ಹನುಮಂತನಿಗೂ ತಟ್ಟಿದ ನೀತಿ ಸಂಹಿತೆ ಬಿಸಿ! 
ರಾಜಕೀಯ

ಹನುಮಂತನಿಗೂ ತಟ್ಟಿದ ನೀತಿ ಸಂಹಿತೆ ಬಿಸಿ!

ರಾಜ್ಯದೆಲ್ಲೆಡೆ ಈಗ ಚುನಾವಣಾ ಕಾವು ಏರುತ್ತಿದೆ. ನೀತಿ ಸಂಹಿತೆಯ ಬಿಸಿ ಎಲ್ಲೆಡೆ ಹರಡಿದೆ.

ಬೆಂಗಳೂರು: ರಾಜ್ಯದೆಲ್ಲೆಡೆ ಈಗ ಚುನಾವಣಾ ಕಾವು ಏರುತ್ತಿದೆ. ನೀತಿ ಸಂಹಿತೆಯ ಬಿಸಿ ಎಲ್ಲೆಡೆ ಹರಡಿದೆ. ವಿಶೇಷವೆಂದರೆ ಕೇವಲ ರಾಜಕಾರಣಿಗಳಿಗೆ, ಮತದಾರರಿಗೆ ಮಾತ್ರ ಈ ನೀತಿ ಸಂಹಿತೆ ಅಡ್ಡಿಯಾಗಿಲ್ಲ, ಹನುಮಂತನಿಗೂ ಇದರ ಶಾಖ ತಾಗಿದೆ!
ಬೆಂಗಳೂರಿನ ಎಚ್‌ಬಿಆರ್‌ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ  62 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹ  ಸಾಗಣೆಗೂ ನೀತಿ ಸಂಹಿತೆ ಅಡ್ಡಿಯಾಗಿತ್ತು.
ಬೆಂಗಳೂರಿನಿಂದ 35 ಕಿಮೀ ದೂರದ ಹೊಸಕೋಟೆ ಸಮೀಪ ಚುನಾವಣಾಧಿಕಾರಿಗಳು ವಿಗ್ರಹ ಸಾಗಣೆಯಲ್ಲಿ ತೊಡಗಿದ್ದ ಟ್ರಾಲಿಯನ್ನು ತಡೆದಿದ್ದರು.
ಸೋಮವಾರ ರಾತ್ರಿ ಅಧಿಕಾರಿಗಳು 300 ಚಕ್ರಗಳ ಈ ದೊಡ್ಡ ಗಾತ್ರದ ವಾಹನ ತಡೆದು ತಪಾಸಣೆ ನಡೆಸಿದ್ದಾರೆ. ಮತ್ತು ವಿಗ್ರಹ ಸಾಗಣೆಯನ್ನು ನಿಷೇಧಿಸಿದ್ದಾರೆ. ಆ ನಂತರ ಮಂಗಳವಾರ ಮಧ್ಯಾಹ್ನದ ವೇಳೆಗೆ ಚುನಾವಣಾ ಆಯೋಗವು ಮಧ್ಯ ಪ್ರವೇಶಿಸಿ  ಆಂಜನೇಯ ವಿಗ್ರಹ ಸಾಗಣೆಗೆ ಅನುಮತಿಸಿದೆ. 
ಆಂಜನೇಯನ ವಿಗ್ರಹವಿದ್ದ ವಾಹನ ರಸ್ತೆಯಲ್ಲೇ ನಿಂತ ಕಾರಣ ಹಳೆ ಮದ್ರಾಸ್‌ ರೋಡ್ ನಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು.
ಹೀಗೆ  ಆಂಜನೇಯನಿಗೂ ಚುನಾವಣೆ ನೀತಿ ಸಂಹಿತೆಯ ಶಾಖ ತಗುಲಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT