ವಿಧಾನ ಸಭೆ 
ರಾಜಕೀಯ

ಕುಡಿಯುವ ನೀರಿಗೆ ಶಾಶ್ವತ ನೀತಿ ತನ್ನಿ ; ಸರ್ಕಾರಕ್ಕೆ ತಾಕೀತು

ನೀರು ಮಾರಾಟದ ಸರಕಲ್ಲ. ಮುಂದಿನ 25 ವರ್ಷಕ್ಕೆ ಅನ್ವಯವಾಗುವಂತೆ ಸಮಗ್ರ ಕುಡಿಯುವ ನೀರು ನೀತಿಯನ್ನು ರಾಜ್ಯ ಸರ್ಕಾರ ತುರ್ತಾಗಿ ಜಾರಿಗೆ ತರುವ...

ವಿಧಾನಸಭೆ: ನೀರು ಮಾರಾಟದ ಸರಕಲ್ಲ. ಮುಂದಿನ 25 ವರ್ಷಕ್ಕೆ ಅನ್ವಯವಾಗುವಂತೆ ಸಮಗ್ರ ಕುಡಿಯುವ ನೀರು ನೀತಿಯನ್ನು ರಾಜ್ಯ ಸರ್ಕಾರ ತುರ್ತಾಗಿ ಜಾರಿಗೆ ತರುವ
ಅಗತ್ಯವಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ವಿಧಾನ ಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು  ಮಾನವನ ಬದುಕಿನ ಅನಿವಾರ್ಯ ಮತ್ತು ಸಂಸ್ಕೃತಿ. ಆದರೆ ಬಹುರಾಷ್ಟ್ರೀಯ ಸಂಸ್ಥೆಗಳ ಪಾಲಿಗೆ ಅದೊಂದು ವ್ಯಾಪಾರ. ಅವರ ಆದ್ಯತೆಗೆ ಹೆಚ್ಚು ಲಕ್ಷ್ಯ ನೀಡುತ್ತಿರು ವುದರಿಂದ ಈಗ ನೀರು ಮಾರಾಟದ ವಸ್ತುವೇ? ಎಂಬ ಪ್ರಶ್ನೆ ಉದ್ಭವವಾಗಿದೆ.ವಿಶ್ವ ಬ್ಯಾಂಕ್ ಕೂಡಾ ನೀರಿಗೆ ಬಳಕೆದಾರರ ಶುಲ್ಕ ವಿ„ಸಿ ಎಂಬ ಪ್ರಸ್ತಾಪ ಇಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪ್ರತ್ಯೇಕ ಕುಡಿಯುವ ನೀರಿನ ನೀತಿ ಅಗತ್ಯ. ನೀರು ಪ್ರತಿಯೊ ಬ್ಬನ ಹಕ್ಕು ಎಂದು ಹೇಳಿದರು.
ನಮ್ಮ ಹಿಂದಿನವರು ಮಾಡಿಟ್ಟ ಕೆರೆ- ಕೊಳ್ಳಗಳಿಂದಾಗಿ ನಾವು ಈಗ ನೀರು ಕುಡಿ ಯುತ್ತಿದ್ದೇವೆ. ಆದರೆ ನಮಗೆ ಮುಂದಿನವರಿಗೆ ಉಳಿಸಬೇಕೆಂಬ ಪ್ರಜ್ಞೆ  ಇಲ್ಲ. ಭವಿಷ್ಯ
ದಿಂದಲೂ ಕದಿಯುತ್ತಿದ್ದೇವೆ. ಇದಕ್ಕೆ ಕಾರಣ ಆಳುವುದು ಬೇರೆ, ಆಡಳಿತ ನಡೆಸುವುದು ಬೇರೆ ಎಂಬ ತತ್ವ ಮರೆತಿರುವುದು. ಆಡಳಿತ ನಡೆಸಬೇಕಾದ ಅಧಿಕಾರಿಗಳ ಕೈಗೆ ಆಳುವ ಹಕ್ಕನ್ನು ಕೊಟ್ಟು ಅವರು ರೂಪಿಸಿದ ಯೋಜನೆಗೆ ಅಸ್ತು ಎನ್ನುತ್ತಿದ್ದೇವೆ. ದಿನದ ಹೆಚ್ಚಿನ ಸಮಯ ಜನರ ಮಧ್ಯೆ ಇರಬೇಕಾದ ಶಾಸಕರು ವರ್ಗಾವಣೆಗಾಗಿ ಅಲೆಯುತ್ತಿ ದ್ದಾರೆ ಎಂದು ವ್ಯಂಗ್ಯವಾಡಿದರು.ಆದರೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ರೂಪಿಸುವ ವಿಚಾರದಲ್ಲಿ ಸರ್ಕಾರ ಇದುವರೆಗೆ ಚಿಂತನೆ ನಡೆಸಿಲ್ಲ. ನಮ್ಮ ಹಳೆಯ ನೀತಿಗಳಲ್ಲಿ ಈಗನ ಸಮಸ್ಯೆಗೆ ಪರಿ ಹಾರವಿಲ್ಲ. ಹೀಗಾಗಿ ಮುಂದಿನ 25 ವರ್ಷ ವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತ್ಯೇಕ ನೀತಿ ರೂಪಿಸುವ ಅಗತ್ಯವಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT