ಬಲ್ಲಿಗುಂಜ್ ಶಾಸಕ ಸೋಭಾಂದೇಬ್ ಚಟ್ಟೋಪಾಧ್ಯಾಯ 
ದೇಶ

ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ ನ ಸೋಭಾಂದೇಬ್ ಚಟ್ಟೋಪಾಧ್ಯಾಯ ವಿರೋಧ ಪಕ್ಷ ನಾಯಕ, ಫಿರ್ಹದ್ ಹಕಿಮ್ ಮುಖ್ಯ ಸಚೇತಕ

ನಿನ್ನೆ ಶನಿವಾರ ಸಂಜೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಪಕ್ಷವು ಧನೇಖಾಲಿ ಶಾಸಕ ಅಸಿಮಾ ಪತ್ರ ಮತ್ತು ಚೌರಂಗಿ ಶಾಸಕಿ ನೈನಾ ಬಂಡೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ಉಪನಾಯಕರಾಗಿ ನೇಮಿಸಿದೆ ಎಂದು ತಿಳಿಸಿದೆ.

ತೃಣಮೂಲ ಕಾಂಗ್ರೆಸ್ ಬಲ್ಲಿಗುಂಜ್ ಶಾಸಕ ಸೋಭಾಂದೇಬ್ ಚಟ್ಟೋಪಾಧ್ಯಾಯ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನೇಮಿಸಿದೆ. ಇದು ಇತ್ತೀಚಿನ ರಾಜ್ಯ ಚುನಾವಣೆಯಲ್ಲಿ ಪಕ್ಷ ಸೋಲು ಕಂಡ ನಂತರ ಕೈಗೊಂಡ ನಿರ್ಧಾರವಾಗಿದೆ.

ನಿನ್ನೆ ಶನಿವಾರ ಸಂಜೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಪಕ್ಷವು ಧನೇಖಾಲಿ ಶಾಸಕ ಅಸಿಮಾ ಪತ್ರ ಮತ್ತು ಚೌರಂಗಿ ಶಾಸಕಿ ನೈನಾ ಬಂಡೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ಉಪನಾಯಕರಾಗಿ ನೇಮಿಸಿದೆ ಎಂದು ತಿಳಿಸಿದೆ.

ಕೊಲ್ಕತ್ತಾ ಪೋರ್ಟ್ ಶಾಸಕ ಫಿರ್ಹದ್ ಹಕಿಮ್ ಅವರನ್ನು ವಿಧಾನಸಭೆಯಲ್ಲಿ ಮುಖ್ಯ ಸಚೇತಕರಾಗಿ (chief whip) ನೇಮಿಸಲಾಗಿದೆ. ಹಕೀಂ ಅವರು ಕೋಲ್ಕತ್ತಾ ಮುನಿಸಿಪಲ್ ಕಾರ್ಪೊರೇಶನ್‌ನ ಮೇಯರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಪಕ್ಷವು ಹೊಸದಾಗಿ ನೇಮಕಗೊಂಡ ನಾಯಕರು ಪಶ್ಚಿಮ ಬಂಗಾಳದ ಜನರ ಹಿತಕ್ಕಾಗಿ ಬದ್ಧತೆಯಿಂದ ಕೆಲಸ ಮಾಡುತ್ತಾರೆ ಎಂದು ತಿಳಿಸಿದೆ. ಚುನಾವಣೆಯಲ್ಲಿ ಬಿಜೆಪಿ ಭಾರೀ ಜಯ ಸಾಧಿಸಿ 294 ಸದಸ್ಯರ ಸದನದಲ್ಲಿ 207 ಸ್ಥಾನಗಳನ್ನು ಗೆದ್ದು ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿದೆ. ಟಿಎಂಸಿ 80 ಸ್ಥಾನಗಳನ್ನು ಗೆದ್ದಿದೆ.

ಸುವೇಂದು ಅಧಿಕಾರಿ ನಿನ್ನೆ ಬೆಳಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ರಾಜ್ಯಭಾರ: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ, MGR-ಜಯಲಲಿತಾ ಬಳಿಕ CM ಗದ್ದುಗೆ ಏರಿದ ಮತ್ತೊಬ್ಬ ಸಿನಿ ದಿಗ್ಗಜ..!

Tamil Nadu swearing-in ceremony: ವಿಜಯ ಜೊತೆ 9 ಸಚಿವರು ಪ್ರಮಾಣ ವಚನ, ಚೆನ್ನೈಯಲ್ಲಿ ಕಾರ್ಯಕ್ರಮಕ್ಕೆ ಭಾರೀ ಭದ್ರತೆ-Video

D Sudhakar: ಚಿಕಿತ್ಸೆ ಫಲಕಾರಿಯಾಗದೆ ಸಚಿವ ಸುಧಾಕರ್ ನಿಧನ

ಯುದ್ಧಕ್ಕಿಂತ ಶಾಂತಿ ಮುಖ್ಯ: ಕುತೂಹಲ ಮೂಡಿಸಿದ ಪುಟಿನ್ ಹೇಳಿಕೆ, ಶೀಘ್ರದಲ್ಲೇ ರಷ್ಯಾ–ಉಕ್ರೇನ್‌ ಯುದ್ಧ ಅಂತ್ಯ..?

ತಮಿಳುನಾಡು ರಾಜಕೀಯ ಹೈಡ್ರಾಮಕ್ಕೆ ತೆರೆ: ಬೆಳಗ್ಗೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ; ಮೇ 13ಕ್ಕೆ ಬಹುಮತ ಸಾಬೀತು

SCROLL FOR NEXT