ನವಜೋತ್ ಕೌರ್ ಸಿಧು  
ದೇಶ

ನಾನು ಪಕ್ಷ ತೊರೆದಿದ್ದೇನೆ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಸಮರ್ಥ, ಅತೀ ಭ್ರಷ್ಟ; ನವಜೋತ್ ಕೌರ್ ಸಿಧು ವಾಗ್ದಾಳಿ

ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಜೊತೆಗಿನ ಒಪ್ಪಂದದ ಮೂಲಕ ವಾರಿಂಗ್ ಪಕ್ಷವನ್ನು ಸಣ್ಣ ಲಾಭಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಮಾಜಿ ಶಾಸಕಿ ಆರೋಪಿಸಿದ್ದಾರೆ.

ಚಂಡೀಗಡ: ಕಾಂಗ್ರೆಸ್ ನಾಯಕಿ ನವಜೋತ್ ಕೌರ್ ಸಿಧು ಪಕ್ಷ ತೊರೆದಿದ್ದಾಗಿ ಹೇಳಿದ್ದು, ಪಕ್ಷದ ಪಂಜಾಬ್ ಘಟಕದ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರನ್ನು ಇದುವರೆಗಿನ ಅತ್ಯಂತ ಅಸಮರ್ಥ, ಭ್ರಷ್ಟ ಅಧ್ಯಕ್ಷ ಎಂದು ಕರೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಕುರ್ಚಿಗೆ 500 ಕೋಟಿ ರೂ ಎಂಬ ಹೇಳಿಕೆಯೊಂದಿಗೆ ರಾಜಕೀಯ ವಿವಾದಕ್ಕೆ ಕಾರಣವಾದ ನಂತರ, ಕಳೆದ ತಿಂಗಳು ಕೌರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು.

ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಜೊತೆಗಿನ ಒಪ್ಪಂದದ ಮೂಲಕ ವಾರಿಂಗ್ ಪಕ್ಷವನ್ನು ಸಣ್ಣ ಲಾಭಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಮಾಜಿ ಶಾಸಕಿ ಆರೋಪಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ರಾಜಾ ವಾರಿಂಗ್, ಇದುವರೆಗಿನ ಅತ್ಯಂತ ಅಸಮರ್ಥ, ಭ್ರಷ್ಟ ಅಧ್ಯಕ್ಷ. ಕಾಂಗ್ರೆಸ್ ನಾಶಮಾಡಲು ಸಿಎಂ ಜೊತೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ನೀವು ಜೈಲಿನಿಂದ ನಿಮ್ಮನ್ನು ರಕ್ಷಿಸಿಕೊಂಡಿದ್ದೀರಿ. ಎಎಪಿ ಜೊತೆಗಿನ ಒಪ್ಪಂದದೊಂದಿಗೆ ನೀವು ಸಣ್ಣ ಲಾಭಕ್ಕಾಗಿ ಪಕ್ಷವನ್ನು ಮಾರಿದ್ದೀರಿ ಎಂದು ವಾಗ್ಧಾಳಿ ನಡೆಸಿದ್ದಾರೆ.

ನೀವು ನನಗಾಗಿ ಅಮಾನತು ಪತ್ರವನ್ನು ಸಿದ್ಧಪಡಿಸಿದ್ದೀರಿ. ಆದರೆ (ಶಿರೋಮಣಿ ಅಕಾಲಿ ದಳ ನಾಯಕ ಬಿಕ್ರಮ್ ಸಿಂಗ್) ಮಜಿಥಿಯಾ ಜೊತೆ ಕೆಲಸ ಮಾಡುವಲ್ಲಿ ನಿರತರಾಗಿದ್ದ ಸುಮಾರು 12 ಹಿರಿಯ ಕಾಂಗ್ರೆಸ್ ನಾಯಕರ ಬಗ್ಗೆ ಏನು ಹೇಳಬೇಕು, ಅವರು ನವಜೋತ್ ಸಿಂಗ್ ಅವರನ್ನು ಸೋಲಿಸಿದ್ದಕ್ಕಾಗಿ ನೀವು ಅವರೆಲ್ಲರಿಗೂ ದೊಡ್ಡ ಹುದ್ದೆಗಳನ್ನು ನೀಡಿದ್ದೀರಿ ಎಂದು ಕೌರ್ X ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

ನಿಮ್ಮನ್ನು ನಾಶಮಾಡಲು ನನ್ನಲ್ಲಿ ಸಾಕಷ್ಟು ಪುರಾವೆಗಳಿವೆ. ಆದರೆ ನನಗೆ ಆಸಕ್ತಿ ಇಲ್ಲ. ಏಕೆಂದರೆ ನಾನು ಕಾಂಗ್ರೆಸ್ ತೊರೆದಿದ್ದೇನೆ, ಅಲ್ಲಿ ಯಾವುದೇ ಭರವಸೆಯ ನಾಯಕನ ಮಾತು ಕೇಳಿಬರುತ್ತಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Union Budget 2026 Live updates | ಕೇಂದ್ರ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್; ಏನನ್ನು ನಿರೀಕ್ಷಿಸಬಹುದು?

Hate Speech Bill: ಕಾಯ್ದೆ ಹೆಸರಿನಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಹರಣ ಸರಿಯಲ್ಲ; ಅಂಕಿತಕ್ಕೆ ರಾಜ್ಯಪಾಲ ನಕಾರ, ಮಸೂದೆ ರಾಷ್ಟ್ರಪತಿ ಅಂಗಳಕ್ಕೆ..!

ಈ ಬಾರಿ ಬಜೆಟ್ ನಲ್ಲಿ ನಮಗೆ ನ್ಯಾಯಯುತ ಪಾಲು ಬೇಕೇ ಬೇಕು: ಕಾಂಗ್ರೆಸ್ ಆಗ್ರಹ

Epstein ಕಡತಗಳಲ್ಲಿ ಪ್ರಧಾನಿ ಮೋದಿ ಉಲ್ಲೇಖ: ಭಾರತದ ಪ್ರತಿಕ್ರಿಯೆ ಏನು?

5th T20I: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 46 ರನ್ ಗೆಲುವು; 4-1 ಅಂತರದಲ್ಲಿ ಸರಣಿ ವಶ

SCROLL FOR NEXT