ಅಲಹಾಬಾದ್ ಹೈಕೋರ್ಟ್  
ದೇಶ

ಸಂಭಾಲ್ ಮಸೀದಿ ನೆಲಸಮಕ್ಕೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಕಾರ

ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಮಸೀದಿ, ಮದುವೆ ಮಂಟಪ ಮತ್ತು ಆಸ್ಪತ್ರೆ ನೆಲಸಮ ಆದೇಶಕ್ಕೆ ತಡೆ ನೀಡುವಂತೆ ಕೋರಲಾಗಿತ್ತು.

ಲಖನೌ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಮಸೀದಿ, ಮದುವೆ ಸಭಾಂಗಣವನ್ನು ಮತ್ತು ಆಸ್ಪತ್ರೆಯನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡುವುದಕ್ಕೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ಶನಿವಾರ ನಿರಾಕರಿಸಿದ್ದು, ಮುಸ್ಲಿಂ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಮಸೀದಿ, ಮದುವೆ ಮಂಟಪ ಮತ್ತು ಆಸ್ಪತ್ರೆ ನೆಲಸಮ ಆದೇಶಕ್ಕೆ ತಡೆ ನೀಡುವಂತೆ ಕೋರಿ, ಮಸೀದಿ ಷರೀಫ್ ಗೌಸುಲ್ ವಾರಾ ರಾವಾ ಬುಜುರ್ಗ್ ಮತ್ತು ಮಸೀದಿಯ ಮುತವಲ್ಲಿ ಮಿಂಜಾರ್ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಜಿಲ್ಲಾಡಳಿತದ ಮೂಲಗಳ ಪ್ರಕಾರ, ಸಂಭಾಲ್ ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಅಸ್ಮೋಲಿ ಪ್ರದೇಶದ ರಾಯನ್ ಬುಜುರ್ಗ್ ಗ್ರಾಮದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿದೆ.

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿದ್ದು, ಮಸೀದಿ ಸಮಿತಿಗೆ ತಡೆಯಾಜ್ಞೆ ಅರ್ಜಿಯೊಂದಿಗೆ ವಿಚಾರಣಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವಂತೆ ನಿರ್ದೇಶಿಸಿತು.

ಅಕ್ಟೋಬರ್ 2 ರಂದು, ಡಿಎಂ-ಎಸ್ಪಿ ನೇತೃತ್ವದ ಜಿಲ್ಲಾಡಳಿತ ಅಧಿಕಾರಿಗಳ ತಂಡವು ಮಸೀದಿಯನ್ನು ಕೆಡವಲು ಬುಲ್ಡೋಜರ್‌ನೊಂದಿಗೆ ಆಗಮಿಸಿತು. ಆಡಳಿತವು ಗುರುವಾರ ಮಸೀದಿಯ ಪಕ್ಕದಲ್ಲಿ ನಿರ್ಮಿಸಲಾದ ಮದುವೆ ಮಂಟಪವನ್ನು ಕೆಡವಿತ್ತು.

ಬುಲ್ಡೋಜರ್ ಮಸೀದಿಯ ಕಡೆಗೆ ಧ್ವಂಸಕ್ಕಾಗಿ ಹೋಗುತ್ತಿದ್ದಾಗ, ಸ್ಥಳೀಯ ಜನರು ಮಸೀದಿಯನ್ನು ತಾವೇ ನಾಶಪಡಿಸುವ ಭರವಸೆಯೊಂದಿಗೆ 4 ದಿನಗಳ ಕಾಲಾವಕಾಶವನ್ನು ಜಿಲ್ಲಾಧಿಕಾರಿಗೆ ಕೋರಿದ್ದರು. ಜಿಲ್ಲಾಧಿಕಾರಿ ನಾಲ್ಕು ದಿನಗಳ ಕಾಲಾವಕಾಶ ನೀಡಿದ್ದರು. ಇದಾದ ನಂತರ, ಅದೇ ದಿನ, ಅಂದರೆ ಗುರುವಾರ, ಸ್ಥಳೀಯ ಜನರು ಮಸೀದಿಯ ಹೊರ ಗೋಡೆಯನ್ನು ಒಡೆಯಲು ಪ್ರಾರಂಭಿಸಿದ್ದರು. ಶುಕ್ರವಾರ, ಪ್ರಾರ್ಥನೆಯ ನಂತರ, ಕೆಲವರು ಸ್ವಯಂಪ್ರೇರಣೆಯಿಂದ ಮಸೀದಿಯ ಗಡಿ ಗೋಡೆಯನ್ನು ಕೆಡವಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ಶೇ. 8.5 ರಷ್ಟು ಬೆಳವಣಿಗೆಯೊಂದಿಗೆ ಮುಂಬೈ, ದೆಹಲಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ! ಇಲ್ಲಿದೆ ವರದಿ...

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಸಿದ್ದರಾಮಯ್ಯ 'ಫೇಸ್ ಬುಕ್ 'ನಲ್ಲಿ ಲೈವ್ ಬಂದರೆ ಹೇಗಿರುತ್ತದೆ? ಈ Video ನೋಡಿ..

Delhi Blast: ವೈದ್ಯನಾದರೂ ತಲೆ ತುಂಬ 'ಇಸ್ಲಾಮ್ ಮೂಲಭೂತವಾದ' ತುಂಬಿಕೊಂಡಿದ್ದ ಬಾಂಬರ್! ರೋಗಿಗಳಿಗೆ ಏನು ಹೇಳ್ತಿದ್ದ ಗೊತ್ತಾ?

ರಾಜ್ಯಪಾಲರು ಮಸೂದೆಗಳನ್ನು ಅನಿರ್ದಿಷ್ಟವಾಗಿ ವಿಳಂಬ ಮಾಡಲು ಸಾಧ್ಯವಿಲ್ಲ; ಹಾಗೆಂದು ಅನುಮೋದನೆಗೆ ನಾವು ಕಾಲಮಿತಿ ನಿಗದಿಪಡಿಸಲಾಗದು: ಸುಪ್ರೀಂ ಕೋರ್ಟ್

ಕುನೋದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಭಾರತದಲ್ಲಿ ಜನಿಸಿದ ಚೀತಾ; Video

SCROLL FOR NEXT