ವಿಧಾನ ಸಭೆ 
ರಾಜಕೀಯ

ಕುಡಿಯುವ ನೀರಿಗೆ ಶಾಶ್ವತ ನೀತಿ ತನ್ನಿ ; ಸರ್ಕಾರಕ್ಕೆ ತಾಕೀತು

ನೀರು ಮಾರಾಟದ ಸರಕಲ್ಲ. ಮುಂದಿನ 25 ವರ್ಷಕ್ಕೆ ಅನ್ವಯವಾಗುವಂತೆ ಸಮಗ್ರ ಕುಡಿಯುವ ನೀರು ನೀತಿಯನ್ನು ರಾಜ್ಯ ಸರ್ಕಾರ ತುರ್ತಾಗಿ ಜಾರಿಗೆ ತರುವ...

ವಿಧಾನಸಭೆ: ನೀರು ಮಾರಾಟದ ಸರಕಲ್ಲ. ಮುಂದಿನ 25 ವರ್ಷಕ್ಕೆ ಅನ್ವಯವಾಗುವಂತೆ ಸಮಗ್ರ ಕುಡಿಯುವ ನೀರು ನೀತಿಯನ್ನು ರಾಜ್ಯ ಸರ್ಕಾರ ತುರ್ತಾಗಿ ಜಾರಿಗೆ ತರುವ
ಅಗತ್ಯವಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ವಿಧಾನ ಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು  ಮಾನವನ ಬದುಕಿನ ಅನಿವಾರ್ಯ ಮತ್ತು ಸಂಸ್ಕೃತಿ. ಆದರೆ ಬಹುರಾಷ್ಟ್ರೀಯ ಸಂಸ್ಥೆಗಳ ಪಾಲಿಗೆ ಅದೊಂದು ವ್ಯಾಪಾರ. ಅವರ ಆದ್ಯತೆಗೆ ಹೆಚ್ಚು ಲಕ್ಷ್ಯ ನೀಡುತ್ತಿರು ವುದರಿಂದ ಈಗ ನೀರು ಮಾರಾಟದ ವಸ್ತುವೇ? ಎಂಬ ಪ್ರಶ್ನೆ ಉದ್ಭವವಾಗಿದೆ.ವಿಶ್ವ ಬ್ಯಾಂಕ್ ಕೂಡಾ ನೀರಿಗೆ ಬಳಕೆದಾರರ ಶುಲ್ಕ ವಿ„ಸಿ ಎಂಬ ಪ್ರಸ್ತಾಪ ಇಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪ್ರತ್ಯೇಕ ಕುಡಿಯುವ ನೀರಿನ ನೀತಿ ಅಗತ್ಯ. ನೀರು ಪ್ರತಿಯೊ ಬ್ಬನ ಹಕ್ಕು ಎಂದು ಹೇಳಿದರು.
ನಮ್ಮ ಹಿಂದಿನವರು ಮಾಡಿಟ್ಟ ಕೆರೆ- ಕೊಳ್ಳಗಳಿಂದಾಗಿ ನಾವು ಈಗ ನೀರು ಕುಡಿ ಯುತ್ತಿದ್ದೇವೆ. ಆದರೆ ನಮಗೆ ಮುಂದಿನವರಿಗೆ ಉಳಿಸಬೇಕೆಂಬ ಪ್ರಜ್ಞೆ  ಇಲ್ಲ. ಭವಿಷ್ಯ
ದಿಂದಲೂ ಕದಿಯುತ್ತಿದ್ದೇವೆ. ಇದಕ್ಕೆ ಕಾರಣ ಆಳುವುದು ಬೇರೆ, ಆಡಳಿತ ನಡೆಸುವುದು ಬೇರೆ ಎಂಬ ತತ್ವ ಮರೆತಿರುವುದು. ಆಡಳಿತ ನಡೆಸಬೇಕಾದ ಅಧಿಕಾರಿಗಳ ಕೈಗೆ ಆಳುವ ಹಕ್ಕನ್ನು ಕೊಟ್ಟು ಅವರು ರೂಪಿಸಿದ ಯೋಜನೆಗೆ ಅಸ್ತು ಎನ್ನುತ್ತಿದ್ದೇವೆ. ದಿನದ ಹೆಚ್ಚಿನ ಸಮಯ ಜನರ ಮಧ್ಯೆ ಇರಬೇಕಾದ ಶಾಸಕರು ವರ್ಗಾವಣೆಗಾಗಿ ಅಲೆಯುತ್ತಿ ದ್ದಾರೆ ಎಂದು ವ್ಯಂಗ್ಯವಾಡಿದರು.ಆದರೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ರೂಪಿಸುವ ವಿಚಾರದಲ್ಲಿ ಸರ್ಕಾರ ಇದುವರೆಗೆ ಚಿಂತನೆ ನಡೆಸಿಲ್ಲ. ನಮ್ಮ ಹಳೆಯ ನೀತಿಗಳಲ್ಲಿ ಈಗನ ಸಮಸ್ಯೆಗೆ ಪರಿ ಹಾರವಿಲ್ಲ. ಹೀಗಾಗಿ ಮುಂದಿನ 25 ವರ್ಷ ವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತ್ಯೇಕ ನೀತಿ ರೂಪಿಸುವ ಅಗತ್ಯವಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT