ರೂಪಾಲಿ ಗಂಗೂಲಿ, ಪ್ರಧಾನಿ ಮೋದಿ 
ದೇಶ

ಪ್ರಧಾನಿ ಮೋದಿ ಸರ್ವಾಧಿಕಾರಿಯಾ? ಟ್ರೋಲ್ ಗೆ ಗುರಿಯಾದ ಬಿಜೆಪಿ ನಾಯಕಿ ರೂಪಾಲಿ ಗಂಗೂಲಿ! ಅಷ್ಟಕ್ಕೂ ಆಕೆ ಹೇಳಿದ್ದೇನು?

ಪರಿಣಾಮ ಬೀರಬೇಕು ಮತ್ತು ಪ್ರಧಾನಿ ಮೋದಿ ಸರ್ವಾಧಿಕಾರಿಯಾಗಬೇಕೆಂದು ಬಯಸುತ್ತೇನೆ ಎಂಬ ಅವರ ಎಕ್ಸ್ ಖಾತೆಯಲ್ಲಿನ ಪ್ರತಿಕ್ರಿಯೆ ವ್ಯಾಪಕ ಟೀಕೆಗೆ ಆಸ್ಪದ ನೀಡಿದೆ.

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನೀಯ ಭಾಷೆ ಬಳಸಿದ ಅಪ್ರಾಪ್ತ ವಯಸ್ಸಿನ ಬಾಲಯಕಿಯ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ನಂತರ ಕಿರುತೆರೆ ನಟಿ ಮತ್ತು ಬಿಜೆಪಿ ನಾಯಕಿ ರೂಪಾಲಿ ಗಂಗೂಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.

ಪರಿಣಾಮ ಬೀರಬೇಕು ಮತ್ತು ಪ್ರಧಾನಿ ಮೋದಿ ಸರ್ವಾಧಿಕಾರಿಯಾಗಬೇಕೆಂದು ಬಯಸುತ್ತೇನೆ ಎಂಬ ಅವರ ಎಕ್ಸ್ ಖಾತೆಯಲ್ಲಿನ ಪ್ರತಿಕ್ರಿಯೆ ವ್ಯಾಪಕ ಟೀಕೆಗೆ ಆಸ್ಪದ ನೀಡಿದೆ. ಕೆಲವು ಬಳಕೆದಾರರು ನಿಂದನೀಯ ನಡವಳಿಕೆಯ ವಿರುದ್ಧ ಅವರ ನಿಲುವನ್ನು ಬೆಂಬಲಿಸಿದರೆ, ಇತರರು ಅವರ ಪದಗಳ ಆಯ್ಕೆಯನ್ನು ಟೀಕಿಸಿದ್ದು, ಅವರ ರಾಜಕೀಯ ದೃಷ್ಟಿಕೋನಗಳನ್ನು ಪ್ರಶ್ನಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಅಪ್ರಾಪ್ರ ಬಾಲಕಿಯ ವಿವಾದ ಜೊತೆಗೆ ರೂಪಾ ಗಂಗೂಲಿ ಪ್ರತಿಕ್ರಿಯೆಯನ್ನು ಜೋಡಿಸಿ ಚರ್ಚೆ ಮಾಡಲಾಗುತ್ತಿದೆ. ಇದು ರಾಜಕೀಯ ಅಭಿವ್ಯಕ್ತಿ ಮತ್ತು ಅಪ್ರಾಪ್ತ ವಯಸ್ಕರ ಒಳಗೊಳ್ಳುವಿಕೆಯ ಕುರಿತ ಮತ್ತಷ್ಟು ಚರ್ಚೆಗೆ ನಾಂದಿ ಹಾಡಿದೆ.

ಅಪ್ರಾಪ್ತ ಬಾಲಕಿ ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸಿ ಅವರ ಫೋಟೋವೊಂದಕ್ಕೆ ಹೊಡೆಯುವುದ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ವಿವಾದ ಪ್ರಾರಂಭವಾಯಿತು.

ಈ ವಿಡಿಯೋಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ರೂಪಾಲಿ ಗಂಗೂಲಿ, "ಪ್ರಧಾನಿಯನ್ನು ಈ ರೀತಿ ಅವಮಾನಿಸುವುದು ಪರಿಣಾಮಗಳನ್ನು ಬೀರಬೇಕು.ಅವರು ಸರ್ವಾಧಿಕಾರಿಯಾಗಿದ್ದರೆ ಎಂದು ನಾನು ನಿಜವಾಗಿಯೂ ಬಯಸುತ್ತೇನೆ!!! ಎಂದು ಪೋಸ್ಟ್ ಮಾಡಿದ್ದರು. ಅವರ ಈ ಹೇಳಿಕೆ ಬೇಗನೆ ಚರ್ಚೆಯ ಕೇಂದ್ರಬಿಂದುವಾಯಿತು, ಅನೇಕ ಬಳಕೆದಾರರು ಅವರು ಸರ್ವಾಧಿಕಾರ ಪದ ಉಲ್ಲೇಖಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಲವರು, ಬೆನಿಟೊ ಮುಸೊಲಿನಿ, ಇಟಲಿ ಜನರಿಗೆ ಏನು ಮಾಡಿದ್ದರು ಎಂಬುದು ಗೊತ್ತಾ?ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಾರೇ ವಿದ್ಯಾರ್ಥಿಗಳ ಪ್ರತಿಭಟನೆ, ಪ್ರಧಾನಿ ಮೋದಿ ವಿರುದ್ಧ ನಿಂದನೆ ಕುರಿತು ಸೂಕ್ಷ್ಮ ಚರ್ಚೆ ನಡೆಯುತ್ತಿರುವಂತೆಯೇ ರೂಪಾ ಗಂಗೂಲಿ ನೀಡಿರುವ ಹೇಳಿಕೆ ಮತ್ತೊಂದು ಆಯಾಮ ಪಡೆದುಕೊಂಡಿದ್ದು, ಅವರ ಹೇಳಿಕೆ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಿರಿಯ ಸಹೋದ್ಯೋಗಿ ಮೇಲೆ ಅತ್ಯಾಚಾರ: ‘Tehelka’ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೊಂದು ಶಾಕ್; ಪ್ರದೋಷ್ ಬಳಿಕ ಕೋರ್ಟ್‌ಲ್ಲಿ ಸತ್ಯ ಹೇಳಲು ಮುಂದಾದ ವಿನಯ್, ರವಿಶಂಕರ್!

2026ರಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸಗಳಿಗೆ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ?

Ganesh festival: ಪಿಒಪಿಗೆ ಗೇಟ್ ಪಾಸ್, ಮಣ್ಣಿನ ಗಣೇಶನಿಗಷ್ಟೇ ಅವಕಾಶ, ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಖಡಕ್ ಸೂಚನೆ!

ಕಳಪೆ ಕಾಮಗಾರಿ: ಮೂರು ವರ್ಷಗಳ ಹಿಂದಷ್ಟೇ ನಿರ್ಮಿಸಿದ್ದ ಗಡ್ಚಿರೋಲಿ ಸೇತುವೆ ಕುಸಿತ; ಹಲವು ಗ್ರಾಮಗಳ ಸಂಪರ್ಕ ಕಡಿತ