ನಟ ವಿಜಯ್ 
ದೇಶ

Video: ಅಭಿಮಾನಿ ಎಸೆದ ಹೂವಿನ ಚೆಂಡನ್ನು ಬಾಂಬ್ ಎಂದು ಭಾವಿಸಿ ಹೆದರಿ ಓಡಿದ Thalapathy Vijay?

ಇಂದು ತಮಿಳುನಾಡಿನ ಕನ್ಯಾಕುಮಾರಿ ಮತ್ತು ತಿರುಚಿರಾಪಳ್ಳಿಗೆ ಆಗಮಿಸಿದ ನಟ ವಿಜಯ್ ಅಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮದೇ ಟಿವಿಕೆ ಪಕ್ಷದ ಮೂಲಕ ಸ್ಪರ್ಧಿಸಿರುವ ಖ್ಯಾತ ತಮಿಳುನಟ ದಳಪತಿ ವಿಜಯ್ ತಮ್ಮ ಪ್ರಚಾರದ ವೇಳೆ ಹೂವಿನಚೆಂಡನ್ನು ಬಾಂಬ್ ಎಂದು ತಪ್ಪಾಗಿ ಭಾವಿಸಿ ಹೆದರಿ ಓಡಿದ ಘಟನೆ ನಡೆದಿದೆ ಎನ್ನಲಾಗಿದೆ.

ಇಂದು ತಮಿಳುನಾಡಿನ ಕನ್ಯಾಕುಮಾರಿ ಮತ್ತು ತಿರುಚಿರಾಪಳ್ಳಿಗೆ ಆಗಮಿಸಿದ ನಟ ವಿಜಯ್ ಅಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಈ ವೇಳೆ ಹೆದ್ದಾರಿಯಲ್ಲಿ ಕೆಲ ಹೊತ್ತು ವಿಜಯ್ ಸೈಕಲ್ ಸವಾರಿ ಕೂಡ ಮಾಡಿದರು. ಈ ಹೊತ್ತಿನಲ್ಲಿ ಕೆಲ ಅಭಿಮಾನಿಗಳು ಅವರನ್ನು ಹಿಡಿಯಲು ಓಡಿಬಂದರು.

ಆದರೂ ನಟ ವಿಜಯ್ ಅವರಿಗೆ ಸಿಗದೇ ವೇಗವಾಗಿ ಸೈಕಲ್ ತುಳಿಯುತ್ತಾ ಮುಂದಕ್ಕೆ ಹೋದರು. ಈ ವೇಳೆ ಅವರ ಹಿಂದೆ ರಕ್ಷಣಾ ಸಿಬ್ಬಂದಿಗಳು ಅಭಿಮಾನಿಗಳನ್ನು ತಡೆದು ಪಕ್ಕಕ್ಕೆ ಕಳುಹಿಸಿದರು.

ಬಾಂಬ್ ಎಂದು ಹೆದರಿ ಓಡಿದ ವಿಜಯ್

ಇನ್ನು ಇದೇ ಸಂದರ್ಭದಲ್ಲಿ ವಿಜಯ್ ಸೈಕಲ್ ತುಳಿಯುತ್ತಿದ್ದಾಗ ಮತ್ತೋರ್ವ ಅಭಿಮಾನಿ ತಾನು ತಂದಿದ್ದ ಹೂಗಳನ್ನು ಚೆಂಡಿನ ರೀತಿ ಮಾಡಿ ನಟ ವಿಜಯ್ ಮುಂದೆ ಎಸೆದಿದ್ದಾನೆ.

ಇದನ್ನು ನೋಡಿದ ವಿಜಯ್ ಮತ್ತು ಅವರ ಭದ್ರತಾ ಸಿಬ್ಬಂದಿಗಳು ಅದನ್ನು ಬಾಂಬ್ ಎಂದು ಭಾವಿಸಿ ರಸ್ತೆಯಲ್ಲೇ ಸೈಕಲ್ ಬಿಟ್ಟು ತಮ್ಮ ವಾಹನದತ್ತ ಓಡಿದ ಪ್ರಸಂಗ ನಡೆಯಿತು.

ಬಳಿಕ ಅದು ಬಾಂಬ್ ಅಲ್ಲ.. ಹೂ ಎಂದು ತಿಳಿದು ನಟ ವಿಜಯ್ ತಮ್ಮ ಪ್ರಚಾರ ಮುಂದುವರೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ. ನೆರವು - ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು; ವಿಪರೀತ ಮೂಡ್ ಸ್ವಿಂಗ್ಸ್: 'ಆ' ದಿನಗಳ ಭೀಕರತೆ ಬಿಚ್ಚಿಟ್ಟ ನಟಿ ಐಶ್ವರ್ಯಾ!

ಮಹಿಳಾ ಮೀಸಲಾತಿ ಕುರಿತ ಚರ್ಚೆ: ಏ.15 ಕ್ಕೆ ಎಲ್ಲಾ ವಿರೋಧ ಪಕ್ಷಗಳ ಸಭೆ- ಮಲ್ಲಿಕಾರ್ಜುನ ಖರ್ಗೆ

West Asia War: ಇರಾನ್‌ಗೆ ಮಿಲಿಟರಿ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ; ಚೀನಾಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

SCROLL FOR NEXT