ಕೃತಕ ಬುದ್ಧಿಮತ್ತೆ online desk
ದೇಶ

ಆತ್ಮ ನಿರ್ಭರತೆಯೆಡೆಗೆ ಮಹತ್ವದ ಮೈಲಿಗಲ್ಲು; ಕರ್ನಾಟಕ ಮೂಲದ ಸ್ಟಾರ್ಟ್ ಅಪ್ ನಿಂದ ಮೊದಲ ದೇಶೀಯ ರಕ್ಷಣಾ AI ತಂತ್ರಜ್ಞಾನ ಅಭಿವೃದ್ಧಿ!

ದೇಶೀಯ ರಕ್ಷಣಾ AI ಅಭಿವೃದ್ಧಿ ದೇಶದ ಮಿಲಿಟರಿಯನ್ನು ಬಲಪಡಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದು 'ಆತ್ಮನಿರ್ಭರ ಭಾರತ'ದ ಮಹತ್ವಾಕಾಂಕ್ಷೆಯ ಪರಿಕಲ್ಪನೆಯು ಬಲವನ್ನು ಪಡೆದುಕೊಂಡಿದೆ ಎಂದಿದ್ದಾರೆ.

ಕರ್ನಾಟಕ ಮೂಲದ ನವೋದ್ಯಮ ಕಂಪನಿಯಾದ ನ್ಯೂರಾಲಿಕ್ಸ್ AI, ರಕ್ಷಣಾ ವಲಯಕ್ಕಾಗಿ ದೇಶದ ಮೊದಲ 'ದೇಶೀಯ ರಕ್ಷಣಾ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ'ವನ್ನು ಅಭಿವೃದ್ಧಿಪಡಿಸಿದೆ. ಇತ್ತೀಚೆಗೆ ದೆಹಲಿಯ ಮಾಣಿಕ್ ಶಾ ಕೇಂದ್ರದಲ್ಲಿ ಆಯೋಜಿಸಲಾದ 'ಚಾಣಕ್ಯ ರಕ್ಷಣಾ' ಸಂವಾದದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತದ ಮೊದಲ ಸಂಪೂರ್ಣ 'ದೇಶೀಯ ರಕ್ಷಣಾ AI-as-a-Service' (ALAAS) ನ್ನು ಬಿಡುಗಡೆ ಮಾಡಿದರು.

ಕನ್ನಡಿಗರು ಸ್ಥಾಪಿಸಿದ ಡೀಪ್ ಟೆಕ್ ಕಂಪನಿಯಾದ ನ್ಯೂರಾಲಿಕ್ಸ್, ರಕ್ಷಣಾ ಸಚಿವಾಲಯದ IDEX ADITY 2.0 ಉಪಕ್ರಮದ ಅಡಿಯಲ್ಲಿ ಭಾರತೀಯ ಸೇನೆಗಾಗಿ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಕೇಂದ್ರ ಸರ್ಕಾರ ದೇಶೀಯ ನಾವೀನ್ಯತೆಯ ಮೂಲಕ ಮುಂದಿನ ಪೀಳಿಗೆಯ ರಕ್ಷಣಾ ಸಾಮರ್ಥ್ಯವನ್ನು ನಿರ್ಮಿಸಲು ಅಡಿಪಾಯ ಹಾಕಿದೆ ಎಂದು ನ್ಯೂರಾಲಿಕ್ಸ್‌ ತಿಳಿಸಿದೆ.

ದೇಶೀಯ ರಕ್ಷಣಾ AI ಅಭಿವೃದ್ಧಿ ದೇಶದ ಮಿಲಿಟರಿಯನ್ನು ಬಲಪಡಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದು 'ಆತ್ಮನಿರ್ಭರ ಭಾರತ'ದ ಮಹತ್ವಾಕಾಂಕ್ಷೆಯ ಪರಿಕಲ್ಪನೆಯು ಬಲವನ್ನು ಪಡೆದುಕೊಂಡಿದೆ ಎಂದಿದ್ದಾರೆ.

"ರಕ್ಷಣಾ ಸಚಿವಾಲಯ, IDEX ADITY 2.0 ಉಪಕ್ರಮದ ಮೂಲಕ, ದೇಶದ ನವೋದ್ಯಮಗಳು ಮತ್ತು ನಾವೀನ್ಯಕಾರರಿಗೆ ರಕ್ಷಣಾ ನಾವೀನ್ಯತೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ನಿರ್ಮಿಸಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ಅವಕಾಶವನ್ನು ನೀಡುತ್ತಿದೆ" ಎಂದು ನ್ಯೂರಾಲಿಕ್ಸ್ AI ನ ಸಹ-ಸಂಸ್ಥಾಪಕ ವಿಕ್ರಮ್ ಜಯರಾಮ್ ಹೇಳಿದ್ದಾರೆ.

ಈ ಅವಕಾಶವನ್ನು ಬಳಸಿಕೊಂಡು, ನ್ಯೂರಾಲಿಕ್ಸ್ AI 'ದೇಶೀಯ ರಕ್ಷಣಾ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಭಾರತದಲ್ಲಿನ ಕಾರ್ಯತಂತ್ರದ ವಲಯಗಳಿಗೆ ಸ್ಥಳೀಯ AI ನಾವೀನ್ಯತೆಯನ್ನು ಚಾಲನೆ ಮಾಡುವಲ್ಲಿ ನಾವು ಪ್ರಮುಖ ಪಾತ್ರ ವಹಿಸಿದ್ದೇವೆ."

ಈ ಯೋಜನೆಯನ್ನು ಸ್ಥಳೀಯ ಲಾರ್ಜ್ ಲ್ಯಾಂಗ್ವೇಜ್ ಮಾಡ್ಯೂಲ್ (LLM) ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. AI ತಂತ್ರಜ್ಞಾನ ಕಮಾಂಡ್ ಸಪೋರ್ಟ್, ಡಾಕ್ಯುಮೆಂಟ್ ಇಂಟೆಲಿಜೆನ್ಸ್, ಸ್ಪೀಚ್ ಇಂಟರ್ಫೇಸ್, ಅನುವಾದ ಎಂಜಿನ್, ಆಪರೇಷನಲ್ ಅನಾಲಿಟಿಕ್ಸ್, ವಿದೇಶಿ ಕ್ಲೌಡ್ ಸೇವೆಗಳು, ಇಂಟರ್ನೆಟ್ ಸಂಪರ್ಕ, ಡೇಟಾ ಏಕೀಕರಣ ಮುಂತಾದ ಅನ್ವಯಿಕೆಗಳಲ್ಲಿ ಸಹಾಯ ಮಾಡುತ್ತದೆ. ಇದು ಸಶಸ್ತ್ರ ಪಡೆಗಳು ಸ್ವಾವಲಂಬಿ, ಭವಿಷ್ಯ-ಸಿದ್ಧ ಡಿಜಿಟಲ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ಕಾರ್ಯಾಚರಣೆಯ ಸಿದ್ಧತೆ ಮತ್ತು ಕಾರ್ಯಾಚರಣೆಗಳಿಗಾಗಿ ಆಮದು ಮಾಡಿಕೊಂಡ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದಿನಿಂದ ಚಳಿಗಾಲದ ಸಂಸತ್ ಅಧಿವೇಶನ: SIR ಕುರಿತ ಚರ್ಚೆಗೆ ವಿಪಕ್ಷಗಳಿಂದ ಪಟ್ಟು, ಸ್ಪಷ್ಟನೆ ನೀಡದ ಸರ್ಕಾರ

ಕುರ್ಚಿ ಕದನ: ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ನಡೆದ ಚರ್ಚೆ ಏನು?

' ನನ್ನ ರಾಜಕೀಯ ನೇರವಾದದ್ದು, ಯಾರ ಬೆನ್ನಿಗೂ ಚೂರಿ ಹಾಕಲ್ಲ, ನನ್ನ ಇತಿಮಿತಿ ತಿಳಿದಿದೆ- DKS ಸೈಲೆಂಟ್ ಗುಟ್ಟೇನು?

ಶಿವಮೊಗ್ಗ: ಪಠ್ಯ ಪುಸ್ತಕಗಳಲ್ಲಿ 'ಭಗವದ್ಗೀತೆ' ಸೇರಿಸಲು ಕೇಂದ್ರಕ್ಕೆ ಎಚ್.ಡಿ. ಕುಮಾರಸ್ವಾಮಿ ಒತ್ತಾಯ!

ವಿವಾಹ ಸಮಾರಂಭದಲ್ಲಿ ಅಸಭ್ಯ ವರ್ತನೆಗೆ ವಿರೋಧಿಸಿದ ಕ್ರೀಡಾಪಟುವಿನ ಮೇಲೆ ಕಬ್ಬಿಣದ ರಾಡ್ ನಿಂದ ಗುಂಪು ಹಲ್ಲೆ; ಭೀಕರ ಕೊಲೆ!

SCROLL FOR NEXT