ರಾಜಕೀಯ

ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಇಬ್ಬರೂ ಕಾರಣ; ವಿಶ್ವನಾಥ್

Shilpa D

ನವದೆಹಲಿ: ಮೈತ್ರಿ ಸರ್ಕಾರದ ಪತನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಮಾಜಿ  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯೂ ಕಾರಣ ಎಂದು ಜೆಡಿಎಸ್ ಅನರ್ಹ ಶಾಸಕ  ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ  ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ  ಇಬ್ಬರು  ಸಮಬಲರು. ಕಾಂಗ್ರೆಸ್ ಶಾಸಕರ ಸಮಸ್ಯೆಗಳನ್ನು ಸಿದ್ದರಾಮಯ್ಯ ಕೇಳಲಿಲ್ಲ. ಜೆಡಿಎಸ್ ಶಾಸಕರನ್ನು ಕುಮಾರಸ್ವಾಮಿ ಕೇಳಲಿಲ್ಲ. ಯಾರೊಂದಿಗೂ ಚರ್ಚಿಸದೇ ಮೈತ್ರಿ ಸರ್ಕಾರ ರಚನೆ  ಮಾಡಿದ್ದೆ ತಪ್ಪು ಎಂದು ಆರೋಪಿಸಿದರು. 

ಸರ್ಕಾರ ಪತನವಾದ ಬಳಿಕ ಇಬ್ಬರು ಕೆಸರೆರಚಾಟದಲ್ಲಿ  ತೊಡಗಿದ್ದು ಪರಸ್ಪರ ಒಬ್ಬರನ್ನೊಬ್ಬರು ಆರೋಪಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಪಕ್ಷ  ರಾಜಕಾರಣ ಇಲ್ಲದ ಕಾರಣ ಪಕ್ಷಾಂತರಕ್ಕೆ ಕಾರಣವಾಗಿದೆ. ಯಾವುದೇ ಒಂದು ಪಕ್ಷ ಕುಟುಂಬ, ವ್ಯಕ್ತಿ, ಒಂದು ಗುಂಪಿಗೆ ಮಾತ್ರ ಸೀಮಿತವಾದಲ್ಲಿ ಪಕ್ಷಾಂತರ ಆಗುವುದು ಸಹಜ ಎಂದು  ಪರೋಕ್ಷವಾಗಿ ಹೆಚ್.ಡಿ.ದೇವೇಗೌಡರನ್ನು ವಿಶ್ವನಾಥ್ ಕುಟುಕಿದರು.

SCROLL FOR NEXT