ಅಮಿತ್ ಶಾ 
ದೇಶ

ಕಾಂಗ್ರೆಸ್ ದೇಶದ ಗಡಿ ತೆರೆದಿಟ್ಟಿದ್ದೆ ಅಸ್ಸಾಂನಲ್ಲಿ ಒಳನುಸುಳುವಿಕೆಗೆ ಕಾರಣ: ಅಮಿತ್ ಶಾ

ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮವನ್ನು ಮಾಡಿಲ್ಲ. ಆದರೆ "ಈಗ ಪ್ರತಿದಿನ 14 ಕಿ.ಮೀ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂದರು.

ನಾಥನ್‌ಪುರ: ಕಾಂಗ್ರೆಸ್ ದೇಶದ ಗಡಿಗಳನ್ನು ತೆರೆದಿಟ್ಟಿದ್ದೆ ಅಸ್ಸಾಂನಲ್ಲಿ ಒಳನುಸುಳುವಿಕೆಗೆ ಕಾರಣವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಆರೋಪಿಸಿದ್ದಾರೆ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರವು ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮವನ್ನು ಮಾಡಿಲ್ಲ. ಆದರೆ "ಈಗ ಪ್ರತಿದಿನ 14 ಕಿ.ಮೀ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದು ದೇಶದಲ್ಲೇ ಅತಿ ಹೆಚ್ಚು" ಎಂದರು.

ದೇಶಾದ್ಯಂತ 15 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳುವ ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ (ವಿವಿಪಿ)ನ ಎರಡನೇ ಹಂತವನ್ನು ಅವರು ಕ್ಯಾಚರ್ ಜಿಲ್ಲೆಯಿಂದ ಪ್ರಾರಂಭಿಸಿದರು.

ದೇಶದ ಗಡಿ ಗ್ರಾಮಗಳ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಅವರ ಆದ್ಯತೆಯಾಗಿದೆ ಮತ್ತು ಈ ಕಾರ್ಯಕ್ರಮವು "ಈ ಗುರಿ ಸಾಧಿಸುವತ್ತ ಒಂದು ಮಹತ್ವದ ಹೆಜ್ಜೆ" ಎಂದು ಶಾ ಹೇಳಿದರು.

ಗಡಿ ಗ್ರಾಮಗಳಿಂದ ವಲಸೆಯನ್ನು ತಡೆಯಲು ಮತ್ತು ಈ ಅಂತರರಾಷ್ಟ್ರೀಯ ಗಡಿಗಳ ಮೂಲಕ ಒಳನುಸುಳುವಿಕೆಯನ್ನು ತಡೆಯಲು ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಶಾ ತಿಳಿಸಿದರು.

6900 ಕೋಟಿ ರೂಪಾಯಿ ವೆಚ್ಚದ ಎರಡನೇ ಹಂತದ ವಿವಿಪಿ ದೇಶಾದ್ಯಂತ 1954 ಹಳ್ಳಿಗಳನ್ನು ಒಳಗೊಳ್ಳಲಿದೆ ಎಂದು ಅವರು ಹೇಳಿದರು.

"ಕಳೆದ 10 ವರ್ಷಗಳಲ್ಲಿ, ಬಿಜೆಪಿ ಅಸ್ಸಾಂನ ಅಭಿವೃದ್ಧಿಯನ್ನು ಖಚಿತಪಡಿಸಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಪ್ರವಾಹ ಮುಕ್ತಗೊಳಿಸುತ್ತದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ನೇತೃತ್ವದ 'Pax Silica' ಕೂಟಕ್ಕೆ ಭಾರತ ಸೇರ್ಪಡೆ: ಚೀನಾದ ಆರ್ಥಿಕತೆಗೆ ಭಾರೀ ಹೊಡೆತ!

ಭಾರತದ ವಿರುದ್ಧ ಸೋತಿದ್ದು ಅವಮಾನ ಅನಿಸಲಿಲ್ಲ: ಆದರೆ ಲಂಕಾ ಪೊಲೀಸರ ಬಗ್ಗೆ ಬೇಸರ ವ್ಯಕ್ತಪಡಿಸಿದ Pak ಬೌಲರ್!

'ದೊಡ್ಡ ಕಾರ್ಯಕ್ರಮ, ಸಣ್ಣಪುಟ್ಟ ಲೋಪಗಳು ಸಹಜ..': Congress ಟೀಕಿಸಿದ್ದ AI Summit ಶ್ಲಾಘಿಸಿದ ಸಂಸದ ಶಶಿತರೂರ್!

AI ಶೃಂಗಸಭೆ: ಬಟ್ಟೆ ಬಿಚ್ಚಿ ಪ್ರತಿಭಟಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಲಿನಿಂದ ಒದ್ದು ಓಡಿಸಿದ ಸಾರ್ವಜನಿಕರು, Video!

ಸೈಬರ್ ವಂಚನೆ: ರಾಜ್ಯದಲ್ಲಿ ಮ್ಯೂಲ್ ಅಕೌಂಟ್ ಗಳ ಸ್ಥಗಿತ; 68 ಜನರ ಬಂಧನ

SCROLL FOR NEXT