ಚೆಂಗೂರ್ ಬಾಬಾ ನಿವಾಸ 
ದೇಶ

ಮತಾಂತರ ಜಾಲ: Chhangur Baba, ಸಹಚರರ ಆಸ್ತಿಗಳ ಮೇಲೆ ಇಡಿ ದಾಳಿ

ಸ್ವಯಂ ಘೋಷಿತ ಧರ್ಮ ವೈದ್ಯ ಜಮಾಲುದ್ದೀನ್‌ ಶಾ ಅಥವಾ ಛಂಗೂರ್‌ ಬಾಬಾ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 14 ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಏಕಕಾಲದಲ್ಲಿ ದಾಳಿ ನಡೆಸಿದೆ.

ನವದೆಹಲಿ: ಮತಾಂತರ ಜಾಲವನ್ನು ನಡೆಸುತ್ತಿದ್ದ ಮತ್ತು ವಿದೇಶಿ ನಿಧಿಯಿಂದ ಅಪಾರ ಸಂಪತ್ತು ಗಳಿಸಿದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಸ್ವಯಂ ಘೋಷಿತ ಪಾದ್ರಿ ಜಮಾಲುದ್ದೀನ್‌ ಶಾ ಅಥವಾ ಛಂಗೂರ್‌ ಬಾಬಾ ಗೆ ಸಂಬಂಧಿಸಿದ 14 ಸಂಸ್ಥೆಗಳ ಮೇಲೆ ಇಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌)ದಿಂದ ಬಂಧನಕ್ಕೊಳಪಟ್ಟಿರುವ ಸ್ವಯಂ ಘೋಷಿತ ಧರ್ಮ ವೈದ್ಯ ಜಮಾಲುದ್ದೀನ್‌ ಶಾ ಅಥವಾ ಛಂಗೂರ್‌ ಬಾಬಾ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 14 ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಏಕಕಾಲದಲ್ಲಿ ದಾಳಿ ನಡೆಸಿದೆ.

ಚೆಂಗೂರ್ ಬಾಬಾ ಪ್ರಮುಖ ಧಾರ್ಮಿಕ ಮತಾಂತರ ಜಾಲದ ಸೂತ್ರಧಾರಿ ಎಂಬ ಆರೋಪದ ನಂತರ ಉತ್ತರ ಪ್ರದೇಶದ ಬಲರಾಂಪುರದಲ್ಲಿ 12 ಸ್ಥಳಗಳಲ್ಲಿ ಮತ್ತು ಮುಂಬೈನಲ್ಲಿ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಜಾರಿ ನಿರ್ದೇಶನಾಲಯವು ಗಣನೀಯ ಪ್ರಮಾಣದ ಭೂ ದಾಖಲೆಗಳು, ಐಷಾರಾಮಿ ವಾಹನಗಳು, ಚಿನ್ನ ಮತ್ತು ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ದಾಳಿ ನಡೆಸಲಾದ ಪ್ರಮುಖ ಸ್ಥಳಗಳಲ್ಲಿ ಒಂದು ಮುಂಬೈನ ಶಹಜಾದ್‌ ಶೇಖ್‌ಗೆ ಸಂಬಂಧಿಸಿದೆ. ಅಲ್ಲಿ ತನಿಖಾಧಿಕಾರಿಗಳು ಛಂಗೂರ್‌ ಬಾಬಾ ಅವರ ಖಾತೆಗಳಿಂದ ಶೇಖ್‌ ಅವರ ಖಾತೆಗಳಿಗೆ ಒಂದು ಕೋಟಿ ರೂ.ಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ ಎಂಬುದನ್ನು ಪತ್ತೆ ಮಾಡಲಾಗಿದೆ.

ತಾಯತ, ಉಗುರ ಮಾರುತ್ತಿದ್ದ ಚೆಂಗೂರ್ ಬಾಬಾ

ಒಂದು ಕಾಲದಲ್ಲಿ ತನ್ನ ಸೈಕಲ್‌ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದ ಛಂಗೂರ್‌ ಬಾಬಾ, ಈಗ ವಿದೇಶಿ ಮೂಲದಿಂದ ಹಣ ಸಂಗ್ರಹಿಸಲಾದ ಅತ್ಯಾಧುನಿಕ ಮತಾಂತರ ಸಿಂಡಿಕೇಟ್‌ ಅನ್ನು ನಡೆಸುತ್ತಿರುವ ಆರೋಪ ಎದುರಿಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಈ ಹಿಂದೆ ಆತನ ಸಹ ಆರೋಪಿ ನೀತು ಅಲಿಯಾಸ್‌ ನಸ್ರೀನ್‌ ಮತ್ತು ಆಕೆಯ ಪತಿ ನವೀನ್‌ ಅವರನ್ನು ವಶಕ್ಕೆ ಪಡೆದಿತ್ತು. ಛಂಗೂರ್‌ ಬಾಬಾ ಧಾರ್ಮಿಕ ನಂಬಿಕೆಯ ಸೋಗಿನಲ್ಲಿ ತನ್ನ ಚಟುವಟಿಕೆಗಳನ್ನು ಮರೆಮಾಚುತ್ತಾ ಗಣನೀಯ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಪ್ರಾಥಮಿಕ ತನಿಖೆಗಳು ಆತನೊಂದಿಗೆ ಸಂಬಂಧ ಹೊಂದಿದೆ ಎಂದು ನಂಬಲಾದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಪತ್ತೆಹಚ್ಚಿವೆ.

ಛಂಗೂರ್‌ ಬಾಬಾ ಅವರ ಆಪ್ತ ವಲಯ, ನೀತು ಅಲಿಯಾಸ್‌ ನಸ್ರೀನ್‌ ಸೇರಿದಂತೆ ಅವರ ಆಪ್ತ ಅನುಯಾಯಿಗಳು, ಸಹಚರರು ಮತ್ತು ವ್ಯವಸ್ಥಾಪಕರನ್ನು ಒಳಗೊಳ್ಳಲು ವಿಸ್ತರಿಸಿದೆ. ಅಧಿಕಾರಿಗಳು ಪ್ರಸ್ತುತ ಅವರ ಬ್ಯಾಂಕ್‌ ಖಾತೆಗಳು, ಹಣಕಾಸು ವಹಿವಾಟುಗಳು ಮತ್ತು ಸ್ಥಿರ ಆಸ್ತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವಿದೇಶಿ ವಹಿವಾಟುಗಳು ಆಪಾದಿತ ಮತಾಂತರ ಕಾರ್ಯಾಚರಣೆಗಳಿಗೆ ಸಂಬಂಧಿಸಿವೆಯೇ ಎಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಪ್ರಧಾನಿ ಮೋದಿ ಸಹಾಯದ ಭರವಸೆ; ಕೊಚ್ಚಿಯಲ್ಲಿ 'ವಿಕ್ಷಿತ್ ಕೇರಳಂ'ಗೆ ಚಾಲನೆ

ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್‌ ದಾಳಿ; ಭಾರತೀಯ ಸೇರಿ ನಾಲ್ವರಿಗೆ ಗಾಯ

'ಲೋಕಸಭೆಯಲ್ಲಿ ನಾನು ಮಾತನಾಡದಂತೆ ಹಲವು ಬಾರಿ ತಡೆದರು': ರಾಹುಲ್ ಗಾಂಧಿ

ಲ್ಯಾಂಡಿಂಗ್ ಆಗುವಾಗ ಕಳಚಿಬಿದ್ದ ವಿಮಾನದ ಚಕ್ರಗಳು: ಫುಕೆಟ್ ವಿಮಾನ ನಿಲ್ದಾಣ ತಾತ್ಕಾಲಿಕವಾಗಿ ಬಂದ್!

ಬೆಂಗಳೂರಿನಲ್ಲಿ ಗೃಹಬಳಕೆ ಎಲ್‌ಪಿಜಿಯಲ್ಲೂ ಕೊರತೆ: ಬುಕಿಂಗ್ ನಂಬರ್ ಸ್ವಿಚ್ ಆಫ್; ಹೆಚ್ಚಿದ ಆತಂಕ

SCROLL FOR NEXT