ಸಂಗ್ರಹ ಚಿತ್ರ 
ದೇಶ

LPG ಒತ್ತಡ ನಿವಾರಣೆಗೆ ತುರ್ತು ಕ್ರಮ: ಸೀಮೆಎಣ್ಣೆ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ; PDS-ಪೆಟ್ರೋಲ್ ಪಂಪ್‌ ಮೂಲಕ ಮಾರಾಟಕ್ಕೆ ಅವಕಾಶ..!

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಾರ್ಚ್ 29 ರಂದು ಅಡುಗೆ ಅನಿಲ LPG ಮೇಲಿನ ಒತ್ತಡವನ್ನು ಕಡಿಮೆ ಮಾಡಲು 60 ದಿನಗಳವರೆಗೆ ಮಾರಾಟಕ್ಕೆ ಅವಕಾಶ ನೀಡುವ ಅಧಿಸೂಚನೆಯನ್ನು ಪ್ರಕಟಿಸಿದೆ.

ಬೆಂಗಳೂರು: ಎಲ್‌ಪಿಜಿ (LPG) ಸರಬರಾಜಿನಲ್ಲಿ ಉಂಟಾಗಿರುವ ಒತ್ತಡವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ತುರ್ತು ಕ್ರಮವನ್ನು ಕೈಗೊಂಡಿದೆ.

ಸೀಮೆಎಣ್ಣೆಯ ನಿಯಮಗಳನ್ನು ಸಡಿಲಗೊಳಿಸಿರುವ ಕೇಂದ್ರ ಸರ್ಕಾರ, ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮತ್ತು ಪೆಟ್ರೋಲ್ ಪಂಪ್‌ಗಳ ಮೂಲಕ ಗೃಹಬಳಕೆಗೆ ಮಾರಾಟ ಮಾಡಲು ಅವಕಾಶ ನೀಡಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಾರ್ಚ್ 29 ರಂದು ಅಡುಗೆ ಅನಿಲ LPG ಮೇಲಿನ ಒತ್ತಡವನ್ನು ಕಡಿಮೆ ಮಾಡಲು 60 ದಿನಗಳವರೆಗೆ ಮಾರಾಟಕ್ಕೆ ಅವಕಾಶ ನೀಡುವ ಅಧಿಸೂಚನೆಯನ್ನು ಪ್ರಕಟಿಸಿದೆ.

ಈ ಕ್ರಮವು ಹೆಚ್ಚಿನ ಎಲ್‌ಪಿಜಿ ಬೇಡಿಕೆ ಹಾಗೂ ಸರಬರಾಜಿನ ಸಮಸ್ಯೆಯ ನಡುವೆ ಮನೆಮಾಳಿಗಳಿಗೆ ಬದಲಿ ಅಡುಗೆ ಇಂಧನವನ್ನು ಒದಗಿಸಲು ನೆರವಾಗಲಿದೆ.

ಕೇಂದ್ರ ಅಧಿಕಾರಿಗಳ ಪ್ರಕಾರ, ಈ ಹಿಂದೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಉನ್ನತ ಸೀಮೆಎಣ್ಣೆ ತೈಲ ಮುಕ್ತ (PDS SKO) ಎಂದು ಘೋಷಿಸಲ್ಪಟ್ಟ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ PDS ಸೀಮೆಎಣ್ಣೆಯನ್ನು ತಾತ್ಕಾಲಿಕವಾಗಿ ಮತ್ತೆ ಪರಿಚಯಿಸುವುದಾಗಿ ತಿಳಿಸಲಾಗಿದೆ.

ಎಲ್ಪಿಜಿ ಕೊರತೆಗಳನ್ನು ಎದುರಿಸುತ್ತಿರುವ ಮನೆಗಳು ಮೂಲಭೂತ ಗೃಹಬಳಕೆಯ ಅಗತ್ಯಗಳಿಗೆ ಅಗತ್ಯವಾದ ಇಂಧನವನ್ನು ನಿರಂತರ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಪೆಟ್ರೋಲ್ ಪಂಪ್‌ಗಳು ಮನೆಯ ಅಡುಗೆ ಮತ್ತು ಬೆಳಕಿನ ಅಗತ್ಯಗಳಿಗೆ ಬೇಕಾಗುವಷ್ಟು ಸೀಮಿತ ಪ್ರಮಾಣದ ಸೀಮೆಎಣ್ಣೆಯನ್ನು ಸಂಗ್ರಹಿಸಲು ಮತ್ತು ವಿತರಿಸಲು ಈ ಹೊಸ ನಿಯಮಗಳ ಅಡಿಯಲ್ಲಿ ಅನುಮತಿಸಲಾಗುವುದು ಎಂದು ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕದ ನಿರ್ಬಂಧ ಲೆಕ್ಕಿಸದೇ ಭಾರತ ರಷ್ಯಾ ತೈಲ ಆಮದು ಮುಂದುವರಿಸಲಿದೆ: ಸುಜಾತಾ ಶರ್ಮಾ

Bengaluru Rains: ವರುಣಾರ್ಭಟಕ್ಕೆ ನದಿಯಂತಾದ ರಸ್ತೆಗಳು; 5 ದಿನ ಮಳೆ ಸಾಧ್ಯತೆ, ತಾಪಮಾನ ಗಣನೀಯ ಇಳಿಕೆ: ಹವಾಮಾನ ಇಲಾಖೆ

ಇರಾನ್ ಮತ್ತು ಅಮೆರಿಕ ಮಧ್ಯೆ ಮತ್ತೆ ಯುದ್ಧ 2.0 ಶುರು?: ಸೌದಿಗೆ 8,000 ಸೈನಿಕರು, 16 JF-17 ಯುದ್ಧ ವಿಮಾನ ಕಳುಹಿಸಿದ Pak

Ali'money' ಇಲ್ಲ, ಅತಿಯಾದ ಹಸ್ತಕ್ಷೇಪ ಬೇಡ': ನಟಿ ಮೌನಿ ರಾಯ್ ಜೊತೆಗಿನ ವಿಚ್ಛೇದನ ಘೋಷಣೆ ಬೆನ್ನಲ್ಲೇ ಮೌನ ಮುರಿದ Suraj Nambiar

ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ನಟ ದರ್ಶನ್?; ಪರಪ್ಪನ ಅಗ್ರಹಾರದ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ!

SCROLL FOR NEXT