋಲ್ಕತ್ತಾ, ದೆಹಲಿ, ಫರಿದಾಬಾದ್, ಪಾಟ್ನಾ ಮತ್ತು ಜೈಪುರ ಕಡಿಮೆ ಅಂಕಗಳನ್ನು ಗಳಿಸಿವೆ.

ಒಟ್ಟಾರೆಯಾಗಿ, ಸಮೀಕ್ಷೆಗೆ ಒಳಗಾದ ಹತ್ತು ಮಹಿಳೆಯರಲ್ಲಿ ಆರು ಮಂದಿ ತಮ್ಮ ನಗರ "ಸುರಕ್ಷಿತ" ಎಂದು ಭಾವಿಸಿದರೆ, ಶೇಕಡಾ 40 ರಷ್ಟು ಜನ ಇನ್ನೂ "ಅಷ್ಟು ಸುರಕ್ಷಿತವಾಗಿಲ್ಲ" ಅಥವಾ "ಅಸುರಕ್ಷಿತ" ಎಂದು ಪರಿಗಣಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Women World Cup 2025: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ವಿರೋಚಿತ ಸೋಲು; ಸೆಮಿಸ್‌ಗಾಗಿ ಕಿವೀಸ್ ಜೊತೆ ಸೆಣೆಸಾಟ!

ಮುಸ್ಲಿಂ ಯುವಕರನ್ನು ಮದುವೆಯಾದರೆ ಅಂತಹ ಮಗಳ ಕಾಲು ಮುರಿಯಿರಿ: ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಅವಹೇಳನ: ರಮೇಶ್ ಕತ್ತಿಗೆ ಸಂಕಷ್ಟ; ಅಟ್ರಾಸಿಟಿ ಪ್ರಕರಣ ದಾಖಲು!

Flood Relief: ಕರ್ನಾಟಕ, ಮಹಾರಾಷ್ಟ್ರಕ್ಕೆ 1,950 ಕೋಟಿ ರೂ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮೋದನೆ!

News headlines 19-10-2025 | ಖರ್ಗೆ ತವರಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ; ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಹೊಡೆದಾಟ; DK Shivakumar- Kiran Majumdar ನಡುವೆ ನಿಲ್ಲದ ವಾಕ್ಸಮರ

SCROLL FOR NEXT