ಹರ್ಷಿತ್ ಜೈನ್ 
ದೇಶ

2300 ಕೋಟಿ ರೂ ಬೆಟ್ಟಿಂಗ್ ಹಗರಣದ ಮಾಸ್ಟರ್ ಮೈಂಡ್ ಹರ್ಷಿತ್ ಜೈನ್ ದುಬೈನಿಂದ ಭಾರತಕ್ಕೆ ಹಸ್ತಾಂತರ!

ಹರ್ಷಿತ್ ಬಾಬುಲಾಲ್ ಜೈನ್ ನನ್ನು ದುಬೈನಲ್ಲಿ ಬಂಧಿಸಲಾಗಿದ್ದ ಅಂತರ-ಸಂಸ್ಥೆಯ ಕ್ರಮದ ನಂತರ ಸೆಪ್ಟೆಂಬರ್ 5ರಂದು ಭಾರತಕ್ಕೆ ಕರೆತರಲಾಯಿತು.

ನವದೆಹಲಿ: ಪ್ರಮುಖ ಜಂಟಿ ಕಾರ್ಯಾಚರಣೆಯಲ್ಲಿ, ಗುಜರಾತ್ ಪೊಲೀಸರು ಮತ್ತು ಸಿಬಿಐ ಗುಜರಾತ್‌ನ ಅತಿದೊಡ್ಡ 2300 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಕ್ರಿಕೆಟ್ ಬೆಟ್ಟಿಂಗ್ ಹಗರಣದ ಪರಾರಿಯಾಗಿದ್ದ ಮಾಸ್ಟರ್ ಮೈಂಡ್ ಹರ್ಷಿತ್ ಜೈನ್ ನನ್ನು ಪತ್ತೆಹಚ್ಚಿ ವಾಪಸ್ ಕರೆತಂದಿವೆ. ಮಾರ್ಚ್ 2023ರಲ್ಲಿ ಪೊಲೀಸ್ ದಾಳಿಯ ನಂತರ ದುಬೈಗೆ ಪಲಾಯನ ಮಾಡಿದ್ದ ಜೈನ್‌ರನ್ನು ಇಂಟರ್‌ಪೋಲ್ ಹೊರಡಿಸಿದ ರೆಡ್ ಕಾರ್ನರ್ ನೋಟಿಸ್ ನಂತರ ಅಹಮದಾಬಾದ್‌ಗೆ ಹಸ್ತಾಂತರಿಸಲಾಯಿತು.

ಸೌರಭ್ ಚಂದ್ರಕರ್ ಅಲಿಯಾಸ್ ಮಹಾದೇವ್ ಬುಕ್ಕಿಯೊಂದಿಗೆ ಸಂಬಂಧ ಹೊಂದಿರುವ ಡಿಜಿಟಲ್ ಬೆಟ್ಟಿಂಗ್ ದಂಧೆಯಲ್ಲಿ ಅವರ ಬಂಧನವು ಇತ್ತೀಚಿನ ಪ್ರಗತಿಯಾಗಿದೆ. ಹರ್ಷಿತ್ ಬಾಬುಲಾಲ್ ಜೈನ್ ನನ್ನು ದುಬೈನಲ್ಲಿ ಬಂಧಿಸಲಾಗಿದ್ದ ಅಂತರ-ಸಂಸ್ಥೆಯ ಕ್ರಮದ ನಂತರ ಸೆಪ್ಟೆಂಬರ್ 5ರಂದು ಭಾರತಕ್ಕೆ ಕರೆತರಲಾಯಿತು. ಬೆಟ್ಟಿಂಗ್ ದಂಧೆಯ ಪ್ರಮುಖ ಆರೋಪಿ ಹರ್ಷಿತ್ ಜೈನ್ ಭಾರತದಿಂದ ಪರಾರಿಯಾಗಿದ್ದನು. ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ನಾವು ಕೇಂದ್ರ ಸಂಸ್ಥೆಗಳ ಸಹಯೋಗದೊಂದಿಗೆ ಶೋಧ ಕಾರ್ಯಾಚರಣೆ ನಡೆಸಿ ಲುಕ್ಔಟ್ ನೋಟಿಸ್ ನೀಡಿದ್ದೇವು.

ಜೈನ್ ಅಡಗಿದ್ದ ಮಾಹಿತಿ ನಂತರ ಗುಜರಾತ್ ಗೃಹ ಸಚಿವಾಲಯ, ಗೃಹ ವ್ಯವಹಾರ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯದ ಮೂಲಕ ದುಬೈ ಅಧಿಕಾರಿಗಳಿಗೆ ಅವರನ್ನು ಭಾರತಕ್ಕೆ ಮರಳಿ ಕರೆತರಲು ಔಪಚಾರಿಕ ಪ್ರಸ್ತಾವನೆಯನ್ನು ಕಳುಹಿಸಲಾಯಿತು. ಈ ಪ್ರಸ್ತಾವನೆಯ ಆಧಾರದ ಮೇಲೆ, ಅವರನ್ನು ಸೆಪ್ಟೆಂಬರ್ 5, 2025 ರಂದು ಗಡೀಪಾರು ಮಾಡಲಾಯಿತು ಇನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಎಸ್‌ಎಂಸಿ ವಶಕ್ಕೆ ಪಡೆಯಲಾಯಿತು ಎಂದು ರಾಜ್ಯ ಕಣ್ಗಾವಲು ಕೋಶದ ಡಿಐಜಿ ನಿರ್ಲಿಪ್ತಾ ರೈ ಹೇಳಿದ್ದಾರೆ.

ನಮ್ಮ ತನಿಖೆಯ ಸಮಯದಲ್ಲಿ, ಹಲವಾರು ಬ್ಯಾಂಕ್ ಖಾತೆಗಳಲ್ಲಿ 2,300 ಕೋಟಿ ರೂ. ಮೌಲ್ಯದ ವಹಿವಾಟುಗಳನ್ನು ಪತ್ತೆಹಚ್ಚಿದ್ದೇವೆ. ಇವುಗಳಲ್ಲಿ 481 ಖಾತೆಗಳಲ್ಲಿ ಹರಡಿರುವ 9.62 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಟ್ಟಿಂಗ್ ಚಟುವಟಿಕೆಗಳಿಗೆ ಸಂಬಂಧಿಸಿದ 1,507 ಬ್ಯಾಂಕ್ ಖಾತೆಗಳಲ್ಲಿ 139 ಖಾತೆಗಳನ್ನು ನಿರ್ಬಂಧಿಸಲಾಗಿದೆ. ಇಲ್ಲಿಯವರೆಗೆ, 37 ಜನರನ್ನು ಬಂಧಿಸಲಾಗಿದೆ. 8 ಆರೋಪಿಗಳಿಗಾಗಿ ಲುಕ್ಔಟ್ ಸುತ್ತೋಲೆಗಳನ್ನು ನೀಡಲಾಗಿದೆ. 3 ರೆಡ್ ಕಾರ್ನರ್ ನೋಟಿಸ್‌ಗಳು, 2 ತಾತ್ಕಾಲಿಕ ವಿನಂತಿಗಳು ಮತ್ತು 2 ಹಸ್ತಾಂತರ ಪ್ರಸ್ತಾಪಗಳನ್ನು ಕಳುಹಿಸಲಾಗಿದೆ" ಎಂದು ರೈ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮೋದಿ ಸರ್ಕಾರದ GST ಬದಲಾವಣೆಯಿಂದ ರಾಜ್ಯಕ್ಕೆ15 ಸಾವಿರ ಕೋಟಿ ನಷ್ಟ: ಕುಮಾರಸ್ವಾಮಿ ಸೇರಿ ಎಲ್ಲಾ ಸಂಸದರನ್ನು ಸೋಲಿಸಿ; ಸಿದ್ದರಾಮಯ್ಯ

ನವಿ ಮುಂಬೈ: ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ; ಆರು ವರ್ಷದ ಬಾಲಕ ಸೇರಿ- ನಾಲ್ವರ ಸಾವು

ಬಿಜೆಪಿಯವರದ್ದು ಡೋಂಗಿ ಹಿಂದುತ್ವ: ಜೆಡಿಎಸ್ ನ 'S' ಎಂದರೆ ಜಾತ್ಯಾತೀತವೋ? ಕೇಸರಿಯೋ? 19 ಸಂಸದರು ಇಂಡಿಯಾ ಗೇಟ್ ಕಾಯೋಕೆ ಇದ್ದಾರಾ?

ಮರಳು ಮಾಫಿಯಾ ವಿರುದ್ಧ ಸಿಡಿದೆದ್ದ ಸಿಎಂ ಸಲಹೆಗಾರ: ದಂಧೆಕೋರರಿಗೆ ಅಧಿಕಾರಿಗಳೇ ಸಾಥ್, ಕ್ರಮಕ್ಕೆ ಬಸವರಾಜ ರಾಯರೆಡ್ಡಿ ಆಗ್ರಹ

ನಂಬಿಕೆ ಇರುವವರಿಗೆ ಮಾತ್ರ ದೀಪಾವಳಿ ಶುಭಾಶಯ: ಮತ್ತೆ ವಿವಾದ ಎಬ್ಬಿಸಿದ ಉದಯನಿಧಿ ಸ್ಟಾಲಿನ್; ಬಿಜೆಪಿ ಕಿಡಿ

SCROLL FOR NEXT