ಕಾಮ್ರಾ- ಶಿಂಧೆ  online desk
ದೇಶ

ತುಂಡು ತುಂಡಾಗಿ ಕತ್ತರಿಸಿ ಹಾಕ್ತೀವಿ...: Eknath Shindhe ವಿರುದ್ಧ ಹಾಸ್ಯ ಮಾಡಿದ್ದ ಕುನಾಲ್ ಕಾಮ್ರಾಗೆ 500 ಬೆದರಿಕೆ ಕರೆ!

ಕುನಾಲ್ ಕಮ್ರಾಗೆ ಈ ವರೆಗೆ ಕನಿಷ್ಠ 500 ಕರೆಗಳು ಬಂದಿವೆ, ಅದರಲ್ಲಿ ಜನರು ಅವರನ್ನು ಕೊಂದು ತುಂಡುಗಳಾಗಿ ಕತ್ತರಿಸುವುದಾಗಿ ("ಕಾಟ್ ಡೆಂಗೆ ತುಮ್ಹೆ") ಬೆದರಿಕೆ ಹಾಕಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಕುರಿತ ಹಾಸ್ಯ ಮಾಡಿದ್ದ ಕಾಮಿಡಿಯನ್ ಕುನಾಲ್ ಕಾಮ್ರಾಗೆ ಬೆದರಿಕೆ ಕರೆಗಳು ಬರತೊಡಗಿವೆ.

ಶಿಂಧೆ ಕುರಿತು ಹಾಸ್ಯ ಮಾಡಿದ್ದ ಮಾಡಿದ್ದ ಕುನಾಲ್ ಕಾಮ್ರಾ ಅವರನ್ನು ಗದ್ದಾರ್ (ದೇಶದ್ರೋಹಿ) ಎಂದು ಹೇಳಿದ್ದರು. ಇದು ಬಳಿಕ ವಿವಾದದ ಆಗಿತ್ತು.

ಈ ಸಂಬಂಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಹಾಸ್ಯನಟ ಕುನಾಲ್ ಕಮ್ರಾ ಅವರು ಮುಂಬೈ ಪೊಲೀಸರ ಮುಂದೆ ಹಾಜರಾಗಲು ಹೆಚ್ಚಿನ ಸಮಯ ಕೋರಿದ್ದಾರೆ. ಈ ನಡುವೆ ಶಿಂಧೆ ಅವರ ಪಕ್ಷವಾದ ಶಿವಸೇನೆಯ ಕಾರ್ಯಕರ್ತರಿಂದ ಕೊಲೆ ಬೆದರಿಕೆ ಬರುತ್ತಿದೆ ಎಂದು ಕಾಮ್ರಾ ಆಪ್ತ ಮೂಲಗಳು ತಿಳಿಸಿವೆ.

ಕುನಾಲ್ ಕಮ್ರಾಗೆ ಈ ವರೆಗೆ ಕನಿಷ್ಠ 500 ಕರೆಗಳು ಬಂದಿವೆ, ಅದರಲ್ಲಿ ಜನರು ಅವರನ್ನು ಕೊಂದು ತುಂಡುಗಳಾಗಿ ಕತ್ತರಿಸುವುದಾಗಿ ("ಕಾಟ್ ಡೆಂಗೆ ತುಮ್ಹೆ") ಬೆದರಿಕೆ ಹಾಕಿದ್ದಾರೆ.

ಮುಂಬೈನ ಖಾರ್‌ನಲ್ಲಿರುವ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ನಡೆದ ಪ್ರದರ್ಶನವೊಂದರಲ್ಲಿ, 1997 ರ ಬ್ಲಾಕ್‌ಬಸ್ಟರ್ 'ದಿಲ್ ತೋ ಪಾಗಲ್ ಹೈ' ಚಿತ್ರದ 'ಭೋಲಿ ಸಿ ಸೂರತ್' ಹಾಡಿನ ವಿಡಂಬನಾತ್ಮಕ ಆವೃತ್ತಿಯ ಮೂಲಕ ಕಮ್ರಾ ಶಿವಸೇನಾ (ಶಿಂಧೆ ಬಣ) ಮುಖ್ಯಸ್ಥರ ಬಗ್ಗೆ ಅವರ ಹೆಸರನ್ನು ಉಲ್ಲೇಖಿಸದೆ - ಕೆಲವು ಟೀಕೆಗಳನ್ನು ಮಾಡಿದ್ದರು. ವಿಡಂಬನಾತ್ಮಕ ಹಾಡಿನಲ್ಲಿ 'ಗದ್ದರ್' (ದೇಶದ್ರೋಹಿ) ಬಗ್ಗೆಯೂ ಉಲ್ಲೇಖವಿತ್ತು, ಇದು ಶಿಂಧೆ 2022 ರಲ್ಲಿ ಶಿವಸೇನೆಯನ್ನು ವಿಭಜಿಸಿ ಬಿಜೆಪಿಯೊಂದಿಗೆ ಕೈಜೋಡಿಸುವುದರ ಉಲ್ಲೇಖವಾಗಿ ಕಂಡುಬಂದಿದೆ.

ಕಾಮ್ರಾ ಅವರ ಕಾರ್ಯಕ್ರಮ ಯೂಟ್ಯೂಬ್‌ನಲ್ಲಿ ಪೋಸ್ಟ್ ಆದ ನಂತರ, ಶಿವಸೇನಾ ಕಾರ್ಯಕರ್ತರು ಖಾರ್‌ನಲ್ಲಿರುವ ಹ್ಯಾಬಿಟ್ಯಾಟ್ ಕಾಮಿಡಿ ಕ್ಲಬ್ ಅನ್ನು ಧ್ವಂಸ ಮಾಡಿದ್ದರು. ಪೊಲೀಸರು ಸೇನಾದೊಂದಿಗೆ ಸಂಬಂಧ ಹೊಂದಿದ್ದ 12 ಜನರನ್ನು ಬಂಧಿಸಿದ್ದರು, ನಂತರ ಅವರಿಗೆ ಜಾಮೀನು ನೀಡಲಾಗಿದೆ.

ಶಿವಸೇನಾ ಶಾಸಕ ಮುರ್ಜಿ ಪಟೇಲ್ ಅವರು ಕಮ್ರಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಖಾರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ತನಿಖಾ ಅಧಿಕಾರಿಯ ಮುಂದೆ ಹಾಸ್ಯನಟ ಹಾಜರಾಗುವಂತೆ ಅವರು ಕೇಳಿದ್ದರು.

ಕಮ್ರಾ ಅವರ ಆಪ್ತ ಮೂಲಗಳು, ಖಾರ್ ಪೊಲೀಸ್ ಠಾಣೆಯ ಅಧಿಕಾರಿಯೊಂದಿಗೆ ಮಾತನಾಡಿದ್ದಾರೆ ಮತ್ತು ಹಾಜರಾಗಲು ಒಂದು ವಾರದ ಸಮಯ ಕೇಳಿದ್ದಾರೆ ಎಂದು ಹೇಳಿದರು. ಅಧಿಕಾರಿ, ಸಾಧ್ಯವಾದಷ್ಟು ಬೇಗ ವಿಚಾರಣೆಗೆ ಹಾಜರಾಗಲು ಹೇಳಿದ್ದಾರೆ.

ಹೊಸ ಪೋಸ್ಟ್

ಪೊಲೀಸರೊಂದಿಗೆ ಸಹಕರಿಸುವುದಾಗಿ ಹೇಳಿದ್ದರೂ, ತಮ್ಮ ಹೇಳಿಕೆಗಳಿಗೆ ವಿಷಾದಿಸದ ಕಮ್ರಾ, ಮಂಗಳವಾರ ಶಿವಸೇನಾ ಕಾರ್ಯಕರ್ತರು ಹ್ಯಾಬಿಟ್ಯಾಟ್ ಕಾಮಿಡಿ ಕ್ಲಬ್ ಅನ್ನು ಧ್ವಂಸ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಅದರ ಮೇಲೆ ಅವರ ಹಾಸ್ಯ ವಿಶೇಷದ ಮತ್ತೊಂದು ವಿಡಂಬನಾತ್ಮಕ ಹಾಡನ್ನು ಹಾಕಿದ್ದಾರೆ.

"ಹಮ್ ಹೊಂಗೆ ಕಾಮ್ಯಾಬ್" (ನಾವು ಜಯಿಸುತ್ತೇವೆ) ಕುರಿತಾದ ವಿಡಂಬನಾತ್ಮಕ ಹೇಳಿಕೆಯಲ್ಲಿ, ಹಾಸ್ಯನಟ ತನ್ನ ಹಾಸ್ಯ ವಿಶೇಷ ಕಾರ್ಯಕ್ರಮದ ಸಮಯದಲ್ಲಿ ಪದಗಳನ್ನು "ಹಮ್ ಹೊಂಗೆ ಕಂಗಾಲ್" (ನಾವು ದಿವಾಳಿಯಾಗುತ್ತೇವೆ) ಎಂದು ಬದಲಾಯಿಸಿದ್ದಾರೆ. ಈ ಹಾಡನ್ನು ಕಮ್ರಾ ತಮ್ಮ ಹೊಸ ಪೋಸ್ಟ್‌ಗಾಗಿ ಬಳಸಿದ್ದರು. ಇದರಲ್ಲಿ ಸೇನಾ ಕಾರ್ಯಕರ್ತರು ಕಾಮಿಡಿ ಕ್ಲಬ್‌ನಲ್ಲಿ ವಿನಾಶವನ್ನುಂಟುಮಾಡುವುದು, ಕುರ್ಚಿಗಳನ್ನು ಎಸೆದು ದಾಖಲೆಗಳು ಮತ್ತು ಫೋಟೋಗಳನ್ನು ಮೆಟ್ಟಿಲುಗಳ ಮೇಲೆ ಇಡುವುದನ್ನು ತೋರಿಸಲಾಗಿದೆ.

ಶಿವಸೇನಾ ಕಾರ್ಯಕರ್ತರು ಕಮ್ರಾ ಅವರ ಫೋಟೋವನ್ನು ಸುಟ್ಟುಹಾಕುವುದು, ಅವರ ಪ್ರತಿಕೃತಿಗೆ ಬೆಂಕಿ ಹಚ್ಚಲು ಸಿದ್ಧರಾಗುವುದು ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ವಿಜಯೋತ್ಸವ ಚಿಹ್ನೆಯನ್ನು ಪ್ರದರ್ಶಿಸುವುದನ್ನು ವೀಡಿಯೊದಲ್ಲಿ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

5 ದಶಕಗಳ ಬಳಿಕ ದಾಖಲೆ ನಿರ್ಮಿಸಿದ ಚಂದ್ರಯಾನ: ಯಶಸ್ವಿಯಾಗಿ ಭೂಮಿಗೆ ಮರಳಿದ Artemis II ಗಗನ ಯಾತ್ರಿಗಳು-Video

'ಹಸಿರು ಲ್ಯಾಂಬೊರ್ಗಿನಿ ಕಾರಲ್ಲಿ ಹೋಗಿ, ರಸ್ತೆ ಕಸ ಗುಡಿಸಿ ಬನ್ನಿ': ಸಂಚಾರ ನಿಯಮ ಉಲ್ಲಂಘಿಸಿ ದರ್ಪ ತೋರಿದ ಚಾಲಕನಿಗೆ ಹೈಕೋರ್ಟ್‌ ಶಿಕ್ಷೆ!

ಉಪಚುನಾವಣೆ ಗೆಲ್ಲುವ ಉಮೇದು: ಪ್ರಚಾರದಲ್ಲಿ ನಿರತರಾದ ಸಿಎಂ -ಡಿಸಿಎಂ; ನಿಯಂತ್ರಣ ಕಳೆದುಕೊಂಡ ಆಡಳಿತ ಯಂತ್ರ!

'ನನ್ನ ಹಣೆಬರಹ ಎಲ್ಲಿದೆಯೋ, ಜನ ಎಲ್ಲಿ ಗೆಲ್ಲಿಸ್ತಾರೋ ನೋಡೋಣ: ನಮ್ಮ ಸಂಖ್ಯೆ ನೋಡಿ ಅಪಹಾಸ್ಯ ಮಾಡಿದ್ದಾರೆ, 2028 ರಲ್ಲಿ ಸರ್ಕಾರ ರಚಿಸ್ತಿವಿ'

SCROLL FOR NEXT