ಪ್ರಾಣಪಣಕ್ಕಿಟ್ಟು ಮಕ್ಕಳ ಜೀವ ರಕ್ಷಿಸಿದ ಮಹಿಳೆಯರು 
ದೇಶ

ಶಾಕಿಂಗ್: ರೈಲು ಢಿಕ್ಕಿಯಿಂದ ಮಕ್ಕಳ ರಕ್ಷಿಸಲು ದೇಹವನ್ನೇ ಗುರಾಣಿಯಾಗಿಸಿದ ಮಹಿಳೆ, Video

ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು, ವೇಗವಾಗಿ ಬರುತ್ತಿದ್ದ ರೈಲಿನಿಂದ ಮಕ್ಕಳನ್ನು ರಕ್ಷಿಸಲು ಮಹಿಳೆ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.

ಪಾಟ್ನಾ: ಆಘಾತಕಾರಿ ಘಟನೆಯಲ್ಲಿ ಬಿಹಾರದ ಶಾಹಪುರ ಪಟೋರಿ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ಏಕಾಏಕಿ ರೈಲು ಬಂದಾಗ ಇಬ್ಬರು ಮಕ್ಕಳನ್ನು ರಕ್ಷಿಸಲು ತಾಯಿ ತನ್ನ ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು, ವೇಗವಾಗಿ ಬರುತ್ತಿದ್ದ ರೈಲಿನಿಂದ ಮಕ್ಕಳನ್ನು ರಕ್ಷಿಸಲು ಮಹಿಳೆ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.

ರೈಲು ನಿಲ್ದಾಣದ ಸಮೀಪ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ರೈಲು ಹಳಿ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ರೈಲು ಬಂದಿದೆ. ಈ ವೇಳೆ ಮಹಿಳೆಯರು ತಪ್ಪಿಸಿಕೊಳ್ಳಲು ಸಮಯವೇ ಇಲ್ಲದ ಸ್ಥಿತಿಯಲ್ಲಿ ಹಳಿ ಪಕ್ಕದಲ್ಲೇ ಮಕ್ಕಳ ಜೊತೆ ಅವಿತು ಕುಳಿತಿದ್ದಾರೆ.

ಈ ವೇಳೆ ರೈಲು ಕೆಲವೇ ಇಂಚುಗಳಷ್ಟು ಅಂತರದಲ್ಲಿ ರೈಲು ಹಾದು ಹೋಗಿದೆ. ರೈಲು ಹಾದು ಹೋಗುವಾಗ ರೈಲು ಮಹಿಳೆಗೆ ಟಚ್ ಆಗಿದೆಯಾದರೂ ಅಂಜದ ಮಹಿಳೆ ಮಾತ್ರ ಮಕ್ಕಳನ್ನು ಬಿಡದೇ ರಕ್ಷಿಸಿದ್ದಾರೆ. ಇನ್ನೊಬ್ಬ ಮಹಿಳೆ ಆಕೆಯನ್ನು ಹಿಡಿದುಕೊಂಡು ರೈಲು ಎಳೆದುಕೊಂಡು ಹೋಗದಂತೆ ಸಹಾಯ ಮಾಡಿದರು.

ರೈಲು ಹಾದುಹೋದ ಬಳಿಕ ಪ್ಲಾಟ್‌ಫಾರ್ಮ್‌ನಲ್ಲಿದ್ದ ಜನರು ತಕ್ಷಣ ಮಹಿಳೆಯರು ಮತ್ತು ಮಕ್ಕಳನ್ನು ಹಳಿ ಮೇಲಿಂದ ಮೇಲಕ್ಕೆ ಎಳೆದುಕೊಂಡು ರಕ್ಷಿಸಿದರು. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ ಎಲ್ಲರೂ ಸುರಕ್ಷಿತವಾಗಿ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ.

ವಿಡಿಯೋ ವೈರಲ್

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಕೆಲವರು ಮಹಿಳೆಯರ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಪಾದಾಚಾರಿ ಸೇತುವೆ ಇದ್ದರೂ ಹಳಿ ಮೇಲಿಂದ ಬರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರು ಫುಟ್ ಓವರ್ ಬ್ರಿಡ್ಜ್ ಮತ್ತು ನಿಗದಿತ ದಾಟುವ ಮಾರ್ಗಗಳನ್ನು ಮಾತ್ರ ಬಳಸಬೇಕು ಎಂದು ರೈಲ್ವೆ ಅಧಿಕಾರಿಗಳು ಪದೇಪದೇ ಎಚ್ಚರಿಕೆ ನೀಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಸಂಘರ್ಷ: ಚಿಂತೆ ಬೇಡ.. Hormuz ನಲ್ಲಿ ಭಾರತಕ್ಕೆ ತೊಂದರೆ ಇಲ್ಲ: ಜೈಶಂಕರ್ ಗೆ Araghchi ಭರವಸೆ!

NEET-UG 2026 ಪ್ರಶ್ನೆ ಪತ್ರಿಕೆ ಲೀಕ್ ಕಿಂಗ್ ಪಿನ್, ಪುಣೆಯ ಕೆಮಿಸ್ಟ್ರಿ 'ಲೆಕ್ಚರರ್' ಬಂಧಿಸಿದ ಸಿಬಿಐ!

IPL 2026: CSK ಮತ್ತೊಂದು ಸೋಲು, ಪ್ಲೇಆಫ್ ಹಾದಿ ಕಠಿಣ; LSG ಗೆ 7 ವಿಕೆಟ್ ಭರ್ಜರಿ ಜಯ

ಕರ್ನಾಟಕದಲ್ಲಿ ಜೂನ್ 20 ರಿಂದ SIR ಪ್ರಾರಂಭ: ಅಕ್ಟೋಬರ್ 7ಕ್ಕೆ ಅಂತಿಮ ಪಟ್ಟಿ ಪ್ರಕಟ! ಹೇಗೆ ಮಾಡಲಾಗುತ್ತದೆ?

ನಿಮ್ಮ ಮುಖ ಮುಚ್ಕೊಳ್ಳೇಕೆ ಬುರ್ಖಾ ಬೇಕು..; ಜನಿವಾರ, ಶಿವದಾರ ಧರಿಸಲು ಅವಕಾಶ ಕೊಡೋಕೆ ನೀವ್ಯಾವ ದೊಣ್ಣೆನಾಯಕ?: Pratap Simha; Video

SCROLL FOR NEXT