ರೂಪಿಂದರ್ ಕೌರ್  
ದೇಶ

ಪಂಜಾಬ್‌: ಭಾರತೀಯ ಮೂಲದ ಅಮೆರಿಕ ಮಹಿಳೆಯ ಹತ್ಯೆ; ಯುಕೆ ಮೂಲದ NRI ಕೃತ್ಯ ಶಂಕೆ

ಗ್ರೇವಾಲ್ ಅವರನ್ನು ಮದುವೆಯ ನೆಪದಲ್ಲಿ ಲುಧಿಯಾನ ಬಳಿಯ ಕಿಲಾ ರಾಯ್‌ಪುರ ಗ್ರಾಮಕ್ಕೆ ಕರೆದೊಯ್ದು, ನಂತರ ಸುಪಾರಿ ಕೊಲೆಗಾರನ ಮೂಲಕ ಅವರ ಕ್ರೂರ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂಡೀಗಢ: ಯುಕೆ ಮೂಲದ 75 ವರ್ಷದ ಅನಿವಾಸಿ ಭಾರತೀಯ(ಎನ್‌ಆರ್‌ಐ) ಚರಣ್‌ಜಿತ್ ಸಿಂಗ್ ಗ್ರೆವಾಲ್ ಅವರನ್ನು ಮದುವೆಯಾಗಲು ಜುಲೈನಲ್ಲಿ ಸಿಯಾಟಲ್‌ನಿಂದ ಪಂಜಾಬ್‌ಗೆ ಆಗಮಿಸಿದ 72 ವರ್ಷದ ಭಾರತೀಯ ಮೂಲದ ಅಮೆರಿಕ ಪ್ರಜೆ ರೂಪಿಂದರ್ ಕೌರ್ ಪಂಧೇರ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಗ್ರೇವಾಲ್ ಅವರನ್ನು ಮದುವೆಯ ನೆಪದಲ್ಲಿ ಲುಧಿಯಾನ ಬಳಿಯ ಕಿಲಾ ರಾಯ್‌ಪುರ ಗ್ರಾಮಕ್ಕೆ ಕರೆದೊಯ್ದು, ನಂತರ ಸುಪಾರಿ ಕೊಲೆಗಾರನ ಮೂಲಕ ಅವರ ಕ್ರೂರ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್ ಪೊಲೀಸರು ಪ್ರಮುಖ ಶಂಕಿತನನ್ನು ಸುಖ್‌ಜೀತ್ ಸಿಂಗ್ ಅಲಿಯಾಸ್ ಸೋನು ಎಂದು ಗುರುತಿಸಿದ್ದು, ಅವರು ಜುಲೈ 12–13ರ ರಾತ್ರಿ ಗ್ರೆವಾಲ್ ಅವರ ಸೂಚನೆಯ ಮೇರೆಗೆ ರೂಪಿಂದರ್ ಅವರನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕೊಲೆಗೆ ಆರ್ಥಿಕ ಲಾಭವೇ ಪ್ರಮುಖ ಉದ್ದೇಶ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಮೂಲತಃ ಮೆಹ್ಮಾ ಸಿಂಗ್ ವಾಲಾ ಗ್ರಾಮದ ಚರಣ್‌ಜಿತ್ ಸಿಂಗ್ ಗ್ರೆವಾಲ್, ಕೊಲೆಗೆ ಸಂಚು ರೂಪಿಸಿದ್ದರು ಮತ್ತು ಕೊಲೆ ಮಾಡಲು ಸೋನುಗೆ 50 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರು ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.

ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನದಲ್ಲಿ, ಸೋನು ರೂಪಿಂದರ್, ಮಹಿಳೆಯ ದೇಹವನ್ನು ತಮ್ಮ ನಿವಾಸದ ಅಂಗಡಿ ಕೋಣೆಯಲ್ಲಿ ಡೀಸೆಲ್ ಸುರಿದು ಸುಟ್ಟು, ಅವಶೇಷಗಳಿಗೆ ನೀರು ಹಾಕಿ, ಬೂದಿಯನ್ನು ಲೆಹ್ರಾ ಗ್ರಾಮದ ಹತ್ತಿರದ ಚರಂಡಿಯಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಭಾಗಶಃ ಅಸ್ಥಿಪಂಜರದ ಅವಶೇಷಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಿದ್ದಾರೆ.

ಗ್ರೇವಾಲ್ ಅವರನ್ನು ಪ್ರಮುಖ ಶಂಕಿತ ಎಂದು ಹೆಸರಿಸಲಾಗಿದ್ದರೂ, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಿ ಆತನ ಬಂಧನವನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಆತನ ಸಹೋದರ ಮತ್ತು ಇತರ ಸಹಚರರ ಹೆಸರುಗಳನ್ನು ಸಹ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದು, ಅವರು ಪ್ರಸ್ತುತ ಪರಾರಿಯಾಗಿದ್ದಾರೆ.

ರೂಪಿಂದರ್ ಅವರ ಸಹೋದರಿ, ಅಮೆರಿಕದಲ್ಲಿ ವಾಸಿಸುತ್ತಿರುವ ಕಮಲ್ ಕೌರ್ ಖೈಜಾ, ಸತತ ನಾಲ್ಕು ದಿನಗಳ ಕಾಲ ತನ್ನ ಸಹೋದರಿಯನ್ನು ಸಂಪರ್ಕಿಸಲು ವಿಫಲವಾದ ನಂತರ ಜುಲೈ 28 ರಂದು ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ಗ್ರೇವಾಲ್ ಅವರ ಆಹ್ವಾನದ ಮೇರೆಗೆ ರೂಪಿಂದರ್ ಅವರು ಕಿಲಾ ರಾಯ್‌ಪುರಕ್ಕೆ ತೆರಳಿದ ಸ್ವಲ್ಪ ಸಮಯದ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಕಮಲ್ ಅವರ ನಿರಂತರ ಪ್ರಯತ್ನಗಳ ನಂತರ, ಅಮೆರಿಕಾ ರಾಯಭಾರ ಕಚೇರಿ ಪಂಜಾಬ್ ಪೊಲೀಸರೊಂದಿಗೆ ಈ ವಿಚಾರವನ್ನು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ರಷ್ಯಾ ಸಂಬಂಧಗಳು ವ್ಯಾಪಾರ ಒಪ್ಪಂದಕ್ಕೆ ಅಡ್ಡಿಯಾಗಬಹುದು: ಯುರೋಪಿಯನ್ ಒಕ್ಕೂಟ ವಾರ್ನಿಂಗ್!

ಭಾರತದ ಅಣೆಕಟ್ಟು-ನದಿಗಳು ನಮ್ಮದಾಗಲಿದೆ: Op Sindoorಗೆ ಪ್ರತೀಕಾರ ಹೇಳ್ತೀವಿ; ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಬೆದರಿಕೆ!

Bumrah ಓವರ್​ನಲ್ಲಿ 6 ಸಿಕ್ಸರ್ ಸಿಡಿಸುವ ಸವಾಲು: ಆದ್ರೆ Saim Ayub ಆಡಿದ 3 ಪಂದ್ಯದಲ್ಲೂ ಸುತ್ತಿದ್ದು ಶೂನ್ಯ, ಕಳಪೆ ದಾಖಲೆ ಬರೆದ Pak ಬ್ಯಾಟರ್, Video!

ಬರೇಲಿಯಲ್ಲಿ ದಿಶಾ ಪಠಾನಿ ಮನೆಯ ಹೊರಗೆ ಗುಂಡು ಹಾರಿಸಿದ್ದ ಇಬ್ಬರು ಶಂಕಿತರು ಎನ್‌ಕೌಂಟರ್‌ನಲ್ಲಿ ಸಾವು

ನವೆಂಬರ್ ಒಳಗೆ ಬೆಂಗಳೂರಿನ ಎಲ್ಲಾ ಗುಂಡಿಗಳನ್ನು ಮುಚ್ಚಿ: ಗುತ್ತಿಗೆದಾರರಿಗೆ DCM ಡಿಕೆಶಿ ಗಡುವು

SCROLL FOR NEXT