ರಾಮಲಿಂಗೇಶ್ವರ ದೇಗುಲ ನದಿಯಲ್ಲಿ ನೂರಾರು ಹಾವುಗಳ ಪ್ರತ್ಯಕ್ಷ 
ದೇಶ

ಕಾರ್ತಿಕ ಮಾಸದ ಅಚ್ಚರಿ: ರಾಮಲಿಂಗೇಶ್ವರ ದೇಗುಲ ನದಿಯಲ್ಲಿ ನೂರಾರು ಹಾವುಗಳ ಪ್ರತ್ಯಕ್ಷ! ಶಿವನ ದರ್ಶನಕ್ಕೆ ಬಂದ ನಾಗಲೋಕ? Video

ಪವಿತ್ರ ಕಾರ್ತಿಕ ಮಾಸದಲ್ಲಿ ಸ್ಥಳೀಯ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಬಳಿ ನೂರಾರು ನೀರು ಹಾವುಗಳು ಜಮಾಯಿಸುತ್ತವೆ...

ಅಮರಾವತಿ: ಶಿವನ ದೇವಾಲಯದ ಆವರಣದ ನದಿಯಲ್ಲಿ ನೂರಾರು ಹಾವುಗಳು ಪ್ರತ್ಯಕ್ಷವಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ನಾಗಯಲಂಕಾ ಶಿವ ದೇಗುಲ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಬಳಿ ಕೃಷ್ಣಾ ನದಿಯಲ್ಲಿ ನೂರಾರು ಹಾವುಗಳು ಏಕಕಾಲದಲ್ಲಿ ಕಾಣಿಸಿಕೊಂಡಿವೆ. ಈ ಅಪರೂಪದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ನಾಗಯಲಂಕಾದಲ್ಲಿ ನಡೆದ ಅಪರೂಪದ ಘಟನೆ ಸ್ಥಳೀಯರು ಮತ್ತು ಭಕ್ತರನ್ನು ಅಚ್ಚರಿಗೊಳಿಸಿದ್ದು, ದೇವಾಲಯದ ಬಳಿಯ ಕೃಷ್ಣಾ ನದಿಯಲ್ಲಿ ಗುಂಪು ಗುಂಪಾಗಿ ಚಲಿಸುವ ಹಾವುಗಳ ದೃಶ್ಯ ಎಲ್ಲರನ್ನೂ ಬೆರಗುಗೊಳಿಸುತ್ತಿದೆ.

ಕಾರ್ತಿಕ ಮಾಸದ ಅಚ್ಚರಿ

ಇನ್ನು ಸ್ಥಳೀಯರು ಇದನ್ನು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಪವಾಡ ಎಂದು ಹೇಳಿದ್ದು, ಇದಕ್ಕೆ ಶಿವನ ಮಹಿಮೆಯೇ ಕಾರಣ ಎಂದು ಭಕ್ತರು ಆಳವಾಗಿ ನಂಬಿದ್ದಾರೆ.

ಸ್ಥಳೀಯರ ಪ್ರಕಾರ ಪವಿತ್ರ ಕಾರ್ತಿಕ ಮಾಸದಲ್ಲಿ ಸ್ಥಳೀಯ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಬಳಿ ನೂರಾರು ನೀರು ಹಾವುಗಳು ಜಮಾಯಿಸುತ್ತವೆ ಎಂದು ಹೇಳಿದ್ದಾರೆ.

ಕಾರ್ತಿಕ ಮಾಸದಲ್ಲಿ ನದಿಯ ದಡದಲ್ಲಿರುವ ಈ ಪ್ರಾಚೀನ ಶಿವ ದೇವಾಲಯದಲ್ಲಿ ಪ್ರತಿ ವರ್ಷ ಹಾವುಗಳು ಕಾಣಿಸಿಕೊಳ್ಳುವುದು ಸಂಪ್ರದಾಯ ಎಂದು ಸ್ಥಳೀಯರು ಹೇಳುತ್ತಾರೆ.

ಆದಾಗ್ಯೂ, ಈ ಬಾರಿ, ಅವುಗಳ ಸಂಖ್ಯೆ ನೂರಾರು ಸಂಖ್ಯೆಯಲ್ಲಿರುವುದರಿಂದ ಅವು ಗಮನಾರ್ಹವಾಗಿ ಸುದ್ದಿಗೆ ಗ್ರಾಸವಾಗಿದೆ.

ಈ ಹಾವುಗಳು ದೇವಾಲಯದ ಹಿಂದಿನ ನದಿಯಲ್ಲಿ ಮುಕ್ತವಾಗಿ ತಿರುಗಾಡುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬಂದಿದೆ.

ಶಿವನ ದರ್ಶನಕ್ಕೆ ಬರುವ ಹಾವುಗಳು?

ಇದೆಲ್ಲವೂ ಶಿವನ ಮಹಿಮೆ ಎಂದು ಭಕ್ತರು ಆಳವಾಗಿ ನಂಬುತ್ತಿದ್ದಾರೆ. ಈ ಹಾವುಗಳು ಪ್ರತಿ ಕಾರ್ತಿಕ ಮಾಸದಲ್ಲಿ ದೇವರ ದರ್ಶನಕ್ಕೆ ಬರುತ್ತವೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಶಿವನ ಕೃಪೆಗೆ ಸಾಕ್ಷಿಯಾಗಿದೆ ಎಂದು ಭಕ್ತರೊಬ್ಬರು ಹೇಳಿದರು.

ಪ್ರತಿ ವರ್ಷ ಕಾರ್ತಿಕ ಮಾಸ ಮುಗಿಯುತ್ತಿದ್ದಂತೆ, ಈ ಹಾವುಗಳು ದೇವರ ಆಶೀರ್ವಾದ ಪಡೆಯಲು ಬರುತ್ತವೆ ಎಂದು ಭಕ್ತರು ಹೇಳುತ್ತಾರೆ.

ವಿಡಿಯೋ ವೈರಲ್ ಆಗುತ್ತಲೇ ಜಮಾಯಿಸಿದ ಜನ

ಇನ್ನು ನದಿಯಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಲೇ ಈ ಪವಾಡದ ದೃಶ್ಯವನ್ನು ವೀಕ್ಷಿಸಲು ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ದೇವಾಲಯಕ್ಕೆ ಬರುತ್ತಿದ್ದಾರೆ. ಈ ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವುದರಿಂದ ದೇವಾಲಯದ ಬಗ್ಗೆ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ.

ಭಕ್ತಿ ಮತ್ತು ಪ್ರಕೃತಿಯ ಮಿಶ್ರಣವಾದ ಈ ಅಸಾಮಾನ್ಯ ದೃಶ್ಯವು ಅನೇಕರನ್ನು ಆಕರ್ಷಿಸುತ್ತಿದೆ. ಸಂಜೆಯ ವೇಳೆಗೆ ಹೆಚ್ಚಿನ ಹಾವುಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ರಾಮಲಿಂಗೇಶ್ವರ ಸ್ವಾಮಿ ದೇಗುಲ

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಅವನಿಗಡ್ಡದ ಪವಿತ್ರ ಶ್ರೀರಾಮಪಾದ ಕ್ಷೇತ್ರದಲ್ಲಿರುವ ಶ್ರೀರಾಮಲಿಂಗೇಶ್ವರ ದೇಗುಲ ಶಿವನಿಗೆ ಅರ್ಪಿತವಾದ ದೇವಾಲಯವಾಗಿದೆ.

ಇದು ಒಂದು ಮಹತ್ವದ ಸ್ಥಳೀಯ ಧಾರ್ಮಿಕ ತಾಣವಾಗಿದ್ದು, ನದಿಯು ಸಮುದ್ರದೊಂದಿಗೆ ಸಂಗಮವಾಗುವ ಸ್ಥಳದ ಬಳಿ ಇರುವುದರಿಂದ ಈ ದೇಗುಲ ವ್ಯಾಪಕ ಹೆಸರುವಾಸಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT