ಹಿಮಾಚಲ ಸಿಎಂ ಸುಖ್ವಿಂದರ್ ಸಿಂಗ್ ಸುಖು online desk
ದೇಶ

ಹಳ್ಳ ಹಿಡಿದ ಗ್ಯಾರೆಂಟಿ ಯೋಜನೆ: ಸುಸ್ಥಿಯಲ್ಲಿರುವ ಗ್ರಾಹಕರಿಗೆ ಸಬ್ಸಿಡಿ ಬಿಟ್ಟುಕೊಡಲು ಸಿಎಂ ಮನವಿ, ಸ್ವತಃ ಬಿಟ್ಟುಕೊಟ್ಟ ಸುಖು!

ದಾಖಲೆಗಳ ಪ್ರಕಾರ ಸುಖ್ವಿಂದರ್ ಸುಖು ಹೆಸರಿನಲ್ಲಿ 6 ವಿದ್ಯುತ್ ಮೀಟರ್ ಗಳಿದ್ದು ಮಾಸಿಕ 625 ರೂಪಾಯಿಯಷ್ಟು ಸಬ್ಸಿಡಿ ಪಡೆಯುತ್ತಿದ್ದರು. ಈಗ ಹೊಸ ವರ್ಷದಿಂದ ಸಬ್ಸಿಡಿ ಬಿಟ್ಟುಕೊಡುವುದಾಗಿ ಸುಖು ತಿಳಿಸಿದ್ದಾರೆ.

ಶಿಮ್ಲಾ: ಹಿಮಾಚಲಪ್ರದೇಶದಲ್ಲಿ ಗ್ಯಾರೆಂಟಿ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ ತೀವ್ರ ಹೊರೆಯಾಗುತ್ತಿದೆ. ತೀಕ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿಮಾಚಲ ಪ್ರದೇಶ ಸರ್ಕಾರ ಈಗ ವಿದ್ಯುತ್ ಸಬ್ಸಿಡಿ ನಿಲ್ಲಿಸಲು ಚಿಂತನೆ ನಡೆಸುತ್ತಿದೆ. ಇದರ ಭಾಗವಾಗಿ ಸುಸ್ಥಿಯಲ್ಲಿರುವ ವಿದ್ಯುತ್ ಗ್ರಾಹಕರು ಸಬ್ಸಿಡಿಯನ್ನು ಬಿಟ್ಟುಕೊಡುವಂತೆ ಸ್ವತಃ ಸಿಎಂ ಸುಖ್ವಿಂದರ್ ಸುಖು ಮನವಿ ಮಾಡಿದ್ದಾರೆ. ಇದಷ್ಟೇ ಅಲ್ಲದೇ ತಾವೂ ಸಹ ಸಬ್ಸಿಡಿ ಬಿಟ್ಟುಕೊಡುತ್ತಿರುವುದಾಗಿ ತಿಳಿಸಿದ್ದಾರೆ.

ದಾಖಲೆಗಳ ಪ್ರಕಾರ ಸುಖ್ವಿಂದರ್ ಸುಖು ಹೆಸರಿನಲ್ಲಿ 6 ವಿದ್ಯುತ್ ಮೀಟರ್ ಗಳಿದ್ದು ಮಾಸಿಕ 625 ರೂಪಾಯಿಯಷ್ಟು ಸಬ್ಸಿಡಿ ಪಡೆಯುತ್ತಿದ್ದರು. ಈಗ ಹೊಸ ವರ್ಷದಿಂದ ಸಬ್ಸಿಡಿ ಬಿಟ್ಟುಕೊಡುವುದಾಗಿ ಸುಖು ತಿಳಿಸಿದ್ದಾರೆ.

“ರಾಜ್ಯದ ಶ್ರೀಮಂತ ನಾಗರಿಕರು ತಮ್ಮ ವಿದ್ಯುತ್ ಸಬ್ಸಿಡಿಗಳನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಡಬೇಕು. ಇದು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳನ್ನು ಬೆಂಬಲಿಸುತ್ತದೆ”ಎಂದು ಸಿಎಂ ಸುಖು ಕರೆ ನೀಡಿದ್ದಾರೆ. ಪ್ರಸ್ತುತ, ಒಂದು ಸಂಪರ್ಕಕ್ಕೆ 125-ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ.

"ಅನೌಪಚಾರಿಕ ಚರ್ಚೆ ಮತ್ತು ವಿವರವಾದ ಚರ್ಚೆಯಲ್ಲಿ ರಾಜ್ಯದ ಎಲ್ಲಾ ಕ್ಯಾಬಿನೆಟ್ ಸದಸ್ಯರು ಮತ್ತು ಕಾಂಗ್ರೆಸ್ ಶಾಸಕರು ತಮ್ಮ ಸಬ್ಸಿಡಿಗಳನ್ನು ತ್ಯಜಿಸಲು ಒಪ್ಪಿಕೊಂಡಿದ್ದಾರೆ" ಎಂದು ಸುಖು ಮಾಹಿತಿ ನೀಡಿದ್ದಾರೆ. ಸರ್ಕಾರ ವಾರ್ಷಿಕವಾಗಿ ವಿದ್ಯುತ್ ಸಬ್ಸಿಡಿಗಾಗಿ ₹ 2,200 ಕೋಟಿ ಮತ್ತು ವಿದ್ಯುತ್ ಮಂಡಳಿಯ ನೌಕರರ ಸಂಬಳ ಮತ್ತು ಪಿಂಚಣಿಗಾಗಿ ಮಾಸಿಕ ₹ 200 ಕೋಟಿ ಖರ್ಚು ಮಾಡುತ್ತದೆ.

“ರಾಜ್ಯಕ್ಕೆ ಸೇವೆ ಸಲ್ಲಿಸಿದವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದ್ದರೂ, ಸಬ್ಸಿಡಿಗಳು ನಿಜವಾದ ಅರ್ಹರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಶ್ರೀಮಂತ ವ್ಯಕ್ತಿಗಳು ಸಬ್ಸಿಡಿಗಳಿಂದ ಪ್ರಯೋಜನ ಪಡೆಯಬಾರದು, ಅದನ್ನು ಹಿಂದುಳಿದವರನ್ನು ಉನ್ನತೀಕರಿಸಲು ಉತ್ತಮವಾಗಿ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.

ಬಹು ವಿದ್ಯುತ್ ಮೀಟರ್‌ಗಳನ್ನು ಹೊಂದಿರುವ ಶ್ರೀಮಂತ ನಾಗರಿಕರು ರಾಜ್ಯದ ಅಭಿವೃದ್ಧಿಯನ್ನು ಬೆಂಬಲಿಸಲು ಸಬ್ಸಿಡಿಗಳನ್ನು ತ್ಯಜಿಸಬೇಕು. ಈ ಕ್ರಮಗಳಿಂದ ರಾಜ್ಯ ಸರ್ಕಾರ ವಾರ್ಷಿಕ ₹ 200 ಕೋಟಿ ಉಳಿತಾಯ ಮಾಡಬಹುದಾಗಿದ್ದು, ಬಡವರಿಗೆ ಉತ್ತಮ ಬೆಂಬಲ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. "ಹಿಮಾಚಲ ಪ್ರದೇಶ ಹೇರಳವಾದ ಸಂಪನ್ಮೂಲಗಳನ್ನು ಹೊಂದಿದೆ, ಆದರೆ ಸರ್ಕಾರವು ಆರ್ಥಿಕವಾಗಿ ನಿರ್ಬಂಧಿತವಾಗಿದೆ. ನಮ್ಮ ಸಾಮೂಹಿಕ ಪ್ರಯತ್ನಗಳು ಅದನ್ನು ಬದಲಾಯಿಸಬಹುದು ಎಂದು ಅವರು ಹೇಳಿದರು.

ಸಬ್ಸಿಡಿ ಬಿಟ್ಟುಕೊಡುವುದನ್ನು ಸುಲಭಗೊಳಿಸಲು, ಸರ್ಕಾರ ಟೋಲ್-ಫ್ರೀ ಸಂಖ್ಯೆ, 1100 ಮತ್ತು ಸಬ್ಸಿಡಿಗಳಿಂದ ಹೊರಗುಳಿಯಲು ಸರಳ ಫಾರ್ಮ್ ಅನ್ನು ಪರಿಚಯಿಸಿದೆ. ಬೋರ್ಡ್‌ನ ವಿದ್ಯುತ್ ಆನ್‌ಲೈನ್ ಪೋರ್ಟಲ್ ಮೂಲಕ ಸಹಾಯವಾಣಿ ಸಂಖ್ಯೆ 1100 ಅಥವಾ 1912 ಗೆ ಕರೆ ಮಾಡುವ ಮೂಲಕ ಅಥವಾ ಅವರ ಹತ್ತಿರದ ವಿದ್ಯುತ್ ಉಪ-ವಿಭಾಗಕ್ಕೆ ಭೇಟಿ ನೀಡುವ ಮೂಲಕ "ಸ್ವಯಂಪ್ರೇರಿತವಾಗಿ" ಸಬ್ಸಿಡಿಗಳನ್ನು ಬಿಟ್ಟುಕೊಡುವಂತೆ ಅವರು ಗ್ರಾಹಕರನ್ನು ಒತ್ತಾಯಿಸಿದರು.

ಹಿಮಾಚಲ ಪ್ರದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಮತ್ತು ರಾಜ್ಯದ ಆರ್ಥಿಕತೆಯ ಕ್ರಮೇಣ ಪುನರುಜ್ಜೀವನಕ್ಕೆ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 3 ವರ್ಷ ವಯೋಮಿತಿ ಸಡಿಲಿಕೆ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಟ್ರಂಪ್ ಹುಚ್ಚಾಟ: ಇದೀಗ ವಿದೇಶಿ ಸಿನಿಮಾಗಳ ಮೇಲೆ ಶೇ. 100ರಷ್ಟು ಸುಂಕ; ಕಾಂತಾರ 2 ಚಿತ್ರದ ಕಥೆಯೇನು?

New Drama! ಭಾರತಕ್ಕೆ ಏಷ್ಯಾ ಕಪ್‌ ನೀಡಲು ಹೊಸ ಷರತ್ತು ಹಾಕಿದ ನಖ್ವಿ, ಹೇಳಿದ್ದೇನು?

'Naqvi vs 3rd umpire': ಭಾರತ ಕ್ರಿಕೆಟ್ ತಂಡ ಅಭಿನಂದಿಸದ ಕಾಂಗ್ರೆಸ್; ಬಿಜೆಪಿ ಟೀಕೆಗೆ ಹೆಂಗಿದೆ ತಿರುಗೇಟು?

Ceasefire offer: ನಕ್ಸಲೀಯರೊಂದಿಗೆ 'ಕದನ ವಿರಾಮ' ಘೋಷಣೆಗೆ ಕೇಂದ್ರ ಸರ್ಕಾರವೇಕೆ ಒಪ್ಪುತ್ತಿಲ್ಲ?- ಡಿ. ರಾಜಾ

SCROLL FOR NEXT