ರಾಜಕೀಯ

ಸುಮ್ಮನೆ ಸ್ಟೀಲ್ ಬ್ರಿಡ್ಜ್‌ಗೆ ವಿರೋಧಿಸುವುದಲ್ಲ, ಪರಿಹಾರಕ್ಕೆ ಸೂಕ್ತ ಸಲಹೆ ನೀಡಿ: ಡಿಸಿಎಂ ಪರಮೇಶ್ವರ್

Vishwanath S
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯ ಸ್ಟೀಲ್ ಬ್ರಿಡ್ಜ್ ಯೋಜನೆಗೆ ನೀವು ವಿರೋಧಿಸುವುದಾದರೆ, ಅದನ್ನು ಪರಿಹರಿಸಬಹುದಾದ ಸಲಹೆಯನ್ನು ನೀಡಿ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಮನವಿ ಮಾಡಿದ್ದಾರೆ. 
ಸ್ಟೀಲ್ ಬ್ರಿಡ್ಜ್‌ ಯೋಜನೆಯಿಂದ ಬಸವೇಶ್ವರ ಸರ್ಕಲ್ ನಿಂದ ಹೆಬ್ಬಾಳದ ಇಸ್ಟೀಂ ಮಾಲ್ ವರೆಗಿನ ಜನರಿಗೆ ಉಪಯೋಗವಾಗಲಿದ್ದು ಸಂಚಾರ ದಟ್ಟನೆ ಕಡಿಮೆಯಾಗುತ್ತದೆ. ಈ ಯೋಜನೆಯನ್ನು ಪಾರದರ್ಶಕವಾಗಿ ಮಾಡಲಾಗುತ್ತದೆ. ಇದನ್ನು ಎಲಿವೆಟೆಡ್ ಕಾರಿಡಾರ್ ಎಂದು ಕರೆಯಬಹುದು. ಆದರೆ ಜನರು ಇದನ್ನು ಸ್ಟೀಲ್ ಬ್ರಿಡ್ಜ್ ಎಂದು ಕರೆಯುತ್ತಿದ್ದಾರೆ. 
ಈ ಯೋಜನೆಯಿಂದ ಕಿಕ್ ಬ್ಯಾಕ್ ಪಡೆಯಲಾಗುತ್ತದೆ ಎಂದು ಆರೋಪಿಸುವವರು ಸಂಚಾರಿ ದಟ್ಟನೆ ಕಡಿಮೆ ಮಾಡುವ ಸಲಹೆಯನ್ನು ನೀಡಿ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ಸರ್ಕಾರದ ಯೋಜನೆಯನ್ನು ಈ ಹಿಂದೆ ಸಾರ್ವಜಿಕರು ಹಾಗೂ ರಾಜಕೀಯ ಪಕ್ಷಗಳ ತೀವ್ರ ವಿರೋಧದಿಂದ ನಿಂತುಹೋಗಿತ್ತು. ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮತ್ತೆ ಈ ಯೋಜನೆಯನ್ನು ಜಾರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ.
SCROLL FOR NEXT