ನಿನ್ನೆ ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಚೈತ್ರ ಕೊಟ್ಟೂರು ಮತ್ತು ಉದ್ಯಮಿ ನಾಗಾರ್ಜುನ ಮದುವೆ ನಡೆದಿತ್ತು.ಆದರೆ ಸಂಜೆ ವೇಳೆಗೆ ಪ್ರಕರಣದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ಜೋಡಿ ಕೋಲಾರ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದಕ್ಕೆ ಕಾರಣ ನಾಗಾರ್ಜುನ್ ಗೆ ಚೈತ್ರ ಜೊತೆ ಮದುವೆ ಇಷ್ಟವಿರಲಿಲ್ಲವಂತೆ. ಸಂಘಟನೆಯೊಂದು ಬಲವಂತವಾಗಿ ನಾಗಾರ್ಜುನ್ ರನ್ನು ಕೂಡಿ ಹಾಕಿ ದೇವಾಲಯದಲ್ಲಿ ಮದುವೆ ಮಾಡಿಸಿದೆ.ಈ ಮದುವೆ ನಾಗಾರ್ಜುನ್ ಮತ್ತು ಪೋಷಕರಿಗೆ ಚೈತ್ರ ಜೊತೆ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ.ಬೆಳಗ್ಗೆ ಮದುವೆಯಾಗಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಕೋಲಾರದ ಕುರುಬರರಪೇಟೆಯ ಚೈತ್ರ ಮನೆಗೆ ಬಂದ ನಾಗಾರ್ಜುನ್ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ.ನಂತರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಈ ವೇಳೆ ಠಾಣೆಗೆ ನಾಗಾರ್ಜುನ್ ಮತ್ತು ಚೈತ್ರ ಆಗಮಿಸಿದರು. ನಾಗಾರ್ಜುನ್ ಈ ಮದುವೆ ನನಗೆ ಇಷ್ಟವಿಲ್ಲ ಎಂದು ಹೇಳಿದ್ದು ಚೈತ್ರ ಮಾತ್ರ ನಾನು ನಾಗಾರ್ಜುನ್ ಜೊತೆ ಬದುಕುವುದಾಗಿ ಬಿಗಿಪಟ್ಟು ಹಿಡಿದಿದ್ದಾರೆ.ಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರುಚೈತ್ರ ಕೊಟ್ಟೂರು