ವಿಜಯ್, ಎಸ್ ವಿ ಬಾಬು, ಎಂಕೆ ಸ್ಟಾಲಿನ್ 
ದೇಶ

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!

ಕೊಳತ್ತೂರಿನ TVK ಅಭ್ಯರ್ಥಿ ವಿಎಸ್ ಬಾಬು ಅವರ ಗೆಲುವನ್ನು ಪ್ರಶ್ನಿಸಿ DMK ಮುಖ್ಯಸ್ಥ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಚೆನ್ನೈ: ಕೊಳತ್ತೂರಿನ TVK ಅಭ್ಯರ್ಥಿ ವಿಎಸ್ ಬಾಬು ಅವರ ಗೆಲುವನ್ನು ಪ್ರಶ್ನಿಸಿ DMK ಮುಖ್ಯಸ್ಥ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮತದಾನ ಯಂತ್ರಗಳಲ್ಲಿನ ಅಸಮರ್ಪಕ ಕಾರ್ಯಗಳು ಮತ್ತು ವಿವಿಪಿಎಟಿ ಯಂತ್ರಗಳಿಗೆ ಸಂಬಂಧಿಸಿದ ಅಕ್ರಮಗಳನ್ನು ಉಲ್ಲೇಖಿಸಿ, ಕೊಳತ್ತೂರು ಕ್ಷೇತ್ರದಲ್ಲಿ ಮತಗಳ ಮರುಎಣಿಕೆ ನಡೆಸುವಂತೆ ಕೋರಿದ್ದಾರೆ.

ದ್ರಾವಿಡ ಮುನ್ನೇತ್ರ ಕಳಗಂ (DMK) ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ವಿಎಸ್ ಬಾಬು ಅವರ ಚುನಾವಣೆಯನ್ನು ಅಮಾನ್ಯವೆಂದು ಘೋಷಿಸಿ ತಮ್ಮನ್ನೆ ವಿಜೇತರೆಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೊಳತ್ತೂರು ಕ್ಷೇತ್ರವು ಸ್ಟಾಲಿನ್ ಕುಟುಂಬದ ಭದ್ರಕೋಟೆಯಾಗಿತ್ತು. ಆದರೆ ಈ ಬಾರಿ ಸ್ಟಾಲಿನ್ ಕೂಡ ಟಿವಿಕೆ ಅಲೆಯಲ್ಲಿ ಸೋಲನ್ನು ಎದುರಿಸಿದರು. ಎಂಕೆ ಸ್ಟಾಲಿನ್ ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ದಳಪತಿ ವಿಜಯ್ ಕೊಳತ್ತೂರಿನಿಂದ ವಿಎಸ್ ಬಾಬು ಅವರಿಗೆ ಟಿಕೆಟ್ ನೀಡಿದ್ದರು. ಬಾಬು 82,997 ಮತಗಳನ್ನು ಪಡೆದರೇ ಸ್ಟಾಲಿನ್ 74,202 ಮತಗಳನ್ನು ಪಡೆದರು. ಪಳನಿಸ್ವಾಮಿ ಅವರ ಎಐಎಡಿಎಂಕೆ ಅಭ್ಯರ್ಥಿ 18,430 ಮತಗಳನ್ನು ಪಡೆದರು.

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ ನಟ ವಿಜಯ್ ಅವರ ಪಕ್ಷವು 234 ಸ್ಥಾನಗಳಲ್ಲಿ 107 ಸ್ಥಾನಗಳನ್ನು ಗೆದ್ದಿತು. ಆಡಳಿತಾರೂಢ ಡಿಎಂಕೆ ಕೇವಲ 59 ಸ್ಥಾನಗಳನ್ನು ಗೆದ್ದಿತು. ಚುನಾವಣೆಗೆ ಮೊದಲು, ಕಾಂಗ್ರೆಸ್ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದಾಗ್ಯೂ, ಫಲಿತಾಂಶಗಳ ನಂತರ, ಪಕ್ಷವು ತನ್ನ ನಿಲುವನ್ನು ಬದಲಾಯಿಸಿತು ಮತ್ತು ವಿಜಯ್ ಅವರನ್ನು ಬೆಂಬಲಿಸಿತು. ಎಐಎಡಿಎಂಕೆ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ CJP ಸಜ್ಜು; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ

'2ನೇ ಟೆಸ್ಟ್ ಪಂದ್ಯ ಕೂಡ ಶ್ರೀಲಂಕಾ ಕೈ ಜಾರಿ ಹೋಗಿದೆ': Harsha Bhogle ಹೇಳಿದ್ದೇನು?

MCAಗೆ FDA ಶಾಕ್: ಕ್ರಿಕೆಟ್ ಮಂಡಳಿಯ 5 ಆಹಾರ ಮಳಿಗೆಗಳ ಲೈಸೆನ್ಸ್ ಅಮಾನತು

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!