ಇಂದೋರ್ನ ಪಟೇಲ್ ನಗರ ಪ್ರದೇಶದ ಬೆಳೇಶ್ವರ ಜುಲೇಲಾಲ್ ಮಹಾದೇವ ದೇವಸ್ಥಾನದಲ್ಲಿ ರಾಮ ನವಮಿ ಆಚರಣೆ ಸಂದರ್ಭದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ, ಪುರಾತನವಾದ ಮೆಟ್ಟಿಲುಬಾವಿಯ ಮೇಲ್ಛಾವಣೆ ಕುಸಿದು 36 ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಶ್ರೀರಾಮನವಮಿ ಆಚರಿಸಲು ಹಾಗೂ ಅಗ್ನಿ ಆಚರಣೆಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಇಂದು ಮುಂಜಾನೆ ಇನ್ನೂ 21 ಶವಗಳನ್ನು ಹೊರತೆಗೆದ ನಂತರ ದುರಂತದಿಂದ ಒಟ್ಟು ಸಾವಿನ ಸಂಖ್ಯೆ ಗುರುವಾರ 36 ಕ್ಕೆ ಏರಿದೆ. ಮತ್ತೊಂದು ಮೃತ ದೇಹವನ್ನು 53 ವರ್ಷದ ಸುನಿಲ್ ಸೋಲಂಕಿ ಎಂದು ಗುರುತಿಸಲಾಗಿದ್ದು, ಅಧಿಕೃತ ಸಾವಿನ ಸಂಖ್ಯೆ ಈಗ 36 ಆಗಿದೆ.ಬಾವಿಯ ಮೇಲ್ಛಾವಣಿ ಕುಸಿದಾಗ ಹತ್ತಾರು ಜನರು ಕೆಸರಿನ ನೀರಿನಲ್ಲಿ ಬಿದಿದ್ದಾರೆ.ಸೇನಾ ಸಿಬ್ಬಂದಿ ಸೇರಿದಂತೆ ಸುಮಾರು 140 ರಕ್ಷಕರು ನೀರನ್ನು ಪಂಪ್ ಮಾಡಿದ ನಂತರ ಹಗ್ಗ ಮತ್ತು ಏಣಿಗಳನ್ನು ಬಳಸಿ ಬಾವಿಯಿಂದ ಮೃತದೇಹಗಳನ್ನು ಹೊರಗೆ ತಂದಿದ್ದಾರೆ. ಬಾವಿಯಲ್ಲಿನ ಕಿರಿದಾದ ದಾದ ಮತ್ತು ಅವಶೇಷಗಳಿಂದ ರಕ್ಷಣಾ ಕಾರ್ಯ ಕಾರ್ಯ ಕಷ್ಟಕರವಾಗಿತ್ತು.ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಖಾಸಗಿ ಆಸ್ಪತ್ರೆಯಲ್ಲಿ ಅವಳಿ ಸಹೋದರಿಯರು ಸೇರಿದಂತೆ ಗಾಯಾಳುಗಳನ್ನು ಭೇಟಿ ಮಾಡಿದರು. ನಂತರ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಮತ್ತು ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ ತಂಡಗಳ ಸಹಯೋಗದೊಂದಿಗೆ ಭಾರತೀಯ ಸೇನೆಯು ನಡೆಸಿದ ರಕ್ಷಣಾ ಕಾರ್ಯಾಚರಣೆಗಅಪಘಾತದ ತನಿಖೆಗಾಗಿ ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆಯನ್ನು ಸ್ಥಾಪಿಸಲಾಗಿದೆ. ಬೆಳೇಶ್ವರ ಮಹಾದೇವ ಜೂಲೇಲಾಲ್ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಖಾಸಗಿ ಟ್ರಸ್ಟ್ನ ಅಧ್ಯಕ್ಷ ಮತ್ತು ಕಾರ್ಯದರ್ಶಿ ವಿರುದ್ಧ ಜೂನಿ ಇಂದೋರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ಅಡಿ ಕ್ರಿಮಿನಲ್ ಮೊಕದ್ದಮೆಯನ್ನುಇಂದೋರ್ನಲ್ಲಿ ದುರ್ಮರಣ ಹೊಂದಿದ್ದವರ ಮೃತದೇಹಗಳನ್ನು ಸಂಬಂಧಿಕರು ಅಂತ್ಯಸಂಸ್ಕಾರ ಮಾಡಿದರು.Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos