ಮಾತಾ ಅಮೃತಾನಂದಮಯಿಗೆ ಗೌರವ ಪ್ರದಾನ ಮಾಡಿದ ಸಚಿವ ಸಾಜಿ ಚೆರಿಯನ್. 
ದೇಶ

ಮಾತಾ ಅಮೃತಾನಂದಮಯಿಗೆ ಕೇರಳ ಸರ್ಕಾರ ಸನ್ಮಾನ

ಮಾತಾ ಅಮೃತಾನಂದಮಯಿ ಅವರು ಮಲಯಾಳಂ ಭಾಷೆ ಮತ್ತು ಸಂಸ್ಕೃತಿಯ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಇದು ಜಾಗತಿಕ ವೇದಿಕೆಯಲ್ಲಿ ಮಾತೃಭಾಷೆಯನ್ನು ನಿರ್ಲಕ್ಷಿಸುವವರಿಗೆ ಪ್ರಬಲ ಸಂದೇಶವಾಗಿತ್ತು.

ಕೊಲ್ಲಂ: ಮಲಯಾಳಂ ಭಾಷೆ ಮತ್ತು ಸಂಸ್ಕೃತಿಯ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದ ಮಾತಾ ಅಮೃತಾನಂದಮಯಿ ಅವರಿಗೆ ಕೇರಳ ಸರ್ಕಾರ ಶುಕ್ರವಾರ ಸನ್ಮಾನಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಭಾಂಗಣದಲ್ಲಿ ಮಲಯಾಳಂನಲ್ಲಿ ಭಾಷಣದ ಮಾಡಿದ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಕೇರಳ ಸರ್ಕಾರ ಮಾತಾ ಅಮೃತಾನಂದಮಯಿ ಅವರನ್ನು ಸನ್ಮಾನಿಸಿದೆ.

ಕೇರಳ ರಾಜ್ಯ ಸರ್ಕಾರದ ಪರವಾಗಿ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರು ಗೌರವ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ಮಾತಾ ಅಮೃತಾನಂದಮಯಿ ಅವರು ಮಲಯಾಳಂ ಭಾಷೆ ಮತ್ತು ಸಂಸ್ಕೃತಿಯ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಇದು ಜಾಗತಿಕ ವೇದಿಕೆಯಲ್ಲಿ ಮಾತೃಭಾಷೆಯನ್ನು ನಿರ್ಲಕ್ಷಿಸುವವರಿಗೆ ಪ್ರಬಲ ಸಂದೇಶವಾಗಿತ್ತು. ಇದು ಕೇವಲ ಸನ್ಮಾನವಲ್ಲ - ಇದು ಸಾಂಸ್ಕೃತಿಕ ಜಾಗೃತಿ ಎಂದು ಹೇಳಿದರು. ಇದೇ ವೇಳೆ ಕೇರಳ ಮುಖ್ಯಮಂತ್ರಿಗಳು ತಮ್ಮ ಗೌರವ ಹಾಗೂ ಶುಭಾಶಯಗಳನ್ನು ತಿಳಿಸಿರುವುದಾಗಿ ತಿಳಿಸಿದರು.

ನಂತರ ಮಾತನಾಡಿದ ಮಾತಾ ಅಮೃತಾನಂದಮಯಿ ಅವರು, ಗೌರವವನ್ನು ಮಲಯಾಳಂ ಭಾಷೆಗೆ ಅರ್ಪಿಸಿದರು. ಈ ಪ್ರಶಸ್ತಿ ಮಲಯಾಳಂಗೆ ಸೇರಿದ್ದು, ನಮ್ಮ ಭಾಷೆ ನಮಗೆ ಗುರುತು ಮತ್ತು ರೂಪ ನೀಡಿದೆ. ಪೋಷಕರು ತಮ್ಮ ಮಕ್ಕಳಿಗೆ ತಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡುವಂತೆ ಮತ್ತು ಅದನ್ನು ಸಂರಕ್ಷಿಸುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು. ಬಳಿಕ ಶಾಸಕರಾದ ಸಿ.ಆರ್. ಮಹೇಶ್ ಮತ್ತು ಉಮಾ ಥಾಮಸ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೇರಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಕೆ.ಎಸ್. ರಾಧಾಕೃಷ್ಣನ್, ಐಜಿ ಜಿ. ಲಕ್ಷ್ಮಣ್, ಕೇರಳ ಕಾನೂನು ಅಕಾಡೆಮಿ ನಿರ್ದೇಶಕ ನಾಗರಾಜ್ ನಾರಾಯಣನ್, ನಟ ದೇವನ್ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಿಇಒ ಲಕ್ಷ್ಮಿ ಮೆನನ್ ಈ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT