ವ್ಲಾದಿಮಿರ್ ಪುಟಿನ್- ಮೋದಿ online desk
ದೇಶ

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

ಈ ಮಾತುಕತೆ 2030ರ ವೇಳೆಗೆ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್‌ಗೆ ಹೆಚ್ಚಿಸುವುದು ಹಾಗೂ ರಕ್ಷಣೆ, ಇಂಧನ ಮತ್ತು ಪ್ರಮುಖ ಖನಿಜಗಳ ವಲಯದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನವದೆಹಲಿ: ನವದೆಯಲಿಯ ಭಾರತ್ ಮಂಟಪದಲ್ಲಿ ಬ್ರಿಕ್ಸ್ 2026 ಶೃಂಗಸಭೆಗೆ ಚಾಲನೆ ದೊರೆತಿದ್ದು, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ವಿಸ್ತೃತ ಮಾತುಕತೆ ನಡೆಸಿದರು.

ಈ ಮಾತುಕತೆ 2030ರ ವೇಳೆಗೆ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್‌ಗೆ ಹೆಚ್ಚಿಸುವುದು ಹಾಗೂ ರಕ್ಷಣೆ, ಇಂಧನ ಮತ್ತು ಪ್ರಮುಖ ಖನಿಜಗಳ ವಲಯದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಮೂರು ದಿನಗಳ ಭೇಟಿಗಾಗಿ ಪುಟಿನ್ ಶುಕ್ರವಾರ ಬೆಳಿಗ್ಗೆ ನವದೆಹಲಿಗೆ ಆಗಮಿಸಿದರು. ಈಗಾಗಲೇ ಬಲವಾಗಿರುವ ರಕ್ಷಣಾ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಉಭಯ ನಾಯಕರು ಚರ್ಚಿಸುವ ನಿರೀಕ್ಷೆಯಿದೆ.

ಸಭೆಗೂ ಮುನ್ನ, ಮೋದಿ ಅವರು ಪುಟಿನ್ ಅವರಿಗೆ ಪ್ರಾಚೀನ ತಮಿಳು ಕೃತಿಯಾದ 'ತಿರುಕ್ಕುರಲ್'ನ ರಷ್ಯನ್ ಭಾಷಾಂತರವನ್ನು ಉಡುಗೊರೆಯಾಗಿ ನೀಡಿದರು.

ಉಭಯ ದೇಶಗಳು ಬ್ರಹ್ಮೋಸ್ ಕ್ಷಿಪಣಿಗಳ ಉನ್ನತೀಕರಣದ ಕುರಿತು ಪರಿಶೀಲಿಸುತ್ತಿವೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಂಗಳವಾರ ತಿಳಿಸಿದರು. ಅಲ್ಲದೆ, ಬಾಕಿ ಇರುವ ಎಸ್-400 (S-400) ವ್ಯವಸ್ಥೆಯ ಪೂರೈಕೆಯನ್ನು ಪೂರ್ಣಗೊಳಿಸಲು ಮತ್ತು ಪ್ರಸ್ತಾವಿತ Su-57 ಯುದ್ಧ ವಿಮಾನಗಳ ಪೂರೈಕೆಯ ಕುರಿತು ಚರ್ಚಿಸಲು ಮಾಸ್ಕೋ ಬದ್ಧವಾಗಿದೆ ಎಂದು ಅವರು ಹೇಳಿದರು.

ಉಭಯ ದೇಶಗಳ ನಡುವಿನ ಇಂಧನ ಸಂಬಂಧಗಳು ಬಲವಾಗಿವೆ ಎಂದು ರಷ್ಯಾದ ಅಧಿಕಾರಿ ತಿಳಿಸಿದರು. ಭಾರತವು ಹೊಸ ನಾಗರಿಕ ಪರಮಾಣು ರಿಯಾಕ್ಟರ್‌ಗಳನ್ನು ಸ್ಥಾಪಿಸುವ ಯೋಜನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸುವ ಕುರಿತು ಎರಡೂ ಕಡೆಯವರು ಪರಿಶೀಲಿಸುತ್ತಿದ್ದಾರೆ ಎಂದರು.

ಕಳೆದ ವಾರ ಬಿಷ್ಕೆಕ್‌ನಲ್ಲಿ ನಡೆದ ಎಸ್‌ಸಿಒ (SCO) ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಪುಟಿನ್ ಭೇಟಿಯಾಗಿದ್ದರು. ಆ ವೇಳೆ ಪ್ರಧಾನಿ ಅವರು ಸಂಘರ್ಷಕ್ಕೆ ತಕ್ಷಣದ ಅಂತ್ಯವನ್ನು ಕೋರಿದ್ದರು ಮತ್ತು "ಅಂತ್ಯವಿಲ್ಲದ ಯುದ್ಧದಿಂದ ಯುದ್ಧದ ಅಂತ್ಯದತ್ತ" ಸಾಗುವಂತೆ ರಷ್ಯಾದ ನಾಯಕರಿಗೆ ಕರೆ ನೀಡಿದ್ದರು.

ಉಕ್ರೇನ್ ಸಂಘರ್ಷ ಮತ್ತು ಶಾಂತಿಯತ್ತ ಸಾಗುವ ಮಾರ್ಗಸೂಚಿಯು ಅವರ ಮಾತುಕತೆಗಳಲ್ಲಿ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ. ಸಂಘರ್ಷವನ್ನು ಬಗೆಹರಿಸುವ ಮಾರ್ಗವನ್ನು ಕಂಡುಕೊಳ್ಳಲು ಇತ್ತೀಚಿನ ದಿನಗಳಲ್ಲಿ ಟ್ರಂಪ್ ಆಡಳಿತ ಸೇರಿದಂತೆ ಹಲವು ಕಡೆಯಿಂದ ಹೊಸ ಪ್ರಯತ್ನಗಳು ನಡೆದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೇವಸ್ಥಾನದಲ್ಲಿ ಮೀನು ತಿಂದ ಸುವೇಂದು ಅಧಿಕಾರಿ: ಬಾಗೇಶ್ವರ್ ಬಾಬಾಗೆ ತಿರುಗೇಟು; CM ಮಾಂಸಾಹಾರ ಸೇವನೆ ಬಗ್ಗೆ ಬಿಜೆಪಿ ಹೇಳಿದ್ದೇನು? Video

ರಾಜತಾಂತ್ರಿಕತೆ: ಮೂರು ದಿನಗಳಲ್ಲಿ 15 ದ್ವಿಪಕ್ಷೀಯ ಸಭೆಗಳು; ಕ್ಸಿ ಜಿನ್ ಪಿಂಗ್, ವ್ಲಾಡಿಮಿರ್ ಪುಟಿನ್, ಪೆಜೆಶ್ಕಿಯಾನ್ ಮಾತುಕತೆ

KPSC ಹಗರಣ: ಗರ್ಲ್‌ಫ್ರೆಂಡ್‌ಗೆ ಗೋಲ್ಡ್, ಅಣ್ಣನಿಗೆ ವಿಲ್ಲಾ; ಅಭ್ಯರ್ಥಿಗಳ ಲಂಚದ ಹಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಾರುಬಾರು!

ಬ್ರಿಕ್ಸ್ ಶೃಂಗಸಭೆಗಳಿಂದ ಭಾರತಕ್ಕೆ ಲಾಭವೇನು ಇಲ್ಲ: ಚಿದಂಬರಂ ಹೇಳಿಕೆಗೆ ತರೂರ್ ತಿರುಗೇಟು! ಕಾಂಗ್ರೆಸ್ ವಿರುದ್ಧ ಬಿಜೆಪಿ ವ್ಯಂಗ್ಯ

ಅರಣ್ಯದಂಚಿನವರು ಅಕ್ರಮ ಬಂದೂಕುಗಳನ್ನು ಸರ್ಕಾರಕ್ಕೆ ಒಪ್ಪಿಸಲು ನ.1 ಡೆಡ್ ಲೈನ್: ಇಲ್ಲದಿದ್ರೆ ಕ್ರಮ- ಸಿಎಂ ಡಿಕೆ ಶಿವಕುಮಾರ್