ಚಂದನ್ ಗುಪ್ತಾ TNIE
ದೇಶ

ABVP ಕಾರ್ಯಕರ್ತ ಚಂದನ್ ಗುಪ್ತಾ ಕೊಲೆ: 28 ಮಂದಿ ದೋಷಿ, NIA ಕೋರ್ಟ್‌ ಮಹತ್ವದ ತೀರ್ಪು

2018ರ ಜನವರಿ 26ರಂದು ತಿರಂಗ ಯಾತ್ರೆಯ ವೇಳೆ ಕಾಸ್ಗಂಜ್‌ನಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಚಂದನ್ ಗುಪ್ತಾನನ್ನು ಹತ್ಯೆ ಮಾಡಲಾಗಿತ್ತು.

ಲಖನೌ: 2018ರಲ್ಲಿ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದ ABVP ಕಾರ್ಯಕರ್ತ ಚಂದನ್ ಗುಪ್ತಾ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ನೀಡಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ 30 ಆರೋಪಿಗಳ ಪೈಕಿ 28 ಮಂದಿ ತಪ್ಪಿತಸ್ಥರಾಗಿದ್ದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಇಬ್ಬರನ್ನು ಖುಲಾಸೆಗೊಳಿಸಲಾಗಿದೆ. ಶಿಕ್ಷೆ ಪ್ರಮಾಣ ಇನ್ನೂ ನಿರ್ಧಾರವಾಗಿಲ್ಲ.

ಕಾಸ್ಗಂಜ್‌ನಲ್ಲಿ ನಡೆದ ಚಂದನ್ ಗುಪ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌದ ಎನ್‌ಐಎ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದೆ. 2018ರ ಜನವರಿ 26ರಂದು ತಿರಂಗ ಯಾತ್ರೆಯ ವೇಳೆ ಕಾಸ್ಗಂಜ್‌ನಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಚಂದನ್ ಗುಪ್ತಾನನ್ನು ಹತ್ಯೆ ಮಾಡಲಾಗಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿವೇಕಾನಂದ ಶರಣ್ ತ್ರಿಪಾಠಿ ನೇತೃತ್ವದ ನ್ಯಾಯಾಲಯವು ಆರೋಪಿiNvdvg ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ.

ಕಾಸ್ಗಂಜ್ ಪೊಲೀಸರು 2018ರ ಜುಲೈನಲ್ಲಿ ಸೆಕ್ಷನ್ 124 ಎ (ದೇಶದ್ರೋಹ) ಸೇರಿಸಿ ಚಾರ್ಜ್ ಶೀಟ್ ಸಲ್ಲಿಸಿದರು. ಈ ಕಾರಣದಿಂದಾಗಿ ಪ್ರಕರಣವನ್ನು ಎನ್ಐಎ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಆರಂಭದಲ್ಲಿ 30 ಜನರ ಮೇಲೆ ಆರೋಪ ಹೊರಿಸಲಾಗಿತ್ತು. ಆದಾಗ್ಯೂ, ಆರೋಪಗಳ ರಚನೆಯ ಸಮಯದಲ್ಲಿ ಅಸಿಮ್ ಖುರೇಷಿ ಮತ್ತು ನಾಸಿರುದ್ದೀನ್ ಅವರನ್ನು ಖುಲಾಸೆಗೊಳಿಸಲಾಯಿತು. ಗಣರಾಜ್ಯೋತ್ಸವ ದಿನದಂದು "ತಿರಂಗಾ ಯಾತ್ರೆ" ವೇಳೆ ಈ ಘಟನೆ ನಡೆದಿತ್ತು. ಅಂದು ವಿಎಚ್‌ಪಿ, ಎಬಿವಿಪಿ ಮತ್ತು ಹಿಂದೂ ಯುವ ವಾಹಿನಿಯ ಸದಸ್ಯರ ನೇತೃತ್ವದಲ್ಲಿ 100 ಬೈಕ್ ಗಳ ಮೇಲೆ ತ್ರಿವರ್ಣ ಧ್ವಜ ಮತ್ತು ಕೇಸರಿ ಧ್ವಜಗಳನ್ನು ಹಾಕಿ ಯಾತ್ರೆ ನಡೆಸಲಾಗಿತ್ತು.

ರ್ಯಾಲಿಯು ಪ್ರಧಾನವಾಗಿ ಮುಸ್ಲಿಂ ಪ್ರಾಬಲ್ಯವಿರುವ ಬದ್ದುನಗರ ಪ್ರದೇಶವನ್ನು ಪ್ರವೇಶಿಸಿದ್ದು ಘರ್ಷಣೆಯನ್ನು ಪ್ರಚೋದಿಸಿತು. ನಂತರ ಅಲ್ಲಿ ಕಲ್ಲು ತೂರಾಟ ಆರಂಭವಾಯಿತು. ಈ ಗೊಂದಲದ ನಡುವೆ ಎಬಿವಿಪಿ ಕಾರ್ಯಕರ್ತ ಚಂದನ್ ಗುಪ್ತಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಿಂಸಾಚಾರವು ಕಾಸ್ಗಂಜ್‌ನಲ್ಲಿ ಅಶಾಂತಿಗೆ ಕಾರಣವಾಯಿತು. ಇದು ಒಂದು ವಾರದ ಕರ್ಫ್ಯೂ ಮತ್ತು ಇಂಟರ್ನೆಟ್ ಸ್ಥಗಿತಕ್ಕೆ ಕಾರಣವಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT