ಪ್ರಧಾನಿ ಮೋದಿ 
ದೇಶ

'ರಾಜಕೀಯದಲ್ಲಿ ಪೂರ್ಣವಿರಾಮ ಇಲ್ಲ': 59 ರಾಜ್ಯಸಭಾ ಸದಸ್ಯರಿಗೆ ಬೀಳ್ಕೊಡುಗೆ; ಖರ್ಗೆ, ದೇವೇಗೌಡರನ್ನು ಶ್ಲಾಘಿಸಿದ ಮೋದಿ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಅವರು ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಸಂಸತ್ತಿನ ಕಲಾಪಗಳಲ್ಲಿ ಕಳೆದ ಧೀಮಂತ ನಾಯಕರು ಎಂದರು.

ನವದೆಹಲಿ: ಏಪ್ರಿಲ್ ಮತ್ತು ಜುಲೈ ನಡುವೆ ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ 59 ಸದಸ್ಯರಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ನೆನಪಿನ ಸ್ಮರಣಿಕೆಗಳನ್ನು ನೀಡಿ ಗೌರವದಿಂದ ಬೀಳ್ಕೊಟ್ಟರು.

ಇಂದು ಮೇಲ್ಮನೆಯಲ್ಲಿ ನಿವೃತ್ತರಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸಂಸತ್ತನ್ನು "ಮುಕ್ತ ವಿಶ್ವವಿದ್ಯಾಲಯ" ಎಂದು ಕರೆದರು ಮತ್ತು ಹೊರಹೋಗುವ ಸಂಸದರು, ತಮ್ಮ ಕ್ಷೇತ್ರಗಳಲ್ಲಿ ಇಲ್ಲಿ ಪಡೆದ ಅನುಭವವನ್ನು ಜನರಿಗೆ ತಲುಪಿಸಬೇಕು ಎಂದರು.

ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ದೇಶದ ಹಿತದೃಷ್ಟಿಯಿಂದ ಸದಸ್ಯರು ಒಟ್ಟಾಗಿ ಕೆಲಸ ಮಾಡಿದ್ದನ್ನು ಪ್ರಧಾನಿ ನೆನೆದರು. ಇನ್ನು ಈ ಸಭೆಯಲ್ಲಿ ನಿವೃತ್ತರಾಗುತ್ತಿರುವ ಸದಸ್ಯರಲ್ಲಿ ವಿವಿಧ ಪಕ್ಷಗಳ ಪ್ರಮುಖ ನಾಯಕರು ಸೇರಿದ್ದಾರೆ. ನಿವೃತ್ತ ಸದಸ್ಯರಿಗೆ ನೆನಪಿನ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ನಿವೃತ್ತರಾಗುತ್ತಿರುವ ಸದಸ್ಯರ ಸೇವೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಸದನಕ್ಕೆ ಅವರು ನೀಡಿದ ಕೊಡುಗೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿರುತ್ತವೆ ಎಂದು ತಿಳಿಸಿದರು.

“ಜ್ಞಾನಕ್ಕಿಂತ ಅನುಭವಕ್ಕೆ ಶಕ್ತಿ ಹೆಚ್ಚು. ಶೈಕ್ಷಣಿಕ ಜ್ಞಾನವು ಸೀಮಿತವಾಗಿರಬಹುದು, ಆದರೆ ಸದಸ್ಯರು ಇಲ್ಲಿ ಕಳೆದ ಸಮಯ ಮತ್ತು ಪಡೆದ ಅನುಭವವು ದೇಶದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ” ಎಂದು ಪ್ರಧಾನಿ ಹೇಳಿದರು.

"ರಾಜಕೀಯದಲ್ಲಿ ಪೂರ್ಣವಿರಾಮ ಅಥವಾ ನಿವೃತ್ತಿ ಎಂಬುದೇ ಇಲ್ಲ. ಭವಿಷ್ಯವು ನಿಮಗಾಗಿ ಕಾಯುತ್ತಿದೆ ಮತ್ತು ನಿಮ್ಮ ಅನುಭವವು ನಮ್ಮ ರಾಷ್ಟ್ರೀಯ ಜೀವನದ ಶಾಶ್ವತ ಭಾಗವಾಗಿ ಉಳಿಯುತ್ತದೆ" ಎಂದು ಮೋದಿ ತಿಳಿಸಿದರು.

ಇದೇ ವೇಳೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಅವರು ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಸಂಸತ್ತಿನ ಕಲಾಪಗಳಲ್ಲಿ ಕಳೆದ ಧೀಮಂತ ನಾಯಕರು ಎಂದರು.

"ಅವರು ಸದನಕ್ಕೆ ಅಂತಹ ಸಮರ್ಪಣಾಭಾವದಿಂದ ಹಾಜರಾಗುವುದನ್ನು ಮುಂದುವರಿಸುವ ವಿಧಾನವು ನಿಜವಾಗಿಯೂ ಇತರರಿಗೆ ಮಾದರಿ. ಎಲ್ಲಾ ಹೊಸ ಸಂಸದರು ಅವರನ್ನು ನೋಡಿ ಕಲಿಯಬೇಕಾಗಿದೆ" ಎಂದು ಪ್ರಧಾನಿ ಹೇಳಿದರು.

ನಿರ್ಗಮಿತ ಉಪ ಸಭಾಪತಿ ಹರಿವಂಶ್ ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಅವರನ್ನು "ಸೌಮ್ಯ ಮತ್ತು ಮೃದುಭಾಷಿ". ಆದರೆ "ಕಠಿಣ ಕ್ರಮದ ವ್ಯಕ್ತಿ" ಎಂದು ಬಣ್ಣಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸೀಟ್ ಚಾರ್ಜ್‌ಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಇನ್ನು ಮುಂದೆ ಶೇ.60ರಷ್ಟು ಸೀಟುಗಳು ಉಚಿತ..!

ಅಸ್ಸಾಂನಲ್ಲಿ ಕಾಂಗ್ರೆಸ್ ಗೆ ಭಾರಿ ಹೊಡೆತ: ಹಿರಿಯ ನಾಯಕ ಪ್ರದ್ಯುತ್ ಬೊರ್ಡೊಲೊಯಿ ಬಿಜೆಪಿಗೆ ಸೇರ್ಪಡೆ!

ದೆಹಲಿಯಲ್ಲಿ ಭೀಕರ ಅಗ್ನಿ ಅವಘಡ: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಒಂಬತ್ತು ಮಂದಿ ಸಜೀವ ದಹನ!

'ಪ್ರೀತಿ ಮಾಡಿದ್ದು ನಮ್ಮನ್ನು, ಆದರೆ ಮದುವೆಯಾಗಿದ್ದು ಮೋದಿಯನ್ನು': ನಗೆಗಡಲಲ್ಲಿ ತೇಲಿದ ಸದನ; Video

ಇರಾನ್ ವಾರ್ನಿಂಗ್ ಬೆನ್ನಲ್ಲೇ 'ಕಚ್ಚಾ ತೈಲ' ಮತ್ತಷ್ಟು ದುಬಾರಿ! ಪ್ರತಿ ಬ್ಯಾರೆಲ್ ಗೆ 103 ಡಾಲರ್ ಏರಿಕೆ!

SCROLL FOR NEXT