ನವದೆಹಲಿ: ನೇಪಾಳದ ಕಠ್ಮಂಡುವಿನಿಂದ ದುಃಖದ ಸುದ್ದಿ ಹೊರಬಂದಿದೆ. ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಿ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದ ಇಬ್ಬರು ಭಾರತೀಯ ಪರ್ವತಾರೋಹಿಗಳು ಪರ್ವತವನ್ನು ಇಳಿಯುವಾಗ ಸಾವನ್ನಪ್ಪಿದ್ದಾರೆ. ಭಾರತೀಯ ಪರ್ವತಾರೋಹಿಗಳನ್ನು ಅರುಣ್ ಕುಮಾರ್ ತಿವಾರಿ ಮತ್ತು ಸಂದೀಪ್ ಅರೆ ಎಂದು ಗುರುತಿಸಲಾಗಿದೆ. ಸಾವಿಗೆ ಕಾರಣ ಆಯಾಸ ಎಂದು ಹೇಳಲಾಗಿದೆ.
ನೇಪಾಳದ ಯಾತ್ರೆ ನಿರ್ವಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ ಮಾತನಾಡಿ, ಭಾರತೀಯ ಪರ್ವತಾರೋಹಿಗಳಾದ ಅರುಣ್ ಕುಮಾರ್ ತಿವಾರಿ ಮತ್ತು ಸಂದೀಪ್ ಅರೆ ಅವರು ಶಿಖರವನ್ನು ಇಳಿಯುವಾಗ ತುಂಬಾ ದಣಿದಿದ್ದರು. ಮಾರ್ಗದರ್ಶಕರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಬುಧವಾರ ಸಂದೀಪ್ ಅರೆ ಶಿಖರವನ್ನೇರಿದ್ದರೇ ಗುರುವಾರ ಸಂಜೆ 5:30ರ ಸುಮಾರಿಗೆ ತಿವಾರಿ ಶಿಖರವನ್ನು ಏರಿದ್ದರು. ಮಾರ್ಗದರ್ಶಕರು ತುಂಬಾ ಪ್ರಯತ್ನಿಸಿದರು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ರಿಷಿ ಭಂಡಾರಿ ಹೇಳಿದರು. ಸಂದೀಪ್ ಅರೆ ಗುರುವಾರ ನಿಧನರಾಗಿದ್ದರೇ ಅರುಣ್ ಕುಮಾರ್ ತಿವಾರಿ ಯಾವಾಗ ನಿಧನರಾದರು ಎಂಬುದು ಸ್ಪಷ್ಟವಾಗಿಲ್ಲ.
ಬುಧವಾರ, ಸಂದೀಪ್ ಮತ್ತು ಅರುಣ್ ಸೇರಿದಂತೆ ಮೂವರು ಭಾರತೀಯರು 8,848.86 ಮೀಟರ್ ಎತ್ತರದ ಶಿಖರವನ್ನು ಏರಿದ 274 ಪರ್ವತಾರೋಹಿಗಳಲ್ಲಿ ಒಬ್ಬರಾಗಿದ್ದಾರೆ. ಇನ್ನು ಒಂದೇ ದಿನದಲ್ಲಿ ಅತಿ ಹೆಚ್ಚು ಶಿಖರಗಳನ್ನು ಏರಿದ ಹೊಸ ದಾಖಲೆಯನ್ನು ನಿರ್ಮಿಸಿತು. ಇತರ ಇಬ್ಬರು ಪರ್ವತಾರೋಹಿಗಳಾದ ತುಳಸಿ ರೆಡ್ಡಿ ಪಲ್ಪುನುರಿ ಮತ್ತು ಅಜಯ್ ಪಾಲ್ ಸಿಂಗ್ ಧಲಿವಾಲ್. ಮರುದಿನ, ಗುರುವಾರ, ಭಾರತದ ಲಕ್ಷ್ಮಿಕಾಂತ ಮಂಡಲ್ ಕೂಡ ವಿಶ್ವದ ಅತಿ ಎತ್ತರದ ಶಿಖರವನ್ನು ತಲುಪಿದರು.