ಎಲ್&ಟಿ ಅಧ್ಯಕ್ಷ ಸುಬ್ರಹ್ಮಣ್ಯನ್- ಹರ್ಷ್ ಗೋಯೆಂಕಾ online desk
ದೇಶ

90-hour work week: ರಜೆಯನ್ನು ಪೌರಾಣಿಕ ಪರಿಕಲ್ಪನೆ ಮಾಡಿಬಿಡಿ; ಈ ರೀತಿಯ ಕೆಲಸ ಬಳಲಿಕೆಗೆ ದಾರಿ, ಯಶಸ್ಸಿಗಲ್ಲ- Harsh Goenka

ಕೆಲಸ-ಜೀವನದ ಸಮತೋಲನ ಆಯ್ಕೆಯಲ್ಲ, ಅದು ಅತ್ಯಗತ್ಯ. ಇದು ನನ್ನ ಅಭಿಪ್ರಾಯವಷ್ಟೇ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಗುಲಾಮಿತನದಿಂದ ಅಲ್ಲ ಎಂದು ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ನವದೆಹಲಿ: ದೇಶಾದ್ಯಂತ ಈಗ ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕೆಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸದ ಬಗ್ಗೆ ಮಾತನಾಡಿದ್ದ ಬೆನ್ನಲ್ಲೆ 70 ಅಲ್ಲ 90 ಗಂಟೆ ಕೆಲಸ ಮಾಡಬೇಕು ಭಾನುವಾರಗಳಂದೂ ಕೆಲಸ ಮಾಡಬೇಕೆಂದು L&T ಅಧ್ಯಕ್ಷ ಎಸ್ ಎನ್ ಸುಬ್ರಹ್ಮಣ್ಯನ್ ಹೇಳಿದ್ದರು.

ಈಗ ಎಲ್&ಟಿ ಅಧ್ಯಕ್ಷರ ಅಭಿಪ್ರಾಯದ ಬಗ್ಗೆ RPG ಸಮೂಹಗಳ ಅಧ್ಯಕ್ಷ ಹರ್ಷ್ ಗೋಯೆಂಕಾ ಕಳವಳ ವ್ಯಕ್ತಪಡಿಸಿದ್ದಾರೆ. ವಾರಕ್ಕೆ 90 ಗಂಟೆಗಳ ಕೆಲಸದ ಪರಿಕಲ್ಪನೆ ಸೂಕ್ತವಲ್ಲ ಎಂದು ಹೇಳಿರುವ ಗೋಯೆಂಕಾ, ವಾರಕ್ಕೆ 90 ಗಂಟೆಗಳು? ಅದರ ಬದಲು Sunday ಗಳನ್ನು ‘Sun-duty’ ಎಂದೇಕೆ ಮರುನಾಮಕರಣ ಮಾಡಬಾರದು? ರಜೆ ದಿನಗಳನ್ನು ಪೌರಾಣಿಕ ಪರಿಕಲ್ಪನೆಯನ್ನಾಗಿ ಮಾಡಿಬಿಡಿ, ಶ್ರಮವಹಿಸಿ, ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಎನ್ನುವುದು ನನ್ನ ನಂಬಿಕೆ. ಆದರೆ ಜೀವನವನ್ನು ಶಾಶ್ವತ ಕಚೇರಿಯನ್ನಾಗಿ ಬದಲಾವಣೆ ಮಾಡುವುದೆಂದರೆ ಅದು ಬಳಲಿಕೆಗೆ ದಾರಿಯಾಗುತ್ತದೆಯಷ್ಟೇ ಹೊರತು ಯಶಸ್ಸಿಗಲ್ಲ ಎಂದು ಗೋಯೆಂಕಾ ಹೇಳಿದ್ದಾರೆ.

ಕೆಲಸ-ಜೀವನದ ಸಮತೋಲನ ಆಯ್ಕೆಯಲ್ಲ, ಅದು ಅತ್ಯಗತ್ಯ. ಇದು ನನ್ನ ಅಭಿಪ್ರಾಯವಷ್ಟೇ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಗುಲಾಮಿತನದಿಂದ ಅಲ್ಲ ಎಂದು ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಇತ್ತೀಚೆಗೆ ನೌಕರರೊಂದಿಗಿನ ಸಭೆಯಲ್ಲಿ ಸುಬ್ರಹ್ಮಣ್ಯನ್ ವಾರಕ್ಕೆ 90 ಗಂಟೆಗಳ ಕಾಲ ನೌಕರರು ಕೆಲಸ ಮಾಡಬೇಕೆಂದು ಹೇಳಿದ್ದರು. ನೌಕರರು ಭಾನುವಾರದ ರಜೆಗಳನ್ನು ತ್ಯಜಿಸಬೇಕು ಎಂದು ಹರ್ಷ್ ಗೋಯೆಂಕಾ ಹೇಳಿದ್ದರು.

"ಭಾನುವಾರಗಳಂದು ನಿಮ್ಮಿಂದ ಕೆಲಸ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ನಾನು ವಿಷಾದಿಸುತ್ತೇನೆ. ಭಾನುವಾರಗಳಂದು ನಾನು ನಿಮ್ಮನ್ನು ಕೆಲಸ ಮಾಡಲು ಬಿಟ್ಟರೆ, ನಾನು ಹೆಚ್ಚು ಸಂತೋಷಪಡುತ್ತೇನೆ, ಏಕೆಂದರೆ ನಾನು ಭಾನುವಾರ ಕೆಲಸ ಮಾಡುತ್ತೇನೆ. ನೀವು ನಿಮ್ಮ ಹೆಂಡತಿಯನ್ನು ಎಷ್ಟು ಹೊತ್ತು ನೋಡಬಹುದು?" ಎಂದು ಸುಬ್ರಹ್ಮಣ್ಯನ್ ರೆಡ್ಡಿಟ್‌ನಲ್ಲಿ ಪ್ರಸಾರವಾಗಿರುವ ವೀಡಿಯೊದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT