ವಧುವಿಗೆ ತಾಳಿ ಕಟ್ಟಿದ ಟಿಆರ್ ಎಸ್ ನಾಯಕಿ ಕವಿತಾ 
ದೇಶ

ವಧುವಿಗೆ ತಾಳಿ ಕಟ್ಟಿದ TRS ನಾಯಕಿ ಕವಿತಾ! ಏನಿದು ವಿಚಿತ್ರ ಸಂಪ್ರದಾಯ? Video ನೋಡಿ

ಟಿಆರ್ ಎಸ್ ನಾಯಕಿ ಕವಿತಾ ಅವರು, ಬುಧವಾರ ತೆಲಂಗಾಣ ರಕ್ಷಣಾ ಸೇನಾ ನಾಯಕ ಬಾಷಬೋಯಿನ್ ಬಾಲಪ್ರಸಾದ್ ಹಾಗೂ ಶಿವಾನಿ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ಹೈದರಾಬಾದ್: ವಧುವರರ ಕುಟುಂಬ ಸದಸ್ಯರಾಗಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಟಿಆರ್ ಎಸ್ ನಾಯಕಿ ಕಲ್ವಕುಂಟ್ಲ ಕವಿತಾ ಅವರು ಮುದಿರಾಜ್ ಸಂಪ್ರದಾಯದಂತೆ ವಧುವಿಗೆ ತಾನೇ ತಾಳಿ ಕಟ್ಟಿದ್ದಾರೆ.

ಟಿಆರ್ ಎಸ್ ನಾಯಕಿ ಕವಿತಾ ಅವರು, ಬುಧವಾರ ತೆಲಂಗಾಣ ರಕ್ಷಣಾ ಸೇನಾ ನಾಯಕ ಬಾಷಬೋಯಿನ್ ಬಾಲಪ್ರಸಾದ್ ಹಾಗೂ ಶಿವಾನಿ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ಬಾಲಪ್ರಸಾದ್ ಯಾದದ್ರಿ ಅವರು ಭುವನಗಿರಿ ಜಿಲ್ಲೆಯ ಗುಡೂರು ಗ್ರಾಮದವರು. ಶಿವಾನಿ ಸೀತಾ ಫಲ್ಮಂಡಿಯವರು.

ಬಾಲಪ್ರಸಾದ್ ಅವರು, ಕಲ್ವಕುಂಟ್ಲ ಕವಿತಾ ಅವರು ತಮ್ಮ ಕುಟುಂಬದ ಮಗಳಾಗಿ ವಿವಾಹ ವಿಧಿವಿಧಾನಗಳನ್ನು ನೆರವೇರಿಸಬೇಕು ಎಂದು ಬಯಸಿದ್ದರು ಎನ್ನಲಾಗಿದೆ.

ಅದರಂತೆ ಕಲ್ವಕುಂಟ್ಲ ಕವಿತಾ ಅವರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ಮುದಿರಾಜ್ ಪದ್ಧತಿಯಂತೆ ವಧುವಿಗೆ ತಾಳಿ ಕಟ್ಟಿದರು ಎನ್ನಲಾಗಿದೆ.

ಏನಿದು ಮುದಿರಾಜ್ ಪದ್ಧತಿ?

ಕುಟುಂಬದವರು ವಿವರಿಸಿದ ಪ್ರಕಾರ, ಮುದಿರಾಜ್ ಸಂಪ್ರದಾಯದಲ್ಲಿ, ವರನು ಮಂಗಳಸೂತ್ರವನ್ನು ವಧುವಿಗೆ ಕಟ್ಟುವ ಮೊದಲು ವರನ ಸಹೋದರಿ ಅಥವಾ ಆತನ ಕುಟುಂಬದ ಇನ್ನೊಬ್ಬ ಮಹಿಳಾ ಸದಸ್ಯರು ವಧುವಿಗೆ ತಾಳಿ ಕಟ್ಟುತ್ತಾರೆ.

ಕಲ್ವಕುಂಟ್ಲ ಕವಿತಾ ಅವರು ಗೌರಿ ಪೂಜೆಯಲ್ಲಿ ಭಾಗವಹಿಸಿ, ನಂತರ ಅರಿಶಿನ ದಾರದಿಂದ ಶಿವಾನಿಯ ಕುತ್ತಿಗೆಗೆ ಮೂರು ಗಂಟುಗಳನ್ನು ಕಟ್ಟಿದರು. ಇದರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ! Video

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ; ಬನ್ನಿ ಅಖಾಡಕ್ಕೆ, ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು: ರಾಮುಲು, ರೆಡ್ಡಿಗೆ ನಾಗೇಂದ್ರ ಸವಾಲು

Toxic: ಇಂತಹ ವಿಭಿನ್ನ ಸಿನಿಮಾ ಮಾಡಲು ಗಟ್ಸ್ ಬೇಕು; ಯಶ್ ಹಾಡಿ ಹೊಗಳಿದ ಕಿಚ್ಚ ಸುದೀಪ್!

ಹುಬ್ಬಳ್ಳಿ: ಹಾಡಹಗಲೇ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ; ಭಯಾನಕ ವಿಡಿಯೋ ವೈರಲ್‌

ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ: ಕೈಗಾರಿಕಾ ಅಭಿವೃದ್ಧಿಗೆ 5 ನಗರಗಳನ್ನು ಗುರುತಿಸಲು ಅಧಿಕಾರಿಗಳಿಗೆ CM DK Shivakumar ನಿರ್ದೇಶನ