ಸಾಂದರ್ಭಿಕ ಚಿತ್ರ 
ದೇಶ

ಗುಜರಾತ್: 2021 ರಿಂದ ಇಲ್ಲಿಯವರೆಗೆ 16,155 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ

ಮಾದಕವಸ್ತು ಕಳ್ಳಸಾಗಣೆ ನಿಗ್ರಹಿಸಲು ಜಾರಿಗೆ ತರಲಾದ ಎನ್ ಆರ್ ಪಿ ನೀತಿಯು 1985 ರ NDPS ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಮಾದಕವಸ್ತು ಪತ್ತೆಯನ್ನು ಹೆಚ್ಚಿಸಿದೆ.

ಅಹಮದಾಬಾದ್: ಗುಜರಾತ್ ಪೊಲೀಸರು 2021 ರಿಂದ ಇಲ್ಲಿವರೆಗೆ 16,155 ಕೋಟಿ ಮೌಲ್ಯದ 87,607 ಕಿಲೋಗ್ರಾಂಗಳಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಮಾದಕ ದ್ರವ್ಯ ರಿವಾರ್ಡ್ ನೀತಿ(ಎನ್ ಆರ್ ಪಿ)ಯಡಿಯಲ್ಲಿ ತೀವ್ರಗೊಂಡ ಕಾರ್ಯಚರಣೆಗಳನ್ನು ಎತ್ತಿ ತೋರಿಸುತ್ತದೆ.

ಮಾದಕವಸ್ತು ಕಳ್ಳಸಾಗಣೆ ನಿಗ್ರಹಿಸಲು ಜಾರಿಗೆ ತರಲಾದ ಎನ್ ಆರ್ ಪಿ ನೀತಿಯು 1985 ರ NDPS ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಮಾದಕವಸ್ತು ಪತ್ತೆಯನ್ನು ಹೆಚ್ಚಿಸಿದೆ. ಈ ಕ್ರಮದಲ್ಲಿ 2,500 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ ಮತ್ತು ಡಿಜಿಪಿ ಸಮಿತಿಯು 64 ವ್ಯಕ್ತಿಗಳಿಗೆ 51,202 ರೂ ಬಹುಮಾನ ಘೋಷಿಸಿದೆ.

ಏತನ್ಮಧ್ಯೆ, ಎಸಿಎಸ್, ಗೃಹ ಮಟ್ಟದ ಸಮಿತಿಯು 169 ಜನರಿಗೆ 6.36 ಕೋಟಿ ರೂ. ಮಂಜೂರು ಮಾಡಿದೆ. ಇದಲ್ಲದೆ, 737 ವ್ಯಕ್ತಿಗಳಿಗೆ 5.13 ಕೋಟಿ ರೂ. ಬಹುಮಾನ ನೀಡುವ ಪ್ರಸ್ತಾಪವನ್ನು ಎನ್‌ಸಿಬಿ ಸಮಿತಿ ಪರಿಶೀಲಿಸುತ್ತಿದೆ.

1985 ರ NDPS ಕಾಯ್ದೆಯು ಮಾಹಿತಿದಾರರಿಗೆ ವಶಪಡಿಸಿಕೊಂಡ ಮಾದಕ ವಸ್ತುಗಳ ಮಾರುಕಟ್ಟೆ ಮೌಲ್ಯದ ಶೇ. 20ರ ವರೆಗೆ ಲಾಭದಾಯಕ ಬಹುಮಾನವನ್ನು ನೀಡಲಾಗುತ್ತಿದೆ. ಈ ಮೂಲಕ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಸಹಾಯ ಮಾಡುವ ಸರ್ಕಾರಿ ನೌಕರರು ತಮ್ಮ ವೃತ್ತಿಜೀವನದಲ್ಲಿ 20 ಲಕ್ಷ ರೂ.ಗಳವರೆಗೆ ಬಹುಮಾನ ಗಳಿಸಬಹುದು. ಪ್ರತಿ ಪ್ರಕರಣಕ್ಕೆ 2 ಲಕ್ಷ ರೂ. ಸೀಮಿತಗೊಳಿಸಲಾಗಿದೆ. ಕಚೇರಿ ಕೆಲಸದಲ್ಲಿ ಸಹಾಯ ಮಾಡುವ ಖಾಸಗಿ ವ್ಯಕ್ತಿಗಳಿಗೆ ಪ್ರತಿ ಪ್ರಕರಣಕ್ಕೆ ರೂ. 2,500 ನೀಡಲಾಗುತ್ತದೆ.

NDPS ಕಾಯ್ದೆಯಡಿಯಲ್ಲಿ ಮಾಹಿತಿದಾರರಿಗೆ ನೀಡುವ ಬಹುಮಾನಗಳು ಅವರು ಒದಗಿಸುವ ಮಾಹಿತಿಯ ನಿಖರತೆ ಮತ್ತು ಮಹತ್ವವನ್ನು ಅವಲಂಬಿಸಿರುತ್ತದೆ. ಜೊತೆಗೆ ಬಂಧನದ ಸಮಯದಲ್ಲಿ ಅವರು ಎದುರಿಸುವ ಅಪಾಯಗಳನ್ನು ಅವಲಂಬಿಸಿರುತ್ತದೆ. ಸರ್ಕಾರಿ ಅಧಿಕಾರಿಗಳಿಗೆ, ಯಶಸ್ವಿ ವಶಪಡಿಸಿಕೊಳ್ಳುವಿಕೆಯು ಅವರ ಪ್ರಯತ್ನ, ಕಾರ್ಯಾಚರಣೆಯ ಅಪಾಯಗಳು, ಜಾಗರೂಕತೆ ಮತ್ತು ಸಂಬಂಧಿತ ಬಂಧನಗಳ ಆಧಾರದ ಮೇಲೆ ನೀಡಲಾಗುತ್ತದೆ.

ಗುಜರಾತ್‌ನ ಯುವಕರನ್ನು ರಕ್ಷಿಸಲು ಮತ್ತು ಮಾದಕವಸ್ತು ಜಾಲಗಳನ್ನು ನಿರ್ಮೂಲನೆ ಮಾಡಲು ಮಾದಕವಸ್ತು ಬಹುಮಾನ ನೀತಿಯು ಒಂದು ಪ್ರಮುಖ ಕ್ರಮವಾಗಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT