ಹಿಮಂತ ಬಿಸ್ವಾ ಶರ್ಮಾ 
ದೇಶ

ರಾಹುಲ್ ಗಾಂಧಿಯ ಒಂದು ಕರೆ ಎಲ್ಲವನ್ನು ಮುಳುಗಿಸಿತ್ತು: 2014ರಲ್ಲಿ ನನ್ನನ್ನು ಸಿಎಂ ಮಾಡಲು ಸೋನಿಯಾ ಬಯಸಿದ್ರು: ಸಿಎಂ ಹಿಮಂತ

2014ರಲ್ಲಿ 58 ಕಾಂಗ್ರೆಸ್ ಶಾಸಕರು ನನ್ನನ್ನು ಬೆಂಬಲಿಸಿದ್ದರು. ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಪಕ್ಷಕ್ಕೆ ದಿನಾಂಕ ನಿಗದಿಪಡಿಸಲು ಕೇಳಿಕೊಂಡಿದ್ದರು.

2014ರಲ್ಲಿ 58 ಕಾಂಗ್ರೆಸ್ ಶಾಸಕರು ನನ್ನನ್ನು ಬೆಂಬಲಿಸಿದ್ದರು. ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಪಕ್ಷಕ್ಕೆ ದಿನಾಂಕ ನಿಗದಿಪಡಿಸಲು ಕೇಳಿಕೊಂಡಿದ್ದರು. ಆದರೆ ಆ ಸಮಯದಲ್ಲಿ ಅಮೆರಿಕ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಪಕ್ಷದ ನಾಯಕರಿಗೆ ಕರೆ ಮಾಡಿದ ಬೆನ್ನಲ್ಲೇ ಪರಿಸ್ಥಿತಿ ಬದಲಾಯಿತು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

2011ರ ವಿಧಾನಸಭಾ ಚುನಾವಣೆಯ ನಂತರ ಅಸ್ಸಾಂನಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಆಗ ಶಾಸಕರ ಒಂದು ಭಾಗವು ಆಗಿನ ಮುಖ್ಯಮಂತ್ರಿ ತರುಣ್ ಗೊಗೊಯ್ ಬದಲಿಗೆ ಹಿಮಂತ್ ಶರ್ಮಾ ಅವರನ್ನು ಮುಖ್ಯಮಂತ್ರಿಯಾಗಿ ಬೆಂಬಲಿಸಿತು. ಆದರೆ ರಾಹುಲ್ ಗಾಂಧಿಯಿಂದಾಗಿ ನಾನು ಸಿಎಂ ಸ್ಥಾನ ಕಳೆದುಕೊಳ್ಳಬೇಕಾಯಿತು ಎಂದರು.

ನಂತರ 2015ರಲ್ಲಿ ಶರ್ಮಾ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದರು. ಅಲ್ಲದೆ 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೊದಲ ಗೆಲುವನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು. ಸೋನಿಯಾ ಗಾಂಧಿ ದಿನಾಂಕವನ್ನು ನಿಗದಿಪಡಿಸಲು ನನ್ನನ್ನು ಕೇಳಿದರು. ನಾನು 2014ರ ಜೂನ್ ನಲ್ಲಿ ಕಾಮಾಕ್ಯ ದೇವಸ್ಥಾನದಲ್ಲಿ ನಡೆಯಲಿದ್ದ ಅಂಬುಬಾಚಿ ಮೇಳದ ನಂತರ ನಾನು ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ನಾನು ಅವರಿಗೆ ಹೇಳಿದೆ ಎಂದು ಶರ್ಮಾ ಹೇಳಿದರು.

ರಾಹುಲ್ ಗಾಂಧಿ ಕರೆ ಮಾಡಿದ ನಂತರ ಪರಿಸ್ಥಿತಿ ಬದಲಾಯಿತು. ಆಗ ನನಗೆ ತೀವ್ರ ಬೇಸರವಾಯಿತು. ಆದರೆ ಈಗ ಒಬ್ಬರ ಜೀವನದಲ್ಲಿ ಏನಾಗುತ್ತದೆಯೋ ಅದು ಒಳ್ಳೆಯದಕ್ಕಾಗಿ ಎಂದು ನಾನು ನಂಬುತ್ತೇನೆ. ನಾನು ಕಾಂಗ್ರೆಸ್‌ನಲ್ಲಿದ್ದರೆ ನನಗೆ ಸಿಗುವುದಕ್ಕಿಂತ ಹೆಚ್ಚಿನದನ್ನು ದೇವರು ನನಗೆ ನೀಡಿದ್ದಾನೆ ಎಂದು ಶರ್ಮಾ ಹೇಳಿದರು. 2021ರಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿಯಾದ ನಂತರ ಅಸ್ಸಾಂ ಮತ್ತು ಸನಾತನ ಧರ್ಮ ಎರಡಕ್ಕೂ ಪೂರ್ಣ ಹೃದಯದಿಂದ ಸೇವೆ ಸಲ್ಲಿಸುವ ಅವಕಾಶ ನನಗೆ ಸಿಕ್ಕಿತು. ನಾನು ಕಾಂಗ್ರೆಸ್‌ನಲ್ಲಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು. ಅವರು ಎಂದಾದರೂ ಪುಸ್ತಕ ಬರೆದರೆ, ಈ ಘಟನೆಗಳ ಬಗ್ಗೆ ವಿವರಿಸುತ್ತೇನೆ ಎಂದು ಶರ್ಮಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನ್ಯಾಯಯುತವಾಗಿ ನಡೆಸಿಕೊಳ್ಳಿ': ಪಾಕ್ ಮಾಜಿ ಪ್ರಧಾನಿ ಪರ ಕಪಿಲ್ ದೇವ್, ಸುನೀಲ್ ಗವಾಸ್ಕರ್ ಸೇರಿ 14 ಮಾಜಿ ನಾಯಕರು ಬ್ಯಾಟಿಂಗ್!

India AI Impact Expo 2026: ಆವಿಷ್ಕಾರ, ನಾವೀನ್ಯತೆಗಳ ಪ್ರಬಲ ಸಂಗಮ- ಪ್ರಧಾನಿ ಮೋದಿ

ವಿಮಾನ ಪತನದಲ್ಲಿ ಅಜಿತ್ ಪವಾರ್ ಸಾವು: ಎರಡೂ ಫ್ಲೈಟ್ ರೆಕಾರ್ಡರ್‌ಗಳು ಹಾನಿಗೊಳಗಾಗಿವೆ; ನಾಗರಿಕ ವಿಮಾನಯಾನ ಸಚಿವಾಲಯ

ರಾಜ್ಯ ಬಜೆಟ್: SC-ST ಗಳಿಗೆ ಅನುದಾನ ಹಂಚಿಕೆಯೇ CM ಸಿದ್ದರಾಮಯ್ಯ ಮುಂದಿರುವ ಬಹು ದೊಡ್ಡ ಸವಾಲು!

'ಮಹಿಳಾ ಮೀಸಲಾತಿ ಬಂದರೆ ನನ್ನ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ, ಶಾಸಕರು ಫಾರಿನ್ ಟ್ರಿಪ್ ಹೋದ್ರೆ ಏನು ತಪ್ಪು'? : ಕೆ ಎನ್ ರಾಜಣ್ಣ

SCROLL FOR NEXT