ದೆಹಲಿ ಡೇ ಕೇರ್‌ನಲ್ಲಿ 3 ವರ್ಷದ ಮಗುವಿನ ಮೇಲೆ ಕ್ರೌರ್ಯ 
ದೇಶ

ದೆಹಲಿ ಡೇ ಕೇರ್‌ನಲ್ಲಿ 3 ವರ್ಷದ ಮಗುವಿನ ಮೇಲೆ ಕ್ರೌರ್ಯ; ಕುರ್ಚಿಗೆ ಕಟ್ಟಿ ಹಾಕಿ ಭೀಕರ ಹಲ್ಲೆ, ಭಯಾನಕ Video ನೋಡಿ

ಈಶಾನ್ಯ ದೆಹಲಿಯ ಮೌಜ್‌ಪುರ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು, ದೆಹಲಿ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಡೇ ಕೇರ್‌ ಕೇರ್‌ಟೇಕರ್ ಅಮಾನವೀಯ ಕೃತ್ಯ ಎಸಗಿದ್ದು, ಹಳದಿ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತಿದ್ದ ಮೂರು ವರ್ಷದ ಮಗುವನ್ನು ತನ್ನ ಕಾಲುಗಳಿಂದ ನೆಲಕ್ಕೆ ತಳ್ಳಿ, ಭೀಕರವಾಗಿ ಹಲ್ಲೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈಶಾನ್ಯ ದೆಹಲಿಯ ಮೌಜ್‌ಪುರ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು, ದೆಹಲಿ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ನಾಲ್ವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಶಾಲೆಯ ನಿರ್ದೇಶಕಿ ಸುನೀತಾ ಬನ್ಸಾಲ್, ಪ್ರಾಂಶುಪಾಲರಾದ ನೀಲಂ ಮತ್ತು ಶಿಕ್ಷಕಿಯರಾದ ಸಿಮ್ರಾನ್ ಹಾಗೂ ಪೂಜಾ ವಿರುದ್ಧ ಕೇಸ್ ದಾಖಲಿಸಿದ್ದು, ಕೇರ್‌ಟೇಕರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಪೋಷಕರ ಪ್ರಕಾರ, ಶಾಲೆಯು ಆರಂಭದಲ್ಲಿ ಯಾವುದೇ ಹಲ್ಲೆ ನಡೆದಿಲ್ಲ ಎಂದು ನಿರಾಕರಿಸಿತ್ತು. ಆದರೆ ಶಾಲೆಯ ಒಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲು ಪೋಷಕರು 1,500 ರೂ.ಗಳನ್ನು ಪಾವತಿಸಿ, ವಿಡಿಯೋ ಪಡೆದ ನಂತರ ಸಿಬ್ಬಂದಿ ಕೃತ್ಯ ಬಯಲಾಗಿದೆ.

ಮೂರು ವರ್ಷದ ಮಗು ತನ್ನ ಹೆತ್ತವರಿಗೆ ಕಿವಿ ನೋವು ಎಂದು ಹೇಳಿದ್ದು, ಮಗುವಿನ ಮುಖ ಮತ್ತು ತೋಳುಗಳ ಮೇಲೆ ಮೂಗೇಟುಗಳು ಸಹ ಕಂಡುಬಂದಿವೆ. ತಕ್ಷಣ, ಪೋಷಕರು ಮಗುವನ್ನು ವೈದ್ಯರ ಬಳಿಗೆ ಕರೆದೊಯ್ದರು, ಅವರು ಎರಡೂ ಕಿವಿಗಳು ಊದಿಕೊಂಡಿದ್ದು, ದೈಹಿಕ ಹಲ್ಲೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ನಂತರ ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ದೌರ್ಜನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆದಾಗ್ಯೂ, ಶಾಲೆಯವರು ಯಾವುದೇ ದೈಹಿಕ ಹಲ್ಲೆ ನಡೆದಿಲ್ಲ ಎಂದು ನಿರಾಕರಿಸಿದೆ.

ತರುವಾಯ ಪೋಷಕರು ತರಗತಿಯ ಸಿಸಿಟಿವಿ ದೃಶ್ಯಗಳನ್ನು ಪಡೆಯಲು 1,500 ರೂ. ಪಾವತಿ ಮಾಡಿದ ನಂತರ ಶಾಲೆಯು ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಿದೆ.

ಮಗುವಿನ ತಾಯಿ ಆಗಸ್ಟ್ 16, 17 ಮತ್ತು 18 ರ ದೃಶ್ಯಗಳನ್ನು ಪರಿಶೀಲಿಸಿದ್ದು, ದೃಶ್ಯಾವಳಿಯಲ್ಲಿ ಮಗುವನ್ನು ಏಪ್ರನ್ ಬಳಸಿ ಕುರ್ಚಿಗೆ ಕಟ್ಟಿಹಾಕಿರುವುದು ಕಂಡುಬಂದಿದೆ. ಅಲ್ಲದೆ ಶಿಕ್ಷಕ ಮತ್ತು ಕೇರ್ ಟೇಕರ್ ಇಬ್ಬರೂ ಮಗುವಿನ ಮೇಲೆ ದೈಹಿಕ ದೌರ್ಜನ್ಯ ನಡೆಸುತ್ತಿರುವುದನ್ನು ಮತ್ತು ಹಲ್ಲೆ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

"ಮಗುವನ್ನು ಮೂರು ಗಂಟೆಗಳ ಕಾಲ ಏಪ್ರನ್‌ನಿಂದ ಕಟ್ಟಿಹಾಕಲಾಗಿದೆ ಮತ್ತು ನಿರಂತರವಾಗಿ ಥಳಿಸಲಾಯಿತು" ಎಂದು ಮಗುವಿನ ತಂದೆ NDTV ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌ ; ₹40 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದ ಮಧ್ಯವರ್ತಿ, BJP ಮುಖಂಡನ ಬಂಧನ!

ಕಾವೇರಿ ನೀರಿನ ವಿವಾದ: ಕರ್ನಾಟಕದಿಂದ 9,000 ಕ್ಯೂಸೆಕ್ ನೀರು ಬಿಡುಗಡೆಯಾದರೂ, ಕೊರತೆ ಇದೆ-ತಮಿಳುನಾಡು; ಸೆ.15 ಕ್ಕೆ ಮತ್ತೆ ವಿಚಾರಣೆ

ನೇಪಾಳದಲ್ಲಿ ಹಠಾತ್ ಪ್ರವಾಹ: ಕರ್ನಾಟಕದ 13 ಮಂದಿ ನಾಪತ್ತೆ; ಇನ್ನೂ ಸುಳಿವು ಸಿಕ್ಕಿಲ್ಲ ಎಂದ ಸಿಎಂ ಡಿಕೆ ಶಿವಕುಮಾರ್

7,200 ಮೀಟರ್‌ ಎತ್ತರದಿಂದ ಕುಸಿತ; ನೇಪಾಳ ಪ್ರವಾಹಕ್ಕೆ ಕಾರಣವಾದ ಹಿಮನದಿ ಕುಸಿತದ ಭೀಕರ ಕ್ಷಣ ಡ್ರೋನ್ ಕ್ಯಾಮೆರಾದಲ್ಲಿ ಸೆರೆ!

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!