ಚೆಂಗೂರ್ ಬಾಬಾ ನಿವಾಸ 
ದೇಶ

ಮತಾಂತರ ಜಾಲ: Chhangur Baba, ಸಹಚರರ ಆಸ್ತಿಗಳ ಮೇಲೆ ಇಡಿ ದಾಳಿ

ಸ್ವಯಂ ಘೋಷಿತ ಧರ್ಮ ವೈದ್ಯ ಜಮಾಲುದ್ದೀನ್‌ ಶಾ ಅಥವಾ ಛಂಗೂರ್‌ ಬಾಬಾ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 14 ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಏಕಕಾಲದಲ್ಲಿ ದಾಳಿ ನಡೆಸಿದೆ.

ನವದೆಹಲಿ: ಮತಾಂತರ ಜಾಲವನ್ನು ನಡೆಸುತ್ತಿದ್ದ ಮತ್ತು ವಿದೇಶಿ ನಿಧಿಯಿಂದ ಅಪಾರ ಸಂಪತ್ತು ಗಳಿಸಿದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಸ್ವಯಂ ಘೋಷಿತ ಪಾದ್ರಿ ಜಮಾಲುದ್ದೀನ್‌ ಶಾ ಅಥವಾ ಛಂಗೂರ್‌ ಬಾಬಾ ಗೆ ಸಂಬಂಧಿಸಿದ 14 ಸಂಸ್ಥೆಗಳ ಮೇಲೆ ಇಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌)ದಿಂದ ಬಂಧನಕ್ಕೊಳಪಟ್ಟಿರುವ ಸ್ವಯಂ ಘೋಷಿತ ಧರ್ಮ ವೈದ್ಯ ಜಮಾಲುದ್ದೀನ್‌ ಶಾ ಅಥವಾ ಛಂಗೂರ್‌ ಬಾಬಾ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 14 ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಏಕಕಾಲದಲ್ಲಿ ದಾಳಿ ನಡೆಸಿದೆ.

ಚೆಂಗೂರ್ ಬಾಬಾ ಪ್ರಮುಖ ಧಾರ್ಮಿಕ ಮತಾಂತರ ಜಾಲದ ಸೂತ್ರಧಾರಿ ಎಂಬ ಆರೋಪದ ನಂತರ ಉತ್ತರ ಪ್ರದೇಶದ ಬಲರಾಂಪುರದಲ್ಲಿ 12 ಸ್ಥಳಗಳಲ್ಲಿ ಮತ್ತು ಮುಂಬೈನಲ್ಲಿ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಜಾರಿ ನಿರ್ದೇಶನಾಲಯವು ಗಣನೀಯ ಪ್ರಮಾಣದ ಭೂ ದಾಖಲೆಗಳು, ಐಷಾರಾಮಿ ವಾಹನಗಳು, ಚಿನ್ನ ಮತ್ತು ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ದಾಳಿ ನಡೆಸಲಾದ ಪ್ರಮುಖ ಸ್ಥಳಗಳಲ್ಲಿ ಒಂದು ಮುಂಬೈನ ಶಹಜಾದ್‌ ಶೇಖ್‌ಗೆ ಸಂಬಂಧಿಸಿದೆ. ಅಲ್ಲಿ ತನಿಖಾಧಿಕಾರಿಗಳು ಛಂಗೂರ್‌ ಬಾಬಾ ಅವರ ಖಾತೆಗಳಿಂದ ಶೇಖ್‌ ಅವರ ಖಾತೆಗಳಿಗೆ ಒಂದು ಕೋಟಿ ರೂ.ಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ ಎಂಬುದನ್ನು ಪತ್ತೆ ಮಾಡಲಾಗಿದೆ.

ತಾಯತ, ಉಗುರ ಮಾರುತ್ತಿದ್ದ ಚೆಂಗೂರ್ ಬಾಬಾ

ಒಂದು ಕಾಲದಲ್ಲಿ ತನ್ನ ಸೈಕಲ್‌ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದ ಛಂಗೂರ್‌ ಬಾಬಾ, ಈಗ ವಿದೇಶಿ ಮೂಲದಿಂದ ಹಣ ಸಂಗ್ರಹಿಸಲಾದ ಅತ್ಯಾಧುನಿಕ ಮತಾಂತರ ಸಿಂಡಿಕೇಟ್‌ ಅನ್ನು ನಡೆಸುತ್ತಿರುವ ಆರೋಪ ಎದುರಿಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಈ ಹಿಂದೆ ಆತನ ಸಹ ಆರೋಪಿ ನೀತು ಅಲಿಯಾಸ್‌ ನಸ್ರೀನ್‌ ಮತ್ತು ಆಕೆಯ ಪತಿ ನವೀನ್‌ ಅವರನ್ನು ವಶಕ್ಕೆ ಪಡೆದಿತ್ತು. ಛಂಗೂರ್‌ ಬಾಬಾ ಧಾರ್ಮಿಕ ನಂಬಿಕೆಯ ಸೋಗಿನಲ್ಲಿ ತನ್ನ ಚಟುವಟಿಕೆಗಳನ್ನು ಮರೆಮಾಚುತ್ತಾ ಗಣನೀಯ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಪ್ರಾಥಮಿಕ ತನಿಖೆಗಳು ಆತನೊಂದಿಗೆ ಸಂಬಂಧ ಹೊಂದಿದೆ ಎಂದು ನಂಬಲಾದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಪತ್ತೆಹಚ್ಚಿವೆ.

ಛಂಗೂರ್‌ ಬಾಬಾ ಅವರ ಆಪ್ತ ವಲಯ, ನೀತು ಅಲಿಯಾಸ್‌ ನಸ್ರೀನ್‌ ಸೇರಿದಂತೆ ಅವರ ಆಪ್ತ ಅನುಯಾಯಿಗಳು, ಸಹಚರರು ಮತ್ತು ವ್ಯವಸ್ಥಾಪಕರನ್ನು ಒಳಗೊಳ್ಳಲು ವಿಸ್ತರಿಸಿದೆ. ಅಧಿಕಾರಿಗಳು ಪ್ರಸ್ತುತ ಅವರ ಬ್ಯಾಂಕ್‌ ಖಾತೆಗಳು, ಹಣಕಾಸು ವಹಿವಾಟುಗಳು ಮತ್ತು ಸ್ಥಿರ ಆಸ್ತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವಿದೇಶಿ ವಹಿವಾಟುಗಳು ಆಪಾದಿತ ಮತಾಂತರ ಕಾರ್ಯಾಚರಣೆಗಳಿಗೆ ಸಂಬಂಧಿಸಿವೆಯೇ ಎಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Amritsar: ಉಗ್ರರ ದಾಳಿ ಸಂಚು ವಿಫಲ; ISI ಜೊತೆಗೆ ನಂಟು ಹೊಂದಿದ್ದ ಇಬ್ಬರ ಬಂಧನ; ರಾಕೆಟ್ ಚಾಲಿತ ಗ್ರೆನೇಡ್ ವಶಕ್ಕೆ!

ವ್ಲಾಡಿಮಿರ್ ಕ್ರಾಮ್ನಿಕ್ ವಂಚನೆ ಆರೋಪ: ಗ್ರ್ಯಾಂಡ್ ಮಾಸ್ಟರ್ ಡೇನಿಯಲ್ ನರೋಡಿಟ್ಸ್ಕಿ ಆತ್ಮಹತ್ಯೆ; ನಿಹಾಲ್ ಸರಿನ್ ಆಕ್ರೋಶ!

ಮಾನ್ಯ ವೀಸಾ ಹೊಂದಿದ್ದರೂ ಹಿಂದಿ ವಿದ್ವಾಂಸೆ ಫ್ರಾನ್ಸೆಸ್ಕಾ ಓರ್ಸಿನಿಗೆ ಭಾರತ ಪ್ರವೇಶಕ್ಕೆ ನಿರಾಕರಣೆ!

ಸೊಸೆ ಜೊತೆ ತಂದೆ ಅಕ್ರಮ ಸಂಬಂಧ: ಮಗನ ಕೊಲೆ ಆರೋಪ; ತಂದೆ ಮಾಜಿ DGP ಮುಸ್ತಫಾ, ತಾಯಿ, ಪತ್ನಿ ವಿರುದ್ಧ FIR!

India 'Proxy war': ಪಾಕಿಸ್ತಾನದ ಆರೋಪಕ್ಕೆ ಅಪ್ಘಾನಿಸ್ತಾನ ತಿರುಗೇಟು! ಹೇಳಿದ್ದೇನು? Video

SCROLL FOR NEXT