ಒಂದು ವರ್ಷದ ಮಗು ಗೋವಿಂದಾ 
ದೇಶ

ಪವಾಡ ಸದೃಶ ಘಟನೆ: ವಿಷಪೂರಿತ ನಾಗರಹಾವನ್ನು ಕಚ್ಚಿದ ಒಂದು ವರ್ಷದ ಮಗು; ಹಾವು ಸಾವು, ಮೂರ್ಛೆ ಹೋಗಿದ್ದ ಮಗುವಿಗೆ ಏನಾಯ್ತು? Video

ಅತ್ಯಂತ ಧೈರ್ಯಶಾಲಿ ಕೂಡ ಬುಸುಗುಡುವ ವಿಷಪೂರಿತ ನಾಗರಹಾವನ್ನು ನೋಡಿ ಬೆವರಲು ಪ್ರಾರಂಭಿಸುತ್ತಾನೆ. ಆದರೆ ಬಿಹಾರದ ಬೆಟ್ಟಿಯಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಒಂದು ವರ್ಷದ ಮಗು ವಿಷಪೂರಿತ ನಾಗರಹಾವನ್ನು ಕಚ್ಚಿದೆ.

ಅತ್ಯಂತ ಧೈರ್ಯಶಾಲಿ ಕೂಡ ಬುಸುಗುಡುವ ವಿಷಪೂರಿತ ನಾಗರಹಾವನ್ನು ನೋಡಿ ಬೆವರಲು ಪ್ರಾರಂಭಿಸುತ್ತಾನೆ. ಆದರೆ ಬಿಹಾರದ ಬೆಟ್ಟಿಯಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಒಂದು ವರ್ಷದ ಮಗು ವಿಷಪೂರಿತ ನಾಗರಹಾವನ್ನು ಕಚ್ಚಿದೆ. ಇದರಿಂದಾಗಿ ಹಾವು ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಹಾವನ್ನು ಕಚ್ಚಿದ ಕೆಲವು ಗಂಟೆಗಳ ನಂತರ ಮಗು ಕೂಡ ಮೂರ್ಛೆ ಹೋಯಿತು.

ಈ ಘಟನೆ ಪಶ್ಚಿಮ ಚಂಪಾರಣ್ ಜಿಲ್ಲೆಯ ಮಜೌಲಿಯಾ ಬ್ಲಾಕ್‌ನ ಮೊಹ್ಚಿ ಬಂಕಟ್ವಾ ಗ್ರಾಮದಲ್ಲಿ ನಡೆದಿದೆ. ಮಗುವನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಜೌಲಿಯಾ ಪಿಎಚ್‌ಸಿಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ, ಬೆಟ್ಟಿಯಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ರವಾನಿಸಲಾಗಿತ್ತು.

ಮಾಹಿತಿಯ ಪ್ರಕಾರ, ಸುನಿಲ್ ಸಾ ಅವರ ಒಂದು ವರ್ಷದ ಮಗ ಗೋವಿಂದ ನಿನ್ನೆ ಮಧ್ಯಾಹ್ನ ಅವರ ಮನೆಯಲ್ಲಿ ಆಟವಾಡುತ್ತಿದ್ದಾಗ ಎರಡು ಅಡಿ ಉದ್ದದ ನಾಗರಹಾವು ಬಂದಿತ್ತು ಎಂದು ಅಜ್ಜಿ ಮಾಟೇಶ್ವರಿ ದೇವಿ ಹೇಳಿದರು. ಅದನ್ನು ಆಟಿಕೆ ಎಂದು ಭಾವಿಸಿ ಮಗು ಹಾವನ್ನು ಹಿಡಿದುಕೊಂಡು ತನ್ನ ಹಲ್ಲುಗಳಿಂದ ಕಚ್ಚಿದೆ. ಇದಾದ ಕೂಡಲೇ ನಾಗರಹಾವು ಸತ್ತುಹೋಯಿತು. ಮಗುವು ಹಾವನ್ನು ಕಚ್ಚಿ ಎರಡು ತುಂಡುಗಳಾಗಿತ್ತು ಎಂದು ಹೇಳಲಾಗುತ್ತಿದೆ.

ಬೆಟ್ಟಯ್ಯದ ಜಿಎಂಸಿಎಚ್ ಆಸ್ಪತ್ರೆಯ ಉಪ ಅಧೀಕ್ಷಕ ಡಾ. ದಿವಾಕಾಂತ್ ಮಿಶ್ರಾ, ಮಗುವಿಗೆ ವಿಷಪ್ರಾಶನದ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿದರು. ಪ್ರಸ್ತುತ ಚಿಕಿತ್ಸೆ ನಡೆಯುತ್ತಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಹೇಳಿದ್ದಾರೆ. ಈ ಘಟನೆಯ ನಂತರ, ಕುಟುಂಬವು ಭಯಭೀತಗೊಂಡಿದೆ. ಅದೇ ಸಮಯದಲ್ಲಿ, ಮಗುವಿನ ಕಡಿತದಿಂದ ಹಾವು ಸಾವನ್ನಪ್ಪಿದ ಬಗ್ಗೆ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT