ಸುಪ್ರೀಂಕೋರ್ಟ್ 
ದೇಶ

ವಿಶ್ವಾಸಮತ ಯಾಚನೆಯಲ್ಲಿ ಪಾಲ್ಗೊಳ್ಳದಂತೆ TVK ಶಾಸಕನಿಗೆ ಹೈಕೋರ್ಟ್ ತಡೆ! 'ಅಮಾನವೀಯ ನಡೆ' ಎಂದ ಸುಪ್ರೀಂಕೋರ್ಟ್

ಸಂವಿಧಾನದ 226 ನೇ ವಿಧಿಯು ಕೆಲವು ರಿಟ್‌ಗಳನ್ನು ಹೊರಡಿಸಲು ಹೈಕೋರ್ಟ್‌ ಅಧಿಕಾರದ ಬಗ್ಗೆ ವ್ಯವಹರಿಸುತ್ತದೆ. ಈ ವಿಷಯದಲ್ಲಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ವಿಚಾರಣೆಯನ್ನು ಸಹ ಪೀಠ ತಡೆಹಿಡಿದಿದೆ.

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತು ವೇಳೆ ಹಾಜರಾಗದಂತೆ ಟಿವಿಕೆ ಶಾಸಕ ಆರ್ ಶ್ರೀನಿವಾಸ ಸೇತುಪತಿ ಅವರನ್ನು ತಡೆದಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ.

ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ನ್ಯಾಯಪೀಠ, ಕನಿಷ್ಠವಾಗಿ ಹೇಳುವುದಾದರೆ ಇದು ಅಮಾನವೀಯ ನಡೆಯಾಗಿದೆ. ಚುನಾವಣಾ ಅರ್ಜಿಯೇ ಪರಿಹಾರ ಎಂದು ಹೈಕೋರ್ಟ್ ಹೇಳುತ್ತದೆ. ಆದರೆ ಆರ್ಟಿಕಲ್ 226 ರ ಅರ್ಜಿಯನ್ನು ಇನ್ನೂ ಪರಿಗಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಸಂವಿಧಾನದ 226 ನೇ ವಿಧಿಯು ಕೆಲವು ರಿಟ್‌ಗಳನ್ನು ಹೊರಡಿಸಲು ಹೈಕೋರ್ಟ್‌ ಅಧಿಕಾರದ ಬಗ್ಗೆ ವ್ಯವಹರಿಸುತ್ತದೆ. ಈ ವಿಷಯದಲ್ಲಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ವಿಚಾರಣೆಯನ್ನು ಸಹ ಪೀಠ ತಡೆಹಿಡಿದಿದೆ.

ಸೇತುಪತಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಮತ್ತು ಮಾಜಿ ಸಚಿವ ಕೆ ಆರ್ ಪೆರಿಯಕರುಪ್ಪನ್ ವಿರುದ್ಧ ಒಂದೇ ಮತದ ಅಂತರದಿಂದ ಶಿವಗಂಗ ಜಿಲ್ಲೆಯ ತಿರುಪತ್ತೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. ಸೇತುಪತಿ ಅವರ ಅರ್ಜಿಗೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸಲು ಪೆರಿಯಕರುಪ್ಪನ್ ಮತ್ತು ಇತರ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ.

ಮುಂದಿನ ಆದೇಶಗಳ ಬಾಕಿ ಇರುವಾಗಲೇ ಯಾವುದೇ ವಿಶ್ವಾಸಮತ ಯಾಚನೆ ಅಥವಾ ಸದನದ ಸಂಖ್ಯಾ ಬಲವನ್ನು ಪರೀಕ್ಷಿಸುವ ಯಾವುದೇ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ತಮ್ಮನ್ನು ನಿರ್ಬಂಧಿಸಿದ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಸೇತುಪತಿ ಪ್ರಶ್ನಿಸಿದ್ದಾರೆ.

ಈ ಮಧ್ಯೆ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ಬುಧವಾರ ವಿಶ್ವಾಸಮತಯಾಚನೆಯಲ್ಲಿ ಗೆದ್ದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Tamil Nadu Assembly floor test: ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್, ನಿರೀಕ್ಷೆಗೂ ಮೀರಿ 144 ಶಾಸಕರ ಬೆಂಬಲ, AIADMK ಛಿದ್ರ!

Tamil Nadu Assembly: ವಿಜಯ್ ವಿಶ್ವಾಸಮತ ಯಾಚನೆ, ಕಾಂಗ್ರೆಸ್, ಸಿಪಿಎಂ, ವಿಸಿಕೆ ಬೆಂಬಲ ಘೋಷಣೆ!

ಮಿತವ್ಯಯಕ್ಕೆ ಪ್ರಧಾನಿ ಮೋದಿ ಹೆಜ್ಜೆ: ಎಸ್‌ಪಿಜಿ ಭದ್ರತಾ ಪಡೆ ವಾಹನಗಳ ಸಂಖ್ಯೆ ಶೇ.50ರಷ್ಟು ಕಡಿತ,ಬಿಜೆಪಿ ಸಿಎಂಗಳಿಗೂ ಸೂಚನೆ, EV ಗೆ ಆದ್ಯತೆ

ಬೆಂಗಳೂರು: ಪ್ರಧಾನಿ ಮೋದಿ ಸಾಗುತ್ತಿದ್ದ ಮಾರ್ಗದಲ್ಲಿ ಟೈಮರ್ ಪತ್ತೆ! ದೊಡ್ಡ ಸಂಚಿನ ಶಂಕೆ

Gold Tariffs- ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಕೇಂದ್ರ ಕ್ರಮ: ಚಿನ್ನ-ಬೆಳ್ಳಿ ಆಮದು ಸುಂಕ ಶೇ.15ಕ್ಕೆ ಏರಿಕೆ

SCROLL FOR NEXT