ಚಿಯಾನ್ ವಿಕ್ರಮ್ 
ದೇಶ

"ಶ್ರೀಮಂತರಿಗೆ ಕಾನೂನು ಅನ್ವಯಿಸಲ್ವಾ?": ಅಳಿವಿನಂಚಿನಲ್ಲಿರುವ ವಿದೇಶಿ ಪ್ರಾಣಿ ಸಾಕಿದ ಆರೋಪ, ನಟ Chiyaan Vikram ವಿರುದ್ಧ ಆಕ್ರೋಶ..!

ಇತ್ತೀಚೆಗೆ ನಟ ವಿಕ್ರಮ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ (Reel) ಒಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ಅಪರೂಪದ ಪ್ರಾಣಿಯೊಂದನ್ನು ಮುದ್ದಾಡುತ್ತಿರುವುದು ಕಂಡುಬಂದಿತ್ತು.

ಚೆನ್ನೈ: ಖ್ಯಾತ ಬಹುಭಾಷಾ ನಟ ಚಿಯಾನ್ ವಿಕ್ರಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೋ ಒಂದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಅಪರೂಪದ ಮತ್ತು ಅಳಿವಿನ ಅಂಚಿನಲ್ಲಿರುವ ವಿದೇಶಿ ಕೋತಿ 'ಲಾರ್ ಗಿಬ್ಬನ್' (Lar Gibbon) ಜೊತೆ ವಿಕ್ರಮ್ ಆಟವಾಡುತ್ತಿರುವ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಸದ್ಯ ತಮಿಳುನಾಡು ಅರಣ್ಯ ಇಲಾಖೆ ಈ ಕುರಿತು ಅಧಿಕೃತ ತನಿಖೆ ಕೈಗೆತ್ತಿಕೊಂಡಿದೆ.

ಇತ್ತೀಚೆಗೆ ನಟ ವಿಕ್ರಮ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ (Reel) ಒಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ಅಪರೂಪದ ಪ್ರಾಣಿಯೊಂದನ್ನು ಮುದ್ದಾಡುತ್ತಿರುವುದು ಕಂಡುಬಂದಿತ್ತು.

ವನ್ಯಜೀವಿ ತಜ್ಞರು ಮತ್ತು ಪ್ರಾಣಿ ಹಕ್ಕು ಹೋರಾಟಗಾರರು ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಸಂರಕ್ಷಿತ ಪ್ರಾಣಿ ಎಂದು ಗುರುತಿಸಲಾದ 'ಲಾರ್ ಗಿಬ್ಬನ್' ತಳಿಯ ಕೋತಿ ಎಂಬುದು ಬೆಳಕಿಗೆ ಬಂದಿದೆ.

ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ IV ಹಾಗೂ ಅಂತರರಾಷ್ಟ್ರೀಯ 'CITES' ಒಪ್ಪಂದದ ಪ್ರಕಾರ ಈ ಪ್ರಾಣಿಯನ್ನು ಖಾಸಗಿಯಾಗಿ ಸಾಕುವುದು ಮತ್ತು ಅನಧಿಕೃತವಾಗಿ ಸಾಗಿಸುವುದು ಕಾನೂನುಬಾಹಿರವಾಗಿದೆ.

ಶ್ರೀಮಂತರಿಗೆ ಕಾನೂನು ಅನ್ವಯಿಸುವುದಿಲ್ಲವೇ? ನೆಟ್ಟಿಗರ ಆಕ್ರೋಶ

ಈ ವಿಡಿಯೋವನ್ನು ಚೆನ್ನೈನ ಈಸ್ಟ್ ಕೋಸ್ಟ್ ರೋಡ್‌ನಲ್ಲಿರುವ ಕ್ಯಾವಿನ್‌ಕೇರ್ (CavinKare) ಸಂಸ್ಥೆಯ ಮುಖ್ಯಸ್ಥ ಸಿ.ಕೆ. ರಂಗನಾಥನ್ ಅವರ ನಿವಾಸದಲ್ಲಿ ಚಿತ್ರೀಕರಿಸಲಾಗಿತ್ತು.

ರಂಗನಾಥನ್ ಅವರು ನಟ ವಿಕ್ರಮ್ ಅವರ ಮಗಳ ಮಾವ ಆಗಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, "ಶ್ರೀಮಂತರು ಮತ್ತು ಪ್ರಭಾವಿಗಳಿಗೆ ದೇಶದ ಕಾನೂನುಗಳು ಅನ್ವಯಿಸುವುದಿಲ್ಲವೇ? ಇಂತಹ ಅಪರೂಪದ ಪ್ರಾಣಿ ಇವರ ಮನೆಗೆ ಹೇಗೆ ಬಂತು?" ಎಂದು ನೆಟ್ಟಿಗರು ಕಠಿಣವಾಗಿ ಪ್ರಶ್ನಿಸಿದ್ದಾರೆ.

ವಿಡಿಯೋ ಡಿಲೀಟ್, ತನಿಖೆ ಚುರುಕು

ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ನಟ ಚಿಯಾನ್ ವಿಕ್ರಮ್ ತಕ್ಷಣವೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಆದರೆ, ವಿಷಯ ಅಷ್ಟಕ್ಕೆ ಮುಗಿದಿಲ್ಲ.

ಚೆನ್ನೈ ವನ್ಯಜೀವಿ ವಾರ್ಡನ್ ಯೋಗೇನ್ ಕುಲಾಲ ನೇತೃತ್ವದ ತಮಿಳುನಾಡು ಅರಣ್ಯ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆಗ್ನೇಯ ಏಷ್ಯಾದಿಂದ ಮಣಿಪುರ ಮತ್ತು ಈರೋಡ್ ಮಾರ್ಗವಾಗಿ ಈ ಪ್ರಾಣಿಯನ್ನು ಚೆನ್ನೈಗೆ ಅಕ್ರಮವಾಗಿ ಸಾಗಿಸಲಾಗಿದೆಯೇ ಮತ್ತು ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನುಬದ್ಧ ದಾಖಲೆಗಳಿವೆಯೇ ಎಂಬ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಆಳವಾದ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Parliament Monsoon Session: ರಾಹುಲ್ ವಿರುದ್ಧ ಆಕ್ರೋಶ; ಸಂಸತ್ ಆವರಣದಲ್ಲಿ NDA ಸಂಸದರ ಬೃಹತ್ ಪ್ರತಿಭಟನಾ ಮೆರವಣಿಗೆ, ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ..!

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ, ಹಲವರಿಗೆ ಗಾಯ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬಾರ್ ಕ್ಯಾಷಿಯರ್‌ಗೆ ಬೆದರಿಕೆ; ಇಬ್ಬರು ಉದ್ಯಮಿಗಳು, ಪ್ರಭಾವಿ ಮಹಿಳೆ ಮೇಲೆ ಕಣ್ಣಿಟ್ಟ ಪೊಲೀಸರು!

ಬಿಲಿಯನೇರ್ Gautam Adaniಗೆ ಬಿಗ್ ರಿಲೀಫ್: ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಜಾಗೊಳಿಸಿದ ಅಮೆರಿಕಾ ನ್ಯಾಯಾಲಯ..!

ಬಿಡದಿ ಹೋರಾಟ ಅರ್ಧಕ್ಕೆ ಸ್ಥಗಿತ; ‘ರೈತರ ನ್ಯಾಯಕ್ಕಾಗಿ ತಾರ್ಕಿಕ ಅಂತ್ಯದವರೆಗೆ ಹೋರಾಟ’ ಎಂದ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ..!