ಎಸ್-400 ವಾಯು ರಕ್ಷಣಾ ವ್ಯವಸ್ಥೆ 
ದೇಶ

Indian Army ಗೆ ಮತ್ತಷ್ಟು ಬಲ: ರಷ್ಯಾದ S-400 ವಿತರಣೆ 2026ರ ಹೊತ್ತಿಗೆ ಪೂರ್ಣ: ವರದಿ

ಭಾರತಕ್ಕೆ ನೀಡಬೇಕಿದ್ದ S-400 ಟ್ರಯಂಫ್ (ಟ್ರಯಂಫ್) ವಾಯು ರಕ್ಷಣಾ ವ್ಯವಸ್ಥೆಗಳ ವಿತರಣೆಯನ್ನು ರಷ್ಯಾ ಮುಂದಿನ ವರ್ಷ ಅಂದರೆ 2026ರ ಹೊತ್ತಿಗೆ ಪೂರ್ಣಗೊಳಿಸಲಿದೆ...

ನವದೆಹಲಿ: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ್ (Operation Sindoor) ಸೇನಾ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಷ್ಯಾದ S-400 ವಾಯುರಕ್ಷಣಾ ವ್ಯವಸ್ಥೆಯ ವಿತರಣೆ 2026ರ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ವರದಿಯೊಂದು ಹೇಳಿದೆ.

2018ರಲ್ಲಿ ಭಾರತ ಮತ್ತು ರಷ್ಯಾ ನಡುವೆ ನಡೆದಿದ್ದ $5.43 ಬಿಲಿಯನ್ ಮೌಲ್ಯದ ಒಪ್ಪಂದದ ಅನ್ವಯ ಭಾರತಕ್ಕೆ ನೀಡಬೇಕಿದ್ದ S-400 ಟ್ರಯಂಫ್ (ಟ್ರಯಂಫ್) ವಾಯು ರಕ್ಷಣಾ ವ್ಯವಸ್ಥೆಗಳ ವಿತರಣೆಯನ್ನು ರಷ್ಯಾ ಮುಂದಿನ ವರ್ಷ ಅಂದರೆ 2026ರ ಹೊತ್ತಿಗೆ ಪೂರ್ಣಗೊಳಿಸಲಿದೆ ಎಂದು ಸೋಮವಾರ ಮಾಧ್ಯಮ ವರದಿ ತಿಳಿಸಿದೆ.

ಅಂದು ರಷ್ಯಾ ಭಾರತಕ್ಕೆ ಐದು S-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರಂತೆ ರಷ್ಯಾ 2026ರಲ್ಲಿ ಬಾಕಿ ಇರುವ S-400 ಘಟಕಗಳನ್ನು ನೀಡುವ ಮೂಲಕ ಒಪ್ಪಂದ ಪೂರ್ಣಗೊಳಿಸಲಿದೆ.

ಮೂಲಗಳ ಪ್ರಕಾರ ಒಪ್ಪಂದದ ಅನ್ವಯ ಈಗಾಗಲೇ ರಷ್ಯಾ ಭಾರತಕ್ಕೆ ನಾಲ್ಕು S-400 ಘಟಕಗಳನ್ನು ಪೂರೈಸಿದೆ. ಐದನೇ ಮತ್ತು ಅಂತಿಮ ಘಟಕವನ್ನು ರಷ್ಯಾ ಮುಂದಿನ ವರ್ಷ ತಲುಪಿಸಲಿದೆ ಎಂದು ರಷ್ಯಾ ಸರ್ಕಾರಿ ಸ್ವಾಮ್ಯದ TASS ಸುದ್ದಿಸಂಸ್ಥೆ ವರದಿ ಮಾಡಿದೆ.

ಹಿಂದಿನ ಮಾಧ್ಯಮ ವರದಿಗಳ ಪ್ರಕಾರ, US ನಿರ್ಬಂಧಗಳ ಬೆದರಿಕೆಯನ್ನು ನಿರ್ಲಕ್ಷಿಸಿ $5.43 ಬಿಲಿಯನ್ ಒಪ್ಪಂದಕ್ಕೆ (ರೂ. 40,000 ಕೋಟಿ) ಅಕ್ಟೋಬರ್ 5, 2018 ರಂದು ಉಭಯ ದೇಶಗಳು ಔಪಚಾರಿಕವಾಗಿ ಸಹಿ ಹಾಕಿದ್ದವು.

ಮಾರ್ಚ್ 2021 ರಲ್ಲಿ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಭಾರತದ ರಷ್ಯಾದ S-400 ವಾಯು ಕ್ಷಿಪಣಿ ವ್ಯವಸ್ಥೆಯ ಖರೀದಿಯ ಬಗ್ಗೆ ಚರ್ಚಿಸಿದರು ಮತ್ತು S-400 ಖರೀದಿಯು CAATSA ನಿರ್ಬಂಧಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದರು.

ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ

ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂದೂರ್ ಸಮಯದಲ್ಲಿ S-400 ವಾಯು ರಕ್ಷಣಾ ಕ್ಷಿಪಣಿಗಳು ಭಾರತದ ಪರ ನಿರ್ಣಾಯಕ ಪಾತ್ರವಹಿಸಿದ್ದವು. ಪಾಕಿಸ್ತಾನದಿಂದ ಬಂದ ಶತ್ರುಪಾಳಯದ ಕ್ಷಿಪಣಿ ಮತ್ತು ವಾಯು ಗುರಿಗಳನ್ನು ಅವುಗಳು ಗುರಿ ತಲುಪದಂತೆ ಆಗಸದಲ್ಲಿಯೇ ನಾಶ ಮಾಡಿತ್ತು. ಆ ಮೂಲಕ ಎಸ್-400 ಬಹಳ ಪರಿಣಾಮಕಾರಿ ಎಂದು ಸಾಬೀತಾಯಿತು.

ಈ ಬೆಳವಣಿಗೆ ಬೆನ್ನಲ್ಲೇ ರಷ್ಯಾ ನಾಯಕರ ಭೇಟಿ ವೇಳೆ ಭಾರತ ಹೆಚ್ಚಿನ ಎಸ್-400 ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಆಸಕ್ತಿ ತೋರಿಸಿದೆ. ಅದರ ಹೆಚ್ಚು ಮುಂದುವರಿದ S-500 ಕ್ಷಿಪಣಿ ವ್ಯವಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯನ್ನು ಅನ್ವೇಷಿಸುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US Tariff war: ಜೈಶಂಕರ್-ರುಬಿಯೊ ಮಹತ್ವದ ಭೇಟಿ, ಭಾರತ-ಅಮೆರಿಕ ಸಂಬಂಧ ಕುರಿತು ಚರ್ಚೆ!

TCS Layoffs Row: ಭಾರತದ ಐಟಿ ದೈತ್ಯ ಸಂಸ್ಥೆ ವಿರುದ್ಧ "ಬಲವಂತದ ರಾಜೀನಾಮೆ" ಆರೋಪ! 30,000 ಉದ್ಯೋಗಕ್ಕೆ ಕುತ್ತು?

ರಾಜ್ಯಾದ್ಯಂತ 'ಜಾತಿ ಗಣತಿ' ಆರಂಭ; ಕೆಲವು ಕಡೆ ತಾಂತ್ರಿಕ ದೋಷ, ಹಲವಡೆ ಸರ್ವರ್ ಸಮಸ್ಯೆ

ಅಪ್ರಾಪ್ತ ಬಾಲಕಿ ಜೊತೆ ಓಡಿ ಹೋಗಿ ಸಿಕ್ಕಿಬಿದ್ದ ಯುವಕ: ಪೊಲೀಸ್ ಜೀಪಿನ ಮೇಲೆ ಹತ್ತಿ ಬಾಲಕಿ ಜೊತೆ ಅಶ್ಲೀಲ ನೃತ್ಯ; Video

ಮೋದಿ ಮಹಾನ್ ಡೋಂಗಿ, 8 ವರ್ಷ ಹೆಚ್ಚು GST ವಿಧಿಸಿದ್ದೂ ಅವರೇ, ಈಗ ವಾಪಾಸ್ ಕೊಡ್ತೀರಾ?

SCROLL FOR NEXT